ಹೊನ್ನಾವರ:
ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು. ಸಂತ್ರಸ್ಥನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಮಂಕಿ ಹಿಂದೂ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಮಂಕಿ ಉಪತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಂಕಿ ಮಾವಿನಕಟ್ಟೆಯಿಂದ ನಾಡ ಕಛೇರಿಯವರೆಗೆ ಮಹಿಳೆಯರು ಸೇರಿದಂತೆ ಸಾವಿರಾರು ಜನರು ಕಾಲ್ನಡಿಗೆ ಮೂಲಕ ಪರೇಶ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಮಂಕಿ ಗ್ರಾಮದ ಸುತ್ತಮುತ್ತಲಿನ ವಾಣಿಜ್ಯ ವ್ಯವಹಾರ, ಅಂಗಡಿ ಮುಗ್ಗಟ್ಟು, ಮೀನುಗಾರಿಕೆ, ಪ್ರಯಾಣಿಕರ ಸಾಗಾಣಿಕಾ ವಾಹನವನ್ನು ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಿ ಬೃಹತ್ ಮೆರವಣಿಗೆ ಪಾಲ್ಗೊಂಡರು. ಮನವಿಯಲ್ಲಿ ಕಳೆದ ಬುಧವಾರ ಹೊನ್ನಾವರದಲ್ಲಿ ನಡೆದ ಪರೇಶ ಕಮಲಾಕರ ಮೇಸ್ತನ ಬರ್ಬರ ಹತ್ಯೆಯ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಿ ಕಠಿಣ ಶೀಕ್ಷೆ ವಿಧಿಸಬೇಕು.
ಮೃತರ ಕುಟುಂಬಕ್ಕೆ ಐವತ್ತು ಲಕ್ಷ ರೂಪಾಯಿ ಪರಿಹಾರವನ್ನು ನೀಡುವುದರ ಜೊತೆಗೆ ಅವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಒದಗಿಸಬೇಕು.
ಮಂಕಿ ಗ್ರಾಮದ ಸೂಪರ್ ಬಜಾರ್ ಹತ್ತಿರ ದ್ವಿಚಕ್ರ ವಾಹನ ಗ್ಯಾರೇಜ ಇಟ್ಟುಕೊಂಡಿರುವ ಮುಸ್ಲಿಂ ಸಮುದಾಯದ ಅಮೀರ್ ಈತ ಕೋಮು ಸೌಹಾರ್ಧತೆಯನ್ನು ಕದಡುವ ಕಾರ್ಯದಲ್ಲಿ ತೊಡಗಿದ್ದು, ಹೊನ್ನಾವರದ ಘಟನೆಯಲ್ಲೂ ಇವನ ಕೈವಾಡವಿರುವುದು ಸಾಬಿತಾಗಿದ್ದು ಇತನನ್ನು ಕೂಡಲೆ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಬಂಧಿಸಿರುವ ಹಿಂದು ಅಮಾಯಕ ಯುವಕರನ್ನು ಯಾವುದೇ ಮೊಕದ್ದಮೆ ದಾಖಲಿಸದೇ ತಕ್ಷಣ ಬಿಡುಗಡೆಗೊಳಿಸಬೇಕು. ಈ ಪ್ರಕರಣದಲ್ಲಿ ಕರ್ತವ್ಯಲೊಪ ಎಸಗಿದ ಸಿ.ಪಿ.ಐ ಕುಮಾರಸ್ವಾಮಿಯವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ಸೂಕ್ತ ನ್ಯಾಯ ಸಿಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಮೆರವಣೆಗೆಯಲ್ಲಿ 6000 ಕ್ಕಿಂತ ಹೆಚ್ಚು ಹಿಂದು ಸಮಾಜ ಭಾಂದವರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಬಿ.ಜೆ.ಪಿ. ತಾಲೂಕ ಅಧ್ಯಕ್ಷ ಸುಬ್ರಾಯ ನಾಯ್ಕ, ಪ್ರಶಾಂತ ನಾಯ್ಕ, ನಾಗೇಶ ಹರಿಕಂತ್ರ, ರಾಘು ಖಾರ್ವಿ, ಸುರೇಶ ಹರಿಕಂತ್ರ, ಉಲ್ಲಾಸ ನಾಯ್ಕ, ರಿಕ್ಷಾ ಸಂಘದ ಅಧ್ಯಕ್ಷ ಸತೀಶ ನಾಯ್ಕ ಗುಳದಕೇರಿ, ಮಾವಿನಕಟ್ಠಾ ರಿಕ್ಷಾ ಸಂಘ, ಬಣಸಾಲೆ ರಿಕ್ಷಾ ಸಂಘ, ಅನೇಕ ಮಹಿಳಾ ಸಂಘದವರು ಹಾಜರಿದ್ದರು.
Leave a Comment