ಹಳಿಯಾಳ:-
ರೈತರಿಗೆ ಕೃಷಿ ಭೂಮಿ ಸತ್ವಯುತವಾಗಿದ್ದರೇ ಮಾತ್ರ ಒಳ್ಳೆಯ ಬೆಳೆಯನ್ನು ಬೆಳೆಸಬಹುದಾಗಿದೆ, ಮಾನವರಂತೆ ಭೂಮಿಗೂ ಕೂಡ ಸರಿಯಾದ ಆರೋಗ್ಯ ತಪಾಸಣೆ ಅವಶ್ಯವಾಗಿದ್ದು ಆ ದಿಶೆಯಲ್ಲಿ ಜೆಕೆ ಸಿಮೆಂಟ್ ರವರು ತಮ್ಮ ಸಿಎಸ್ಆರ್ ಯೋಜನೆಯ ಅಡಿಯಲ್ಲಿ ಎಪಿಎಮ್ಸಿ ಆವರಣದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲಯ ನಿರ್ಮಿಸಿದ್ದಾರೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಭಾನುವಾರ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಲಾದ ಮಣ್ಣು ಪರೀಕ್ಷಾ ಪ್ರಯೋಗಾಲಯವನ್ನು ಉಧ್ಘಾಟಿಸಿ ಮಾತನಾಡಿದ ಅವರು ಉದ್ಯಮಿ ಮಿತ್ರರಾದ ಜೆಕೆ ಸಿಮೆಂಟ್ ರವರು ರೈತರಿಗೆ ಪ್ರಯೋಗಾಲಯ ಸ್ಥಾಪಿಸಿ ಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಅವರು ಭೂಮಿಯಲ್ಲಿ ಲಘು ಪೋಷಕಾಂಶ ಯಾವ ಪ್ರಮಾಣದಲ್ಲಿರಬೇಕು, ಯಾವ ರೀತಿಯಿಂದ ಮಣ್ಣನ್ನು ಪೊಷಿಸಬೇಕು, ಯಾವ ಬೆಳೆಯನ್ನು ಬೆಳೆಯಬೇಕು ಎನ್ನುವ ಬಗ್ಗೆ ಮಣ್ಣು ಪರೀಕ್ಷೆಯಿಂದ ತಜ್ಞರು ಮಾಹಿತಿ ನೀಡುತ್ತಾರೆ. ಇದು ರೈತರಿಗೆ ಸಹಕಾರಿಯಾಗುತ್ತದೆ. ಇದರ ಲಾಭವನ್ನು ಪ್ರತಿಯೊಬ್ಬ ರೈತರು ಪಡೆಯಬೇಕು ಎಂದರು. ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಮಾತನಾಡಿ ರೈತರು ಈ ಮೋದಲು ಸಾವಯವ ಕೃಷಿ ಪದ್ದತಿಯಿಂದ ಬೆಳೆಯನ್ನು ಬೆಳೆಸುತ್ತಿದ್ದರು ಕ್ರಮೇಣ ರಾಸಾಯನಿಕ ಪದ್ದತಿಗೆ ತಮ್ಮನ್ನು ಅಳವಡಿಸಿಕೊಂಡ ಕಾರಣ ಕೃಷಿ ಭೂಮಿ ಸತ್ವಹಿನವಾಗಿದ್ದು ಆ ದಿಶೇಯಲ್ಲಿ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ತಜ್ಞರ ಸಲಹೆಯಂತೆ ನಿಮ್ಮ ಭೂಮಿಯ ಮಣ್ಣನ್ನು ಪರೀಕ್ಷಿಸಿ ಒಳ್ಳೆಯ ಬೆಳೆಯನ್ನು ಬೆಳೆಸಬೇಕು. ಈ ಭಾಗದ ರೈತರಿಗೆ ಮಣ್ಣು ಪರೀಕ್ಷಾ ಕೇಂದ್ರ ಕಾಮದೇನು ಆಗಲಿದೆ ಎಂದರು. ರೈತರ ಬೇಡಿಕೆಯಂತೆ ಹೆಚ್ಚುವರಿಯಾಗಿ ಹಳಿಯಾಳಕ್ಕೆ 2500 ತಾಡಪತ್ರೆ, ಜೋಯಿಡಾಕ್ಕೆ 700 700 ತಾಡಪತ್ರೆ ಅಲ್ಲದೆ ತಾಲೂಕಿಗೆ 65 ಲಕ್ಷ ರೂ ಬೆಲೆಯ ಕೃಷಿ ಯಂತ್ರೋಪಕರಣ ಮಂಜೂರಿ ಮಾಡಿಸಿದ್ದಾರೆ ಎಂದು ಘೋಟ್ನೇಕರ ಸಚಿವರ ರೈತಪರ ಕಾಳಜಿಯನ್ನು ಶ್ಲಾಘೀಸಿದರು. ಈ ಸಂದರ್ಭದಲ್ಲಿ ಸಚಿವರು 18 ಕೃಷಿ ಹೊಂಡಗಳಿಗೆ ಚೆಕ್ನ್ನು, ತಲಾ 25ಸಾವಿರದಂತೆ 20 ಸ್ವಸಹಾಯ ಸಂಘಗಳಿಗೆ, ತುಂತುರು ನೀರಾವರಿ ಘಟಕ 10 ಫಲಾನುಭವಿಗಳಿಗೆ, ಆತ್ಮ ಯೋಜನೆಂiÀಡಿಯಲ್ಲಿ 5ಸ್ವಸಯಾಯ ಸಂಘಗಳಿಗೆ , ಕೃಷಿ ಯೋಜನೆಯಡಿ 27 ತಾಡಪತ್ರಿ, ಒಂದು ರೊಟರಿ ಟಿಲ್ಲರ್, ಒಂದು ಮಿನಿ ಟ್ರಾಕ್ಟರ್ ವಿತರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ರೈತ ಮುಖಂಡ ಯಡೋಗಾದ ಯಲ್ಲಾರಿ ಗೌಡಾ ನಿಧನಕ್ಕೆ ಸಮಾರಂಭದ ಪ್ರಾರಂಭದಲ್ಲಿ ಮೌನಾಚರಣೆ ಮಾಡಿ ಗೌರವ ಸಲ್ಲಿಸಲಾಯಿತು. ಎಪಿಎಮ್ಸಿ ಪ್ರಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಟಕರು ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ಅವರ ಹೆಸರನ್ನು ನಮೂದಿಸದೆ ಅವರನ್ನು ಆಹ್ವಾನಿಸದೆ ಇರುವುದಕ್ಕೆ ಸಭೆಯಲ್ಲೇ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡು ಅಧ್ಯಕ್ಷರಲ್ಲಿ ಕ್ಷಮೆ ಯಾಚಿಸುವಂತೆ ಸೂಚಿಸಿದರು. ಅಲ್ಲದೇ ಪ್ರೊಟೊಕಾಲ್ ಪ್ರಕಾರ ಚುನಾಯಿತ ಜನಪ್ರತಿನಿಧಿಗಳಿಗೆ ಗೌರವ ನೀಡುವಂತೆ ಕಿವಿಮಾತು ಹೇಳಿದರು. ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಮುಖ್ಯಸ್ಥ ಎಮ್.ಪ್ರಕಾಶ, ಕೃಷಿ ಸಹಾಯಕ ನಿರ್ದೇಶಕ ನಾಗೇಶ ನಾಯ್ಕ, ತಾಪಂ ಅಧ್ಯಕ್ಷೇ ರೀಟಾ ಸಿದ್ದಿ, ಉಪಾಧ್ಯಕ್ಷ ನೀಲವ್ವಾ ಮಡಿವಾಳ, ಸದಸ್ಯ ದಯಾನಂದ ಜಾವಳೆಕರ, ರೈತ ಮುಖಂಡ ಶಂಕರ ಕಾಜಗಾರ, ಮಹಾ ಪ್ರಬಂಧಕ ರವೀಂಧ್ರ ದೇಸಾಯಿ, ಬೇಸಾಯ ತಜ್ಞ ಎ.ಆರ್ ಯಕ್ಕೆಲಿ, ಮಣ್ಣು ಪರೀಕ್ಷಾ ವಿಭಾಗ ತಜ್ಞ ಎಮ್.ರಾಜಕುಮಾರ, ಎಸ್.ಆರ್ ದೇಸಾಯಿ, ಪಿತಾಂಬರ ಕಶೀಲಕರ ಇತರರು ಇದ್ದರು.
Leave a Comment