ಗೋಕರ್ಣ:
ಇಲ್ಲಿನ ಮುಖ್ಯ ಕಡಲತೀರದಲ್ಲಿ ನೀರುಪಾಲಾಗುತ್ತಿದ್ದ ಪ್ರವಾಸಿಗರನ್ನು ಉತ್ತರ ಕನ್ನಡ ಜಿಲ್ಲಾಡಳಿತ ನೇಮಿಸಿದ ಜೀವ ರಕ್ಷಕ ಸಿಬ್ಬಂದಿ ಶನಿವಾರ ರಕ್ಷಿಸಿದರು.
ಬೆಂಗಳೂರಿನಿಂದ ಏಳು ಜನ ವಿದ್ಯಾರ್ಥಿಗಳು ವಾರಾಂತ್ಯದ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿದ್ದರು. ಇಲ್ಲಿನ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ವೇಳೆ ಇಬ್ಬರು ಪ್ರವಾಸಿಗರು ಕೊಚ್ಚಿ ಹೋದರು. ಸಮಯ ಪ್ರಜ್ಞೆ ಮೆರೆದ ಜೀವರಕ್ಷಕ ಸಿಬ್ಬಂದಿ ಮೋಹನ ಅಂಬಿ, ರಾಜು ಅಂಬಿ, ಪುರುಷೋತ್ತಮ ಹರಿಕಂತ್ರ ಹಾಗೂ ಚಂದ್ರಕಾಂತ ಸ್ಪೀಡ್ಬೈಕ್ ಹಾಗೂ ಬೋಟ್ ಮೂಲಕ ತೆರಳಿ ಅಪಾಯದಲ್ಲಿದ್ದವರನ್ನು ರಕ್ಷಿಸಿದರು. ಜೀವ ರಕ್ಷಕ ಸಿಬ್ಬಂದಿ ಪ್ರಯತ್ನದಿಂದ ಉತ್ತರ ಪ್ರದೇಶದ ರಾಮರೇಶ್ ಯಾದವ್ ಹಾಗೂ ಮದ್ಯಪ್ರದೇಶದ ಕಮಲೇಶ್ ಕುಮಾರ್ ಎಂಬಾತರ ಜೀವ ಉಳಿದಿದೆ. ಮೂರು ತಿಂಗಳ ಹಿಂದೆ ಜಿಲ್ಲಾಡಳಿತ ಜೀವ ರಕ್ಷಕ ತರಭೇತಿ ನಡೆಸಿ ಹಲವು ಉದ್ಯೋಗ ಸೃಷ್ಟಿಗೆ ಕಾರಣವಾಗಿತ್ತು. ಪ್ರಮುಖ ಸ್ಥಳಗಳಲ್ಲಿ ಸಿಬ್ಬಂದಿ ನೇಮಕ ಮಾಡಿರುವ ಜಿಲ್ಲಾಡಳಿತ ಪ್ರವಾಸಿಗರಿಗೆ ಸಹಾಯ ಮಾಡುತ್ತಿದೆ.
Leave a Comment