ಹಳಿಯಾಳ: ತಾಲೂಕಿನ ಮಾಗವಾಡ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಬೆಲೆಬಾಳುವ ಅಕೇಶಿಯಾ, ಸೀಸಂ, ಸಾಗವಾನಿ ಹಾಗೂ ಜಂಗ್ಲಿ ಕಟ್ಟಿಗೆಯನ್ನು ಕಾನೂನು ಬಾಹಿರವಾಗಿ ಕಡಿದು ಸಾಗಿಸುತ್ತಿದ್ದ ಅದೇ ಗ್ರಾಮದ ಮನೋಹರ ಕೃಷ್ಣಾ ಕುಂಬಾರ ಎಂಬಾತನನ್ನು ಮಾಲು ಸಮೇತ ಬಂಧಿಸುವಲ್ಲಿ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸುಮಾರು 35ಸಾವಿರಕ್ಕೂ ಅಧಿಕ ಬೆಲೆಯ ಬೆಲೆಬಾಳುವ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಡಿಸಿಎಫ್ ರಮೇಶ ಹಾಗೂ ಎಸಿಎಫ್ ಸಂತೋಷ ಕೆಂಚಪ್ಪನವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಪ್ರಸನ್ನ ಸುಬೇದಾರ ಹಾಗೂ ಸಿಬ್ಬಂದಿಗಳಾದ ದೀಲಿಪ್ ನಾಯ್ಕ, ಯಲ್ಲಾನಿಂಗ ಬಾಣಸೆ, ಸಿದ್ದಾರೂ ಬಿಣಕಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment