• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

December 11, 2017 by Gaju Gokarna Leave a Comment

ಹೊನ್ನಾವರ:

ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು. ಸಂತ್ರಸ್ಥನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಮಂಕಿ ಹಿಂದೂ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಮಂಕಿ ಉಪತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಂಕಿ ಮಾವಿನಕಟ್ಟೆಯಿಂದ ನಾಡ ಕಛೇರಿಯವರೆಗೆ ಮಹಿಳೆಯರು ಸೇರಿದಂತೆ ಸಾವಿರಾರು ಜನರು ಕಾಲ್ನಡಿಗೆ ಮೂಲಕ ಪರೇಶ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಮಂಕಿ ಗ್ರಾಮದ ಸುತ್ತಮುತ್ತಲಿನ ವಾಣಿಜ್ಯ ವ್ಯವಹಾರ, ಅಂಗಡಿ ಮುಗ್ಗಟ್ಟು, ಮೀನುಗಾರಿಕೆ, ಪ್ರಯಾಣಿಕರ ಸಾಗಾಣಿಕಾ ವಾಹನವನ್ನು ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಿ ಬೃಹತ್ ಮೆರವಣಿಗೆ ಪಾಲ್ಗೊಂಡರು. ಮನವಿಯಲ್ಲಿ ಕಳೆದ ಬುಧವಾರ ಹೊನ್ನಾವರದಲ್ಲಿ ನಡೆದ ಪರೇಶ ಕಮಲಾಕರ ಮೇಸ್ತನ ಬರ್ಬರ ಹತ್ಯೆಯ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಿ ಕಠಿಣ ಶೀಕ್ಷೆ ವಿಧಿಸಬೇಕು.
ಮೃತರ ಕುಟುಂಬಕ್ಕೆ ಐವತ್ತು ಲಕ್ಷ ರೂಪಾಯಿ ಪರಿಹಾರವನ್ನು ನೀಡುವುದರ ಜೊತೆಗೆ ಅವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಒದಗಿಸಬೇಕು.

ಮಂಕಿ ಗ್ರಾಮದ ಸೂಪರ್ ಬಜಾರ್ ಹತ್ತಿರ ದ್ವಿಚಕ್ರ ವಾಹನ ಗ್ಯಾರೇಜ ಇಟ್ಟುಕೊಂಡಿರುವ ಮುಸ್ಲಿಂ ಸಮುದಾಯದ ಅಮೀರ್ ಈತ ಕೋಮು ಸೌಹಾರ್ಧತೆಯನ್ನು ಕದಡುವ ಕಾರ್ಯದಲ್ಲಿ ತೊಡಗಿದ್ದು, ಹೊನ್ನಾವರದ ಘಟನೆಯಲ್ಲೂ ಇವನ ಕೈವಾಡವಿರುವುದು ಸಾಬಿತಾಗಿದ್ದು ಇತನನ್ನು ಕೂಡಲೆ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಬಂಧಿಸಿರುವ ಹಿಂದು ಅಮಾಯಕ ಯುವಕರನ್ನು ಯಾವುದೇ ಮೊಕದ್ದಮೆ ದಾಖಲಿಸದೇ ತಕ್ಷಣ ಬಿಡುಗಡೆಗೊಳಿಸಬೇಕು. ಈ ಪ್ರಕರಣದಲ್ಲಿ ಕರ್ತವ್ಯಲೊಪ ಎಸಗಿದ ಸಿ.ಪಿ.ಐ ಕುಮಾರಸ್ವಾಮಿಯವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ಸೂಕ್ತ ನ್ಯಾಯ ಸಿಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಮೆರವಣೆಗೆಯಲ್ಲಿ 6000 ಕ್ಕಿಂತ ಹೆಚ್ಚು ಹಿಂದು ಸಮಾಜ ಭಾಂದವರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಬಿ.ಜೆ.ಪಿ. ತಾಲೂಕ ಅಧ್ಯಕ್ಷ ಸುಬ್ರಾಯ ನಾಯ್ಕ, ಪ್ರಶಾಂತ ನಾಯ್ಕ, ನಾಗೇಶ ಹರಿಕಂತ್ರ, ರಾಘು ಖಾರ್ವಿ, ಸುರೇಶ ಹರಿಕಂತ್ರ, ಉಲ್ಲಾಸ ನಾಯ್ಕ, ರಿಕ್ಷಾ ಸಂಘದ ಅಧ್ಯಕ್ಷ ಸತೀಶ ನಾಯ್ಕ ಗುಳದಕೇರಿ, ಮಾವಿನಕಟ್ಠಾ ರಿಕ್ಷಾ ಸಂಘ, ಬಣಸಾಲೆ ರಿಕ್ಷಾ ಸಂಘ, ಅನೇಕ ಮಹಿಳಾ ಸಂಘದವರು ಹಾಜರಿದ್ದರು.

watermarked 11hnr1b

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: ಅಂಗಡಿ ಮುಗ್ಗಟ್ಟು, ಅಮೀರ್, ಆಗ್ರಹಿಸಿ, ಆರೋಪಿ, ಈತ, ಕಾಲ್ನಡಿಗೆ ಮೂಲಕ ಪರೇಶ, ಕೈಗೊಂಡು, ಕೋಮು ಸೌಹಾರ್ಧತೆ, ಪರೇಶ ಮೇಸ್ತ, ಪ್ರಯಾಣಿಕರ, ಬಗ್ಗೆ, ಬಂಧಿಸಬೇಕೆಂದು, ಮನವಿ, ಮೀನುಗಾರಿಕೆ, ಮುಸ್ಲಿಂ ಸಮುದಾಯದ, ರಾಜ್ಯಪಾಲರಿಗೆ, ವಾಹನ, ಸಂತ್ರಸ್ಥನ ಕುಟುಂಬ, ಸಾಗಾಣಿಕಾ, ಸಾವಿನ ಪ್ರಕರಣ, ಸೂಕ್ತ ತನಿಖೆ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...