ಹೊನ್ನಾವರ:
ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತಿದೆ. ಆ ಮೂಲಕ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ನಿರ್ಮಾಣಗೊಳ್ಳುತ್ತಿದ್ದಾರೆ. ಇಂಥಹ ಶ್ಲಾಘನೀಯ ಕೆಲಸವನ್ನು ಹೊನ್ನಾವರದ ಸೇವಾದಳದ ಶಾಖಾ ನಾಯಕ- ನಾಯಕಿಯರು ಮಾಡುತ್ತಿದ್ದಾರೆ ಎಂದು ಶಾಸಕ ಮಂಕಾಳು ವೈದ್ಯರವರು ಹೇಳಿದರು. ಹೊನ್ನಾವರ ತಾಲೂಕಾ ಪುನಃಶ್ಚೇತನ ಶಿಬಿರದ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದರು.ಹೊನ್ನಾವರ: ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತಿದೆ. ಆ ಮೂಲಕ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ನಿರ್ಮಾಣಗೊಳ್ಳುತ್ತಿದ್ದಾರೆ. ಇಂಥಹ ಶ್ಲಾಘನೀಯ ಕೆಲಸವನ್ನು ಹೊನ್ನಾವರದ ಸೇವಾದಳದ ಶಾಖಾ ನಾಯಕ- ನಾಯಕಿಯರು ಮಾಡುತ್ತಿದ್ದಾರೆ ಎಂದು ಶಾಸಕ ಮಂಕಾಳು ವೈದ್ಯರವರು ಹೇಳಿದರು. ಹೊನ್ನಾವರ ತಾಲೂಕಾ ಪುನಃಶ್ಚೇತನ ಶಿಬಿರದ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದರು. ಅತಿಥಿಗಳಾದ ಕಾರವಾರ ಶೈಕ್ಷಣಿಕ ಜಿಲ್ಲಾ ಭಾರತ ಸೇವಾ ದಳದ ಅಧ್ಯಕ್ಷರಾದ ಯೋಗೇಶ ಆರ್ ರಾಯ್ಕರ್ ಮಾತನಾಡಿ, ರಾಜ್ಯದಲ್ಲಿ ನಮ್ಮ ಜಿಲ್ಲೆ ನೋಂದಾಯಿತ ಸೇವಾದಳ ಶಾಖೆಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಈ ವರ್ಷ ಜಿಲ್ಲಾ ಮಟ್ಟದ ಮಕ್ಕಳ ಮೇಳ ಸಂಘಟಿಸಿ ವಿದ್ಯಾರ್ಥಿಗಳಲ್ಲಿ ಏಕತಾ ಪ್ರಜ್ಞೆ ಬೆಳೆಸಲಾಗುವುದು ಎಂದರು. ತಾಲೂಕಾ ಸಮಿತಿಯ ಸದಸ್ಯರಾದ ಅಣ್ಣಪ್ಪ ಎಂ ನಾಯ್ಕ, ಮಂಕಿ ಇವರು ಮಾತನಾಡಿ ಸೇವಾದಳ ಉತ್ತಮ ಸಿದ್ದಾಂತ ಹೊಂದಿರುವ ಸಂಘಟನೆಯಾಗಿದ್ದು, ವಿದ್ಯಾರ್ಥಿ ಶಿಕ್ಷಕರ ಸಂಬಂಧ ಉತ್ತಮ ಪಡಿಸುತ್ತಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಸ್.ನಾಯ್ಕ ಮಾತನಾಡಿ ಸಂಘಟನೆಗೆ ಶುಭ ಹಾರೈಸಿದರು. ಬಿ.ಆರ್.ಸಿಯ ಸಮನ್ವಯಾಧಿಕಾರಿ ಜಿಎಸ್ನಾಯ್ಕ ಸಂಘಟನೆಯ ಚಟುವಟಿಕೆಯನ್ನು ಮೆಚ್ಚಿ ಮಾತನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ವಾಮನ ಎಸ್ ನಾಯ್ಕ ಮಾತನಾಡಿಎಸ್.ಎಸ್.ಎಲ್.ಸಿಯಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಹೇಳಿದರು. ಅಂತೆಯೇ ಸೇವಾದಳದಲ್ಲಿ ನಿರಂತರವಾಗಿ ಶಾಖಾನಾಯಕ ನಾಯಕರಾಗಿರುವವರಿಗೆ ಒಂದು ಇನ್ಕ್ರಿಮೆಂಟ್ ನೀಡುವಂತೆ ಮತ್ತು ಸೇವಾದಳದ ಸ್ವಯಂಸೇವಕರಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ. 5ರಷ್ಟು ಮೀಸಲಾತಿ ಕೊಡುವಂತ್ತಾಗಬೇಕು ಎಂದರು. ತಾಲೂಕಾ ಸಮಿತಿಯ ಸದಸ್ಯರಾದ ಉದಯ ಎಂ. ನಾಯ್ಕ ಮೂಡ್ಕಣಿ, ಪಾಂಡುರಂಗ ಎಸ್ ನಾಯ್ಕ, ಐ.ವಿ.ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಸ್ ಎನ್ ಗೌಡ, ಮಾಧ್ಯಮಿಕ ನೌಕರ ಸಂಘದ ಮನೋಹರ ನಾಯ್ಕ ಸಹಕಾಂiÀರ್iದರ್ಶಿ ವಿದ್ಯಾ ಹೆಗಡೆ ಉಪಸ್ಥಿತರಿದ್ದರು. ಆರಂಭದಲ್ಲಿ ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಉದಯ ಆರ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಸಂಘಟಕ ಡಾ.ಸುರೇಶ್ ಎಂ ತಾಂಡೇಲ್ ವಂದಿಸಿದರು.
Leave a Comment