ಕಾರವಾರ: ದೈವಜ್ಞ ಸೇವಾ ಸಂಘದಿಂದ ದೈವಜ್ಞ ಸಮಾಜದವರಿಗೆ ಮೊದಲ ವಧು-ವರರ ಮೇಳವನ್ನು ಡಿ.17 ರಂದು ನಗರದ ದೈವಜ್ಞಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಉಲ್ಲಾಸ ನೇತಲಕರ ಹೇಳಿದರು.
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉದ್ಯೋಗ, ವ್ಯಾಪಾರ, ಶಿಕ್ಷಣ ಹೀಗೆ ವಿವಿಧ ಕಾರಣಗಳಿಗೆ ದೈವಜ್ಞ ಸಮಾಜದವರು ಹೊರ ಜಿಲ್ಲೆ, ರಾಜ್ಯಗಳಲ್ಲಿ ಹಂಚಿಹೋಗಿದ್ದಾರೆ. ಇದರಿಂದ ವೈವಾಹಿಕ ದಿನಗಳಲ್ಲಿ ವಧು ವರರನ್ನು ಹುಡುಕುವುದು ದೊಡ್ಡ ಸಮಸ್ಯೆಯಾಗಿದೆ. ಅಲ್ಲದೆ ಸಂಬಂಧಿಕರೇ ಆದರು ಕೂಡ ಸಂವನ ಸಂಪರ್ಕವಿಲ್ಲದೆ ಅದೇಷ್ಟೋ ಜನರಿಗೆ ಮದುವೆ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಕಾರಣದಿಂದ ದೈವಜ್ಞ ಸಮಾಜದವರನ್ನು ಒಂದು ಗೂಡಿಸಿ ಒಂದೇ ವೇದಿಕೆಯಲ್ಲಿ ನಿಮಗೆ ಇಷ್ಟವಾದ ವರ ಅಥವಾ ವಧುಗಳನ್ನು ಆಯ್ಕೆ ಮಾಡಿಕೊಳ್ಳಲು ಮುಕ್ತ ಅವಕಾಶವನ್ನು ಸಂಘದಿಂದ ಕಲ್ಪಿಸಲಾಗಿದೆ ಎಂದು ಹೇಳಿದರು.
ಮೊದಲ ಭಾರಿ ಆಯೋಜಿಸುತ್ತಿರುವ ಮೇಳವನ್ನು ಯಶಸ್ವಿಯಾಗಿ ನಡೆಸಲು ಈಗಾಗಲೇ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಮೇಳದಲ್ಲಿ ಯುವಕ,ಯುವತಿಯರು, ವಿಧವೆಯರು, ವಿದುರರು, ವಿವಾಹ-ವಿಚ್ಚೇದಿತರು ಅಷ್ಟೆ ಅಲ್ಲದೆ ಅಂಗವಿಕಲರೂ ಕೂಡ ಪಾಲ್ಗೊಂಡು ತಮಿಗಿಷ್ಟಬಂದವರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮೇಳಕ್ಕೆ ಆಗಮಿಸುವ ವಧು ಅಥವಾ ವರನು ತಮ್ಮ ಪಾಲಕರೊಂದಿಗೆ ಆಗಮಿಸಬೇಕು. ಭಾಗವಹಿಸುವವರು 500 ರು ನೀಡಿ ಅರ್ಜಿಯನ್ನು ಸಲ್ಲಿಸಬೇಕು. ಬೇರೆ ಸ್ಥಳಗಳಿಂದ ಬರುವವರು 500 ದೈವಜ್ಞ ಸೇವಾ ಸಂಘ(ರಿ) ಹೆಸರಿಗೆ ಡಿಡಿ ತೆಗೆದು ದೈವಜ್ಞ ಭವನ, ಸಾಯಿ ಮಂದಿರ ರಸ್ತೆ, ಕಾರವಾರ ಈ ವಿಳಾಸಕ್ಕೆ ಅರ್ಜಿ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಶ್ರೀಕಾಂತ ವೆರ್ಣೇಕರ್ 9686921428, ಉದಯಕಾಂತ ಅಣ್ವೇಕರ್ 9448964862 ಅವರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.
ವಿದ್ಯಾಧರ್ ಭಟ್, ರವಿ ಕುಡ್ತಲಕರ್, ಉದಯಕಾಂತ ಅಣ್ವೇಕರ್, ಉಲ್ಲಾಸ ರಾಯ್ಕರ್, ವಿಲಾಸ ರೇವಣಕರ್ ಇದ್ದರು.
Leave a Comment