ಹೊನ್ನಾವರ: ಆಕಸ್ಮಿಕವಾಗಿ ಬೆಂಕಿ ಅನಾಹುತ ಸಂಭವಿಸಿ ಮನೆಯ ಮೇಲ್ಛಾವಣಿ ಹಾಗೂ ಗೃಹೋಪಯೋಗಿ ವಸ್ತುಗಳು ಭಸ್ಮವಾಗಿ ಹಾನಿಗೊಳಗಾದ ತಾಲೂಕಿನ ಹೊಸಾಕುಳಿ ಮಕ್ಕಿಗದ್ದೆಯ ಸುಬ್ರಾಯ ಗೌಡ ಅವರ ಮನೆಗೆ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಆರ್ಥಿಕ ನೆರವು ನೀಡಿದರು. ಮುಗ್ವಾ ಶಕ್ತಿಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ, ಎನ್. ಎಸ್. ಹೆಗಡೆ, ಸುರೇಶ ಶೆಟ್ಟಿ ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.
Leave a Comment