ಕಾರವಾರ: ಮೀನುಗಾರಿಕಾ ಇಲಾಖೆಯಿಂದ ನಡೆಸಲಾದ ದೋಣಿ ಸಮೀಕ್ಷೆಯಲ್ಲಿ ಜಿಲ್ಲೆಯ ಕೆಲ ಮೀನುಗಾರರ ಹೆಸರು ತಪ್ಪಿದ್ದು, ಅವರಿಗೂ ರಿಯಾಯತಿ ದರದಲ್ಲಿ ಮೀನುಗಾರಿಕಾ ದೋಣಿಗಳಿಗೆ ಅವಷ್ಯವಿರುವ ಸೀಮೆಎಣ್ಣೆ ವಿತರಿಸುವಂತೆ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಪೆಡರೇಶನ್ ಅಧ್ಯಕ್ಷ ಗಣಪತಿ ಆರ್ ಮಾಂಗ್ರೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲಗೆ ಒತ್ತಾಯಿಸಿದರು.
ಸರ್ಕಾರವೂ ಬಡ ಮೀನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಿಯಾಯತಿ ದರದಲ್ಲಿ ಸೀಮೆಎಣ್ಣೆ ವಿತರಿಸುತ್ತಿದೆ. ಮಳೆಗಾಲದ ನಂತರ ದೋಣಿಗಳ ಸಮೀಕ್ಷೆ ನಡೆಸಿ ಮೀನುಗಾರರಿಗೆ ಸೀಮೆಎಣ್ಣೆ ಪೂರೈಸಲಾಗುತ್ತದೆ. 2017ರ ಜುಲೈ ಕೊನೆವಾರದಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅಧಿಕಾರಿಗಳು ಕಾಟಾಚಾರಕ್ಕೆ ಈ ಕೆಲಸ ಮಾಡಿದಂತಿದೆ. ಸಮೀಕ್ಷೆಯಲ್ಲಿ ಹಲವು ಪಲಾನುಭವಿಗಳ ಹೆಸರು ಕೈ ತಪ್ಪಿದೆ. ಹೀಗಾಗಿ ಮಹತ್ವಾಕಾಂಕ್ಷಿ ಯೋಜನೆಯಿಂದ ನೈಜ ಪಲಾನುಭವಿಗಳು ವಂಚಿತರಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು. ಬಡ ಮೀನುಗಾರರಿಗೆ ಅವಷ್ಯವಿರುವ ಸೀಮೆಎಣ್ಣೆ ವಿತರಿಸದಿದ್ದರೆ ಮೀನುಗಾರಿಕೆ ನಡೆಸುವದು ಕಷ್ಟವಾಗುತ್ತದೆ. ಅವರ ಕುಟುಂಬ ಬೀದಿಗೆ ಬರುತ್ತದೆ. ಇದರಿಂದ ಮೀನುಗಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದ್ದು, ಇದನ್ನು ತಪ್ಪಿಸಲು ಎಲ್ಲಾ ಬಡ ಮೀನುಗಾರರಿಗೂ ಯೋಜನೆ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು. ಸಮೀಕ್ಷೆಯಿಂದ ಕೈ ತಪ್ಪಿದ ದೋಣಿಗಳನ್ನು ಲೆಕ್ಕಕ್ಕೆ ಸೇರಿಸಿ ಅವರಿಗೂ ಸೀಮೆಎಣ್ಣೆ ದೊರೆಯುವಂತೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.
Leave a Comment