ಹೊನ್ನಾವರ ‘À ಶಿಕ್ಷಣ ಪದ್ಧತಿಯು ಕೇವಲ ಆಡಂಬರಕ್ಕೆ ಸೀಮಿತವಾಗಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ ವ್ಯಾಮೋಹ ಹೆಚ್ಚಾಗುತ್ತಿದ್ದು, ಭಾರತೀಯ ಸಂಸ್ಕøತಿಯನ್ನು ಮರೆಯುತ್ತಿದ್ದಾರೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ ಶಿಕ್ಷಣದಲ್ಲಿ ಪರಿಪೂರ್ಣತೆಯನ್ನು ಸಾಧಿಸಬಹುದು. ಆದರೆ ಇಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಇಂಗ್ಲೀಷ ವ್ಯಾಮೋಹಕ್ಕೆ ಮನಸೋತು ಅತ್ತ ಅದು ಅರ್ಥವಾಗದೇ, ಇತ್ತ ಮಾತೃಭಾಷೆಯಲ್ಲೂ ಹಿಡಿತ ಸಾಧಿಸಲಾಗದೇ ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದು ಪರಿಪೂರ್ಣತೆಯನ್ನು ಸಾಧಿಸಿ ನಂತರ ಇಂಗ್ಲೀಷ ಕಲಿತರೆ ಎನ್ನನ್ನು ಸಾಧಿಸಬಹುದು ಎಂದು ಅನಿವಾಸಿ ಭಾರತೀಯ ಪದ್ಮನಾಭ ಶಾನಭಾಗು ಅಭಿಪ್ರಾಯ ಪಟ್ಟರು.
ಅವರು ಕಾಸರಕೋಡ ಜನತಾ ವಿದ್ಯಾಲಯದ ವಾರ್ಷಿಕ ಸೇಹಸಮ್ಮೇಳನದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಕಾಸರಕೋಡ ಗ್ರಾಮದಲ್ಲಿ ಪ್ರೌಢಶಾಲೆಗಾಗಿ ಸಾಕಷ್ಟು ಜನರು ಶ್ರಮಿಸಿದ್ದಾರೆ. ಅವರ ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ದಿನಕರ ದೇಸಾಯಿಯವರು ಶಿಕ್ಷಣ ಪ್ರೇಮಿಯಾಗಿದ್ದು. ಉತ್ತರಕನ್ನಡ ಜಿಲ್ಲೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದರು.
ಡಾ||ರಂಗನಾಥ ಪೂಜಾರಿÀು ಮಾತನಾಡಿ ಉತ್ತಮ ವೃತ್ತಿಗಳಲ್ಲಿ ಶಿಕ್ಷಣ ವೃತ್ತಿಯು ಅತ್ಯಂತ ಶ್ರೇಷ್ಠವಾಗಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿಯೇ ತಮ್ಮ ಗುರಿಯನ್ನು ಕಂಡು ಸಾಧಿಸಿದರೆ ಗುರಿ ತಲುಪಲು ಸುಲಭ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದರೆ ಯಶಸ್ವಿ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆರೆಯಪ್ಪ ಶಾನಭಾಗರವರು ವಹಿಸಿದರು. ಮುಖ್ಯಾಧ್ಯಾಪಕಿ ಫಿಲೋಮಿನಾ ರೊಡ್ರಿಗೀಸ್ ಅವರು ಸ್ವಾಗತಿಸಿ ಪರಿಚಯಿಸಿದರು. ಶಾಲೆಯ ವರದಿಯನ್ನು ವಿನಾಯಕ ಶೆಟ್ಟಿ ಪ್ರಸ್ತುತ ಪಡಿಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಾಗರಾಜ ನಾಯ್ಕ ವಂದಿಸಿದರೆ, ಜಿ.ಎಸ್.ಭಟ್ಟ ನಿರೂಪಿಸಿದರು.
Leave a Comment