ಹೊನ್ನಾವರ: ತಾಲೂಕು ಒಕಲಿಗರ ಸಂಘದ ಅಧ್ಯಕ್ಷ ನಾಜಗಾರದ ಎಂ.ಎಚ್.ಗೌಡ (61) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ತಮ್ಮ ಮನೆಯಲ್ಲಿದ್ದಾಗ ತೀವೃ ಹೃದಯಾಘಾತಕ್ಕೊಳಗಿದ್ದರು. ನಂತರ ಇವರನ್ನು ಹೊನ್ನಾವರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ.
ತಾಲೂಕು ಒಕ್ಕಲಿಗರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ ಅವರು ಹಾಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಅವಧಿಯಲ್ಲಿ ಒಕ್ಕಲಿಗರ ಸಮುದಾಯದ ಸಭಾಭವನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಸಮಾಜದ ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಸಮಾಜಕಾರ್ಯದಲ್ಲಿ ತೊಡಗಿದ್ದರು. ಇವರು ಪತ್ನಿ, ಇಬ್ಬರು ಹೆಣ್ಣು ಪುತ್ರಿಯರು, ಒಬ್ಬ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನಾಜಗಾರದಲ್ಲಿ ಒಕ್ಕಲಿಗರ ಸಭಾಭವನನ ನಿರ್ಮಾಗೊಳ್ಳುತ್ತಿರುವ ಸ್ಥಳದಲ್ಲಿ ಸಮಾಜ ಮುಖಂಡರು ಮತ್ತು ಸಾರ್ವಜನಿಕರು ಸೇರಿ ಮೌನಾಚರಿಸಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶಾಸಕ ಮಂಕಾಳ ವೈದ್ಯ, ವೆಂಕಟ್ರಮಣ ಹೆಗಡೆ, ಸುನೀಲ ನಾಯ್ಕ, ರಾಜು ನಾಯ್ಕ, ಶಂಭು ಗೌಡ, ಗಣಪಯ್ಯ ಗೌಡ, ಕೃಷ್ಣ ಗೌಡ, ಒಕ್ಕಲಿಗ ಸಮಾಜದ ಮುಂಖಡರು ಜನಪ್ರತಿನಿಧಿಗಳು ಸೇರಿದಂತೆ ಸಾವಿರಾರು ಸಾರ್ವಜನಿಕರು ಆಗಮಿಸಿ ಅಂತಿಮ ದರ್ಶನ ಪಡೆದರು.
Leave a Comment