ಕಾರವಾರ: ಜಿಲ್ಲಾಡಳಿತ, ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅಣುಶಕ್ತಿ ಸ್ಥಾಪನೆಯ ಸಂಸ್ಥಾಪಕ ನಿರ್ದೇಶಕರಾದ ಡಾ. ಹೋಮಿ ಜಹಾಂಗೀರ್ ಭಾಬಾ ಅವರ 108ನೇ ಜನ್ಮದಿನಾಚರಣೆ ಅಂಗವಾಗಿ ಇತ್ತಿಚಿಗೆ ಅಣುವಿದ್ಯುತ್ ಸ್ಥಾವರ ಕೈಗಾದಲ್ಲಿ “ವಿಚಕ್ಷಣ ಜಾಗೃತಿ ಸಪ್ತಾಹ”ದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರವಾರ, ಅಂಕೋಲಾ ಹಾಗೂ ಜೋಯಿಡಾ ತಾಲೂಕುಗಳ ಸರಕಾರಿ ಪ್ರೌಢಶಾಲೆಗಳ 10ನೇ ತರಗತಿಯ 60 ವಿದ್ಯಾರ್ಥಿಗಳು ಹಾಗೂ 6 ಜನ ಶಿಕ್ಷಕರು ಮತ್ತು ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರದ ಇಬ್ಬರು ಸಿಬ್ಬಂದಿಗಳು ವಿಚಕ್ಷಣ ಜಾಗೃತಿ ಸಪ್ತಾಹ ಕಾರ್ಯಕ್ರದಲ್ಲಿ ಪಾಲ್ಗೊಂಡರು. NPCIL ಕೈಗಾದ ಹಿರಿಯ ಅಧಿಕಾರಿಗಳಾದ ಆಲ್ಡ್ರಿನ್ ಡಿಸೋಜಾ, ರವಿ ಬಿಡಗಿ ಹಾಗೂ ಯು.ಪಿ.ಎಸ್ ಕುಮಾರ್ ಇವರು ಅಣುವಿದ್ಯುತ್ ಸ್ಥಾವರ ಕೈಗಾದ ವಿದ್ಯುತ್ ಉತ್ಪಾದನ ಕಾರ್ಯ, ಕ್ರಿಯಾಕಾರಿ ಕಟ್ಟಡ (Reactor building)ನ ಸುರಕ್ಷತೆ, ಅಣುವಿದ್ಯುತ್ ಉತ್ಪಾದನೆಯಿಂದ ಆಗುವ ಉಪಯೋಗಗಳನ್ನು ಸವಿಸ್ತಾರವಾಗಿ ತಿಳಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮಗೆ ಇರುವ ಸಂದೇಹ, ಪ್ರಶ್ನೆಗಳಿಗೆ ಅಲ್ಲಿನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಉತ್ತರಗಳನ್ನು ಪಡೆದುಕೊಂಡರು.
Leave a Comment