ಹೊನ್ನಾವರದಲ್ಲಿ, ಜರುಗಿದ ಕರಾವಳಿ ಉತ್ಸವದಲ್ಲಿ ಭಟ್ಕಳದ ಝೇಂಕಾರ ಮೆಲೋಡಿಸ್ನವರ ರಸಮಂಜರಿಯ ಮೂರು ಘಂಟೆಯ ಕಾಲ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಅನುರಾಧಾ ಭಟ್ ಇವರು ತಮ್ಮ ಜನಪ್ರಿಯ ಚೌಕಾ ಚಿತ್ರದ ಅಪ್ಪಾ ಐ ಲವ್ ಯು ಅಪ್ಪಾ ಗೀತೆಯೊಂದಿಗೆ ಪ್ರಾರಂಭಿಸಿ ಹತ್ತಾರು ಜನಪ್ರಿಯ ಗೀತೆಗಳನ್ನು ಹಾಡಿ ರಂಜಿಸಿದರು. ಜೊತೆಯಲ್ಲಿ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ಅಜಯ ವಾರಿಯರ್ ತಮ್ಮ ಮೆಡ್ಲಿ ಗೀತೆಗಳ ಮೂಲಕ ಅನುರಾಧಾ ಭಟ್ ಇವರಿಗೆ ಜೊತೆಯಾದರು. ನಮ್ಮ ಜಿಲ್ಲೆಯ ಬಹುಮುಖ ಪ್ರತಿಭೆಯ ಗಾಯಕ ರಾಜಾರಾಮ ಪ್ರಭು ಡ್ಯೂಯಲ್ ಧ್ವನಿಯಲ್ಲಿ ಹಾಡಿದ ಓ ಪ್ರಿಯತಮಾ ಗೀತೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತು. ಅಂತರಾಷ್ಟ್ರೀಯ ಖ್ಯಾತಿಯ ಗಾಯಕ ಸಂದೇಶ, ರಮೇಶ ಗಾಯಕಿ ಗೀತಾ, ಗುರುಪ್ರಿಯಾ ಹಾಡಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಫಲರಾದರು. ಪ್ರಸನ್ನ ಪ್ರಭು ಕಾರ್ಯಕ್ರಮವನ್ನು ಉತ್ತಮವಾಗಿ ನಿರೂಪಿಸಿದರು. ತಡ ರಾತ್ರಿಯವರೆಗೂ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾ ರಸಮಂಜರಿಯ ಸವಿಯನ್ನು ಸವಿದರು. ಝೇಂಕಾರ ತಂಡದ ಕಾರ್ಯಕ್ರಮದ ಪೂರ್ವದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ವೇದಿಗೆ ಕಲ್ಪಸಲಾಗಿತ್ತು. ಭರತನಾಟ್ಯ, ಫಿಲ್ಮಿನೃತ್ಯ, ಏಕಪಾತ್ರಾಭಿನಯ, ಸುಗಮ ಸಂಗೀತ, ಜಾನಪದ ಗೀತೆ ಮುಂತಾದ ಕಲಾವೈವಿಧ್ಯತೆಗಳು ವೇದಿಕೆಯಲ್ಲಿ ಅನಾವರಣಗೊಂಡವು.
Leave a Comment