ಹೊನ್ನಾವರ ತಾಲೂಕಿನ ಶರಾವತಿ (ಟಪ್ಪರ್) ಸರ್ಕಲ್ನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಪ್ರತಿಭಟನಾ ಧರಣಿಯನ್ನು ಜೆ.ಡಿ.ಎಸ್. ಪಕ್ಷದಿಂz ÀದಿÀ: 13- ರಂದು ಸೋಮವಾರ ಬೆಳಿಗ್ಗೆ 10-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ,
ಕೇಂದ್ರ ಸರ್ಕಾರ ಅಡುಗೆ ಅನಿಲ ದರವನ್ನು ಏರಿಕೆಯ ವಿರುದ್ಧ, ಕುಡಿಯುವ ನೀರು, ರಸ್ತೆ, ಮಂಕಿ ಏತ ನೀರಾವರಿ ಮೀನುಗಾರರ ಹಾಗೂ ರೈತರ ಸಾಲ ವiನ್ನಾ, 24 ಗಂಟೆ ವಿದ್ಯುತ್ ಪೂರೈಕೆ ಅತಿಕ್ರಮಣ ಜಾಗ ಮಂಜೂರಿ, ಅಡಿಕೆ ಹಾಗೂ ತೆಂಗು ಬೆಳೆಗಾರರ ಸಮಸ್ಯೆ ಪರಿಹರಿಸುವುದು ಇನ್ನಿತರ ಮೂಲ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸುವ ಸಲುವಾಗಿ ಹಮ್ಮಿಕೊಂಡಿದ್ದು ಅಂದಿನ ಪ್ರತಿಭಟನೆಗೆ ಜೆ.ಡಿ.ಎಸ್.ನ ರಾಜ್ಯ ಮುಖಂಡರಾದ ಗಣಪಯ್ಯ ಗೌಡ ಜೆ.ಡಿ.ಎಸ್.ನ ರಾಜ್ಯ ಕಾರ್ಯದರ್ಶಿಯಾದ ಜಿ.ಎನ್. ಗೌಡ ಜಿಲ್ಲಾಧ್ಯಕ್ಷರಾದ ಬಿ.ಆರ್. ನಾಯ್ಕ, ಇನಾಯಿತುಲ್ಲಾ ಶಾಬಂದ್ರಿ, ಜೆ.ಡಿ.ಎಸ್ ಮುಖಂಡರುಗಳಾದ ಪಿ.ಟಿ. ನಾಯ್ಕ, ಟಿ.ಟಿ. ನಾಯ್ಕ, ತಿಮ್ಮಪ್ಪ ಮೇಸ್ತ, ಇನ್ನಿತರ ಮುಖಂಡರುಗಳು ಉಪಸ್ಥಿತರಿರುವರು. ಅದೇ ದಿನ 11-00 ಗಂಟೆಗೆ ಸೊಶಿಯಲ್ ಕ್ಲಬ್ನಲ್ಲಿ ಪಕ್ಷದ ಸಂಘಟನೆ ಹಾಗೂ ಪದಾಧಿಕಾರಿಗಳ ನೇಮಕಾತಿ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮುಖಂಡರುಗಳು, ಅಭಿಮಾನಿಗಳು ಭಾಗವಹಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.
Leave a Comment