ಹೊನ್ನಾವರ:
ನಾಡಿನ ಹಿರಿಯ ಕವಯತ್ರಿ ಕನ್ನಿಕಾ ಹೆಗಡೆ ಅವರ ನಿಧನದಿಂದಾಗಿ ಜಿಲ್ಲೆ ಓರ್ವ ಪ್ರತಿನಿಧಿಕ ಬರಹಗಾರ್ತಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರೀತಿಯ ಪರಿಕಲ್ಪನೆಯನ್ನು ಬದುಕಿನ ನಾನಾ ಸ್ತರಗಳಿಗೆ ವಿಶಿಷ್ಟವಾಗಿ ಪರಿಚಯಿಸಿದ ಅಪರೂಪದ ಕವಯತ್ರಿ ಕನ್ನಿಕಾ ಹೆಗಡೆಯವರ ಕಾವ್ಯ ಸಮುದಾಯವನ್ನು ಓದಿಗೆ ಹಚ್ಚಿತ್ತು. ಕೆ.ಎಸ್.ನರಸಿಂಹಸ್ವಾವಿಯವರ ಕವನಗಳು ಬರಪೂರು ಬರುವ ಸಂದರ್ಬದಲ್ಲಿ ಕನ್ನಿಕಾ ಹೆಗಡೆ ಅವರು ಪ್ರೆಮ ಕಾವ್ಯ ಪ್ರಕಾರಕ್ಕೆ ತಮ್ಮದೇ ಆದ ಹೊಸ ದಣಪೆ ತೆರೆದಿದ್ದರು ಎಂದು ಅರವಿಂದ ಕರ್ಕಿಕೋಡಿ ಅವರು ತಿಳಿಸದ್ದಾರೆ.
ಸಂತಾಪ ಸೂಚಕ ಸಭೆ : ಕವಯತ್ರಿ ಕನ್ನಿಕಾ ಹೆಗಡೆ ಅವರ ನಿಧನದ ಪ್ರಯುಕ್ತ ಫೆ. 14 ರಂದು ಬುಧವಾರ ಸಂಜೆ 4 ಗಂಟೆಗೆ ಇಲ್ಲಿಯ ಎಸ್.ಡಿ.ಎಂ. ಪದವಿ ಕಾಲೇಜಿನ ಆರ್.ಎಸ್.ಹೆಗಡೆ ಸಂಸ್ಮರಣ ಸಭಾಭವನದಲ್ಲಿ ಸಂತಾಪ ಸಭೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಕ.ಸಾ.ಪ., ತಾಲೂಕು ಕಸಾಪ ಹಾಗೂ ಕಾಲೇಜಿನ ಕನ್ನಡ ಸಂಘದ ಸಹಯೋಗದಲ್ಲಿ ನಡೆಯಲಿರುವ ಈ ಸಭೆಗೆ ಸಾಹಿತ್ಯಾಸಕ್ತರೆಲ್ಲರೂ ಪಾಲ್ಗೊಳ್ಳಬೇಕು ಎಂದು ಹೊನ್ನಾವರ ತಾಲೂಕು ಕ.ಸಾಪ. ಅಧ್ಯಕ್ಷ ನಾಗರಾಜ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
Leave a Comment