ಹೊನ್ನಾವರ ತಾಲೂಕ ನಾಮಧಾರಿ ಹಿರಿಯ ನಾಗರೀಕ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಲಿದ್ದ, ಆರ್.ಡಿ. ನಾಯ್ಕ. ಪ್ರಭಾತನಗರ ಇವರು ಹೃದಯಾಘಾತದಿಂದ ನಿಧನ ಹೊಂದಿರುವ ಬಗ್ಗೆ ಸಮಾಜದ ಪ್ರಮುಖರು ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.ಹೊನ್ನಾವರ ತಾಲೂಕ ನಾಮಧಾರಿ ಹಿರಿಯ ನಾಗರೀಕ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಲಿದ್ದ, ಆರ್.ಡಿ. ನಾಯ್ಕ. ಪ್ರಭಾತನಗರ ಇವರು ಹೃದಯಾಘಾತದಿಂದ ನಿಧನ ಹೊಂದಿರುವ ಬಗ್ಗೆ ಸಮಾಜದ ಪ್ರಮುಖರು ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ. ಇವರು ಸರಳ ಸಜ್ಜನಿಕೆ ವ್ಯಕ್ತಿಯಾಗಿ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದರು. ಹೊನ್ನಾವರ ಎಸ್.ಡಿ.ಎಮ್. ಕಾಲೇಜಿನಲ್ಲಿ ಸುಪರಿಟೆಂಡೆಂಟ್ ಸೇವೆ ಸಲ್ಲಿಸಿ ನಿವೃತ್ತರಾದವರು ತಮ್ಮ ನಿವೃತ್ತಿ ಜೀವನದಲ್ಲೂ, ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಮಾನವತಾ ವಾದಿಯಾಗಿದ್ದರು. ಹಿರಿಯ ನಾಗರೀಕ ವೇದಿಕೆಯಡಿಯಲ್ಲಿ ಹಲವಾರು ಜನಪರ ಕಾರ್ಯಕ್ರಮ ನಡೆಸುವ ಕನಸು ಕಂಡಿದ್ದರು. ಹಾಗೆಯೇ ನಾಮಧಾರಿ ವಿದ್ಯಾರ್ಥಿ ನಿಲಯ ಹಾಗೂ ಸಭಾಭವನ ಕಟ್ಟಡ ಕಾರ್ಯದಲ್ಲೂ ಸಹ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಎಂದು ದಿ|| ಡಿ.ದೇವರಾಜು ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ, ಕಟ್ಟಡ ಸಮಿತಿ ಅದ್ಯಕ್ಷ ಸಿ.ಬಿ.ನಾಯ್ಕ ನಗರೆ, ತಾ.ಪಂ ಸದಸ್ಯ ಆರ್.ಪಿ.ನಾಯ್ಕ ಚಿಕ್ಕನಕೋಡ, ಜಿ.ಪಂ.ಸದಸ್ಯ ದೀಪಕ್ ನಾಯ್ಕ ಮಂಕಿ, ರಾಮಪ್ಪ ನಾಯ್ಕ ನಾಥಗೇರಿ, ದೇವೆಂದ್ರ ನಾಯ್ಕ ಹುಂಜನಮಕ್ಕಿ, ಹರಿಯಪ್ಪ ನಾಯ್ಕ, ಚಂದ್ರಹಾಸ ನಾಯ್ಕ ಹುಡಗೋಡ, ಎಂ.ಜಿ.ನಾಯ್ಕ ನಗರೆ, ಸೀತಾರಾಮ ನಾಯ್ಕ ರಾಯಲಕೇರಿ, ವಿ.ಜಿ.ನಾಯ್ಕ ನಿವೃತ್ತ ಶಿಕ್ಷಕರು, ಆಯ್.ವಿ.ನಾಯ್ಕ ನಗರೆ, ಡಿ.ಎನ್.ನಾಯ್ಕ ಕರ್ಕಿ, ಇವರು ತಮ್ಮ ಸಂತಾಪವನ್ನು ಪತ್ರಿಕೆಗೆ ತಿಳಿಸಿದ್ದಾರೆ.
Leave a Comment