ಹೊನಾವರ: ಅಮಾಯಕ ಯುವಕ ಪರೇಶನ ನಿಗೂಢ ಸಾವನ್ನು ಪಕ್ಷಾತೀತವಾಗಿ
ನಾವೆಲ್ಲರೂ ವಿರೋಧಿಸುತ್ತಾ ಬಂದಿದ್ದೇವೆ.ಪರೇಶನ ಸಾವಿಗೆ ಕಾರಣರಾದವರನ್ನು
ತಕ್ಷಣ ಬಂಧಿಸುವಂತೆ ಹೊನಾವರ ಬ್ಲಾಕ್ ಕಾಂಗ್ರೆಸ ಮಾನ್ಯ ಮುಖ್ಯಮಂತ್ರಿಗಳಾದ
ಸಿದ್ದರಾಮಯ್ಯನವರಿಗೆ ಒತ್ತಾಯಿಸಿತ್ತು. ಪರೇಶನ ಸಾವಿಗೆ ಕಾರಣರಾದ ಏಷ್ಟೇ
ಪ್ರಭಾವಿಗಳಿದ್ದರೂ ಅವರನ್ನು ಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ
ಮತ್ತು ಸೂಕ್ತ ಪೊಲೀಸ ತನಿಖೆ ಕೈಗೊಳ್ಳುವಂತೆ
ಪತ್ರ ಬರೆದು ಮನವಿ ಮಾಡಲಾಗಿತ್ತು ಎಂದು ಹೊನ್ನಾವರ ಬ್ಲಾಕ ಕಾಂಗ್ರಸ ಅಧ್ಯಕ್ಷ
ಜಗದೀಪ್ ಎನ್. ತಂಗೇರಿ ಹೇಳಿದ್ದಾರೆ.
ಅದರಂತೆ ಮಾನ್ಯ ಮುಖ್ಯಮಂತ್ರಿಗಳು ಒಂದು ಹೆಜ್ಜೆ ಮುಂದೆ ಹೋಗಿ
ಸ್ಥಳೀಯ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ,ಪರೇಶನ ಪಾಲಕರು ಮತ್ತು
ನಮ್ಮೆಲ್ಲರ ಒತ್ತಾಯದಂತೆ ತನಿಖೆಯನ್ನು ಕೇಂದ್ರದ ಸಿ.ಬಿ.ಐ. ಗೆ
ಕೊಟ್ಟು ತಮ್ಮ ಪಾರದರ್ಶಕತೆಯನ್ನು ಮೆರೆದಿದ್ದಾರೆ. ಮತ್ತು
ಸಮಾಜದಲ್ಲಿ ಸೂಕ್ತ ಶಾಂತಿ ನೆಲೆಸುವಂತೆ ಆಶಿಸಿದ್ದಾರೆ. ಸೂಕ್ತ
ತನಿಖೆಗೆ ಆದೇಶಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ
ಹೊನಾವರ ಬ್ಲಾಕ ಕಾಂಗ್ರೆಸ ಮತ್ತು ಹೊನಾವರ ಜನತೆಯ ಪರವಾಗಿ
ತುಂಬು ಹೃದಯದ ಕ್ರತಙ್ಞತೆ ಸಲ್ಲಿಸುತ್ತೇವೆ ಎಂದು ಜಗದೀಪ ತಂಗೇರಿ
ಹೇಳಿದ್ದಾರೆ.
ಕಾರಣ ಸಿ.ಬಿ.ಐ ಈ ತನಿಖೆಯನ್ನು ತಕóಣ ಕೈಗೊಂಡು
ಒಂದು ತಿಂಗಳಿನಲ್ಲಿ ಪರೇಶನ ಪಾಲಕರಿಗೆ ಮತ್ತು ಸಾರ್ವಜನಿಕರಿಗೆ
ನ್ಯಾಯ ಒದಗಿಸಿ ಕೊಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು
ತಂಗೇರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Leave a Comment