ಹೊನ್ನಾವರ.ಬೆಂಗಳೂರು ಗ್ರಾಮಾಂತರ ಪ್ರದೇಶದ ಹೊಸಕೋಟೆಯ ಚೆನ್ನಬೈರವ ಕ್ರೀಡಾಗಂಣದಲ್ಲಿ ನಡೆದ 14 ವರ್ಷದ ಒಳಗಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದಕ್ರೀಡಾಕೂಟದಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯಕುಮಾರಿ ವಂದನಾ ನಾಗರಾಜ ಗೌಡ ಚಕ್ರಎಸೆತದಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರ ಮಟ್ಟದಕ್ರೀಡಾಕೂಟಕ್ಕೆ ಭಾಗವಹಿಸುವ ಅರ್ಹತೆ ಪಡೆದಿದ್ದಾಳೆ. ಇವಳ ಈ ಸಾಧನೆಗೆ ಮತ್ತು ಮಾರ್ಗದರ್ಶಿ ಶಿಕ್ಷಕರಾದ ಎಸ್ಎನ್ ಹೆಗಡೆ ಯವರಿಗೆಕಾರವಾರ ಶೈಕ್ಷಣಿಕಜಿಲ್ಲೆಯ ಉಪನಿರ್ದೇಶಕರಾದ ಪಿ ಕೆ ಪ್ರಕಾಶ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ, ಆಡಳಿತ ಮಂಡಳಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಹೆಬ್ಬಾರ, ಮುಖ್ಯಾಧ್ಯಾಪಕರಾದ ಎಲ್ಎಮ್ ಹೆಗಡೆ, ಗ್ರಾಮ ಪಂಚಾಯತ್ ಶ್ರೀಕಾಂತ್ ಮೋಗೇರ್ ಮತ್ತು ಶಾಲಾ ಸಿಬ್ಬಂದಿಗಳು, ಊರಿನ ನಾಗರಿಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ
Leave a Comment