ಹೊನ್ನಾವರ : ನೆಹರು ಯುವ ಕೇಂದ್ರ ಕಾರವಾರ, ಯವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ,ತಾಲೂಕು ಯುವ ಒಕ್ಕೂಟ ಹೊನ್ನಾವರ, ಶ್ರೀ ಮಾರಿಕಾಂಬ ಮಹಿಳಾ ಸಂಘ, ಡಾ|| ಬಿ. ಆರ್. ಅಂಬೇಡ್ಕರ್ ಹಳ್ಳೇರ್ ಸಾಂಸ್ಕøತಿಕ ಕಲಾಭಿವೃದ್ಧಿ ಸಂಘ (ರಿ) ಮತ್ತು ಶ್ರೀ ಶಂಭುಲಿಂಗೇಶ್ವರ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ ಮೂಡ್ಕಣಿ ಇವರ ಸಹಭಾಗಿತ್ವದಲ್ಲಿ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಅಳ್ಳಂಕಿಯಲ್ಲಿ ನೆರೆಹೊರೆ ಯುವ ಸಂಸದ್ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಸದಸ್ಯರಾದ ಲೋಕೇಶ್ ನಾಯ್ಕ ಉದ್ಘಾಟಿಸಿ ಮಾತನಾಡಿ ದೇಶ ಅನೇಕ ಎಡರು ತೊಡರುಗಳ ಮದ್ಯೆ ಅಭಿವೃದ್ದಿ ಪತದಲ್ಲಿ ಸಾಗುತ್ತಿದೆ. ದೇಶ ಸದೃಢವಾಗಬೇಕಾದರೆ ಯುವ ಶಕ್ತಿಗಳು ಸಂಘಟಿತರಾಗಬೇಕೆಂದು ಹೇಳಿದರು.
ಪ್ರಾಂಶುಪಾಲರಾದ ಎಸ್. ಎನ್. ಹೆಗಡೆ ಮಾತನಾಡಿ ಭಾರತದ ಭವಿಷ್ಯದ ಶಕ್ತಿ ಯುವಕರ ಕೈಯಲ್ಲಿದೆ ಯುವಕರು ಒಳ್ಳೆಯ ಚಿಂತನೆಗಳನ್ನು ಮಾಡುವುದರ ಮೂಲಕ ದೇಶÀ ಅಭಿವೃದ್ದಿಗೊಳಿಸಲು ಯುವಕರ ಪಾತ್ರ ಮುಖ್ಯ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಸಾಧನಾ ಬರ್ಗಿ ದೈಹಿಕ ಶಿಕ್ಷಕರು ದೈನಂದಿನ ಜೀವನದಲ್ಲಿ ಯೋಗ ಮತ್ತು ಅದರ ಉಪಯುಕ್ತತೆ ಈ ವಿಷಯದ ಕುರಿತು, ಮತ್ತು ಚಂದ್ರಕಾಂತ ಕೊಚರೇಕರ್ ಗ್ರಾ .ಪಂ. ಸದಸ್ಯರು ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗ ಈ ವಿಷಯದ ಕುರಿತು ಮತ್ತು ಕೆ. ಗಿರೀಶ ಭಂಡಾರಿ ಆರ್ಥಿಕ ಸಾಕ್ಷರತಾ ಅಧಿಕಾರಿಗಳು ಹೊನ್ನಾವರ, ಕೇಂದ್ರ ಪುರಸ್ಕøತ ಯೋಜನೆ ನಗದು ರಹಿತ ವ್ಯಾಪಾರ ಈ ವಿಷಯದ ಕುರಿತು ಮತ್ತು ಎಮ್. ಟಿ. ನಾಯ್ಕ ಜಯ ಕರ್ನಾಟಕ ಸಂಘಟನೆಯ ಕಾರ್ಯದರ್ಶಿಗಳು ಯುವ ಸಂಘಟನೆ ಏಕೆ ಹೇಗೆ ಅದರ ದ್ಯೇಯೊದ್ದೇಶಗಳ ಕುರಿತು ಮಾತನಾಡಿ ಮಾಹಿತಿ ನೀಡಿದರು .
ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಜೇಶ್ವರಿ ಎಮ್. ನಾಯ್ಕ ಸಭಾಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ದಯಾನಂದ ನಾಯ್ಕ, ಈರಮ್ಮ ಹಳ್ಳೇರ, ಗಣೇಶ ಹಳ್ಳೇರ, ಮಹಿಳಾ ಮಂಡಳದ ಅಧ್ಯಕ್ಷರಾದ ಮಂಜಿ ಹಳ್ಳೇರ್ ಉಪಸ್ಥಿತರಿದ್ದರು.
ಗ್ರಾ. ಪಂ. ಸದಸ್ಯರಾದ ಜಿ.ಟಿ. ಹಳ್ಳೇರ್ ಕಾರ್ಯಕ್ರಮ ನಿರೂಪಿಸಿದರು. ಯುವ ಒಕ್ಕೂಟದ ಅಧ್ಯಕ್ಷರಾದ ವಿನಾಯಕ ನಾಯ್ಕ ಮೂಡ್ಕಣಿ ಕಾರ್ಯಕ್ರಮ ವಂದಿಸಿದರು.
Leave a Comment