ಕಾರವಾರ: ಕರಾವಳಿ ಉತ್ಸವ ಅಂಗವಾಗಿ ಏರ್ಪಡಿಸಲಾಗಿರುವ ವನ್ಯಜೀವಿ (Wild Life) ಹಾಗೂ ಪ್ರಕೃತಿ (Nature) ಛಾಯಾಚಿತ್ರ ಪ್ರದರ್ಶನ ನಿಮಿತ್ಯ ಛಾಯಾಚಿತ್ರ ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಜಿಲ್ಲೆಯ ಛಾಯಾಚಿತ್ರಕಾರರು ಜಿಲ್ಲೆಯಲ್ಲಿ ತಾವು ಸ್ವತಃ ಸೆರೆಹಿಡಿದಿರುವ ಅತ್ಯುತ್ತಮ 90 ಸೆಂ.ಮೀ* 60 ಸೆಂ.ಮೀ ಅಳತೆಯ 2 ಛಾಯಾ ಚಿತ್ರಗಳನ್ನು ಅವುಗಳ ಕೆಳಭಾಗದಲ್ಲಿ ಸೂಕ್ತವಾಗಿ ಹೆಸರಿಸಿ, ಮುದ್ರಿಸಿ (Mat finishing) ಪ್ರೇಮ್ ಹಾಕಿಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸಬೇಕು.
ಆಸಕ್ತರು ನವೆಂಬರ 25ರೊಳಗೆ ದೂರವಾಣಿ 8277933002/9480040025 ಇಲ್ಲಿಗೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಛಾಯಾಚಿತ್ರವನ್ನು ತಲುಪಿಸಿದ ಛಾಯಾಗ್ರಾಹಕರಿಗೆ ಮುದ್ರಣ ಹಾಗೂ ಫ್ರೇಮ್ ಹಾಕಿಸಿದ ವೆಚ್ಚವಾಗಿ ರೂ. 2,000 ಜಿಲ್ಲಾಧಿಕಾರಿ ಕಚೇರಿಯಿಂದ ನೀಡಲಾಗುವುದು. ಛಾಯಾ ಚಿತ್ರಗಳನ್ನು ಮರಳಿಸಲಾಗುವುದಿಲ್ಲ. ಅತ್ಯುತ್ತಮ ಛಾಯಾ ಚಿತ್ರಗಳಿಗೆ ಪ್ರಥಮ ರೂ. 10,000/- ದ್ವಿತೀಯ ರೂ. 7500/- ಹಾಗೂ ತೃತೀಯ ರೂ. 5000/- ಬಹುಮಾನ ನೀಡಲಾಗುವುದು ಎಂದು ಛಾಯಾಚಿತ್ರ ಪ್ರದರ್ಶನ ಸಮಿತಿಯ ಅಧ್ಯಕ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment