ಹಳಿಯಾಳ: ಸತತ 3 ವರ್ಷ ಕಾಲ ಪ್ರಯತ್ನಪಟ್ಟು ಸಂಪುಟದಲ್ಲಿ ಸಚಿವರು ಹಾಗೂ ಶಾಸಕರ ಅನುಮೋದನೆ ಪಡೆದು ಈ ಭಾಗದ ರೈತರ ಬಹುದಿನಗಳ ಕನಸಾದ ಕಾಳಿ ನದಿ ನೀರಾವರಿ ಯೋಜನೆಗೆ 240 ಕೋಟಿ ಮಂಜೂರಿ ಮಾಡಿಸಿರುವ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಅಡಿಗಲ್ಲು ಹಾಕಿರುವ ಈ ಯೋಜನೆ ಕಾಮಗಾರಿ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು ಇದಕ್ಕಾಗಿ ನನಗೆ ಯಾರಿಂದಲೂ ಆನೆಯ ಮೇಲೆ ಮೆರೆವಣಿಗೆ ಅವಶ್ಯಕತೆಯಿಲ್ಲಾ ಇದು ರೈತರ ವಿಶ್ವಾಸದ ಗೆಲುವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಹೇಳಿದರು. ತಾಲೂಕಿನ ಚಿಬ್ಬಲಗೇರಿ ಗ್ರಾಮದಲ್ಲಿ ಲೋಕೊಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ನಿರ್ಮಾಣಗೊಳ್ಳಲಿರುವ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲ್ಯಾನಾಸ ನೇರವೇರಿಸಿ ಮಾತನಾಡಿದರು. ನಾನೆಂದು ಸಕ್ಕರೆ ಕಾರ್ಖಾನೆ ಮಾಡಿದ್ದೇನೆಂದು ಹೇಳಿಕೆ ನೀಡಿಲ್ಲಾ ಆದರೆ ಕಾರ್ಖಾನೆಗೆ ಕಾಳಿನದಿಯಿಂದ ನೀರು ಕೊಡಬಾರದೆಂದು ಪ್ರತಿಭಟನೆ ಮಾಡಿ ಅಂದು ನನ್ನ ಪ್ರತಿಕೃತಿಯನ್ನು ದಹನ ಮಾಡಿ ಈಗ ನಾವೇ ಸಕ್ಕರೆ ಕಾರ್ಖಾನೆ ಮಾಡಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ವಿರೋಧ ಪಕ್ಷದ ಕೆಲವರಿಗೆ ಜನರು ಸರಿಯಾದ ಉತ್ತರ ನೀಡಲಿದ್ದಾರೆಂದರು. ಇನ್ನೂ ಮುಂದೆ ಕೆ.ಪಿ.ಸಿ ನಿಗಮದಿಂದ ಕಾಳಿ ನದಿ ನೀರನ್ನು ಯಾವುದೇ ನೀರಾವರಿಗೆ ಬಳಸಲು ಅನುಮತಿ ಸಿಗುವುದಿಲ್ಲಾ ಈ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಸಲಾಗಿದ್ದು ಈಗಾಗಲೇ ಮಂಜೂರಿ ಪಡೆದ ಹಳಿಯಾಳ ತಾಲೂಕಿನ ನೀರಾವರಿ ಯೋಜನೆ ಕೊನೆಯದಾಗಿದ್ದು ಈ ಯೋಜನೆಯಿಂದ ತಾಲೂಕಿನ 18 ಸಾವಿರ ಎಕರೆ ಜಮೀನಿಗೆ ನೀರು ಪೂರೈಕೆಯಾಗಲಿದೆ ಎಂದು ದೇಶಪಾಂಡೆ ಸ್ಪಷ್ಟಪಡಿಸಿದರು. ನನ್ನ 31 ವರ್ಷದ ಶಾಸನ ಸಭೆಯ ಅಧಿಕಾರದ ಅವಧಿಯಲ್ಲಿ 7 ಮುಖ್ಯಮಂತ್ರಿಯವರ ಜೊತೆ ಕೆಲಸ ಮಾಡಿದೇನೆ. ಆ ಅವಧಿಯಲ್ಲಿಯೂ ಅಭಿವೃದ್ಧಿಯಾಗಿದೆ ಆದರೆ ಸಿದ್ದರಾಮಯ್ಯನವರ ಈ ನಾಲ್ಕೂವರೆ ವರ್ಷದ ಆಡಳಿತದಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಹರಿದು ಬಂದ ಸಾವಿರಾರು ಕೋಟಿ ಹಣ ಐತಿಹಾಸಿಕ ದಾಖಲೆ ಎಂದು ಸಚಿವರು ಹೇಳಿದರು. ವಿಧಾನಪರಿಷತ್ ಸದಸ್ಯ ಎಸ್ ಎಲ್ ಘೋಟ್ನೆಕರ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾ. ಪಂ ಅಧ್ಯಕ್ಷ ತುಕಾರಾಮ ಗೌಡಾ, ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಕೃಷ್ಣಾ ಪಾಟೀಲ, ಮಹೇಶ್ರೀ, ತಾ.ಪಂ ಅಧ್ಯಕ್ಷೆ ರೀಟಾ ಸಿದ್ದಿ, ನೀಲವ್ವಾ ಮಡಿವಾಳ,ಸದಸ್ಯ ದೇಮಾನಿ ಶಿರೊಜಿ, ಪ್ರಕಾಶ ಪಾಕ್ರಿ, ಶಂಭಾಜಿ ಹಳಿಯಾಳಕರ, ತಹಶೀಲ್ದಾರ ವಿದ್ಯಾದರ ಗುಳಗುಳಿ, ತಾ.ಪಂ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ಪಿ.ಡಬ್ಯೂ.ಡಿ ಎಇಇ ಆರ್ ಎಚ್ ಕುಲಕರ್ಣಿ, ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ, ಹೆಸ್ಕಾಂ ಎಇಇ ರವಿಂದ್ರ ಮೆಟ್ಟಗುಡ್ಡ ಇತರರು ಇದ್ದರು.
Leave a Comment