ಹೊನ್ನಾವರ :
ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ವಿಶ್ವ ಅರಣ್ಯ ಮತ್ತು ಜಲ ದಿನವನ್ನು ಮರಕ್ಕೆ ನೀರೆರೆಯುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿದ್ಯಾರ್ಥಿಗಳು ‘ಗಂಗೇಚ ಯಮುನೇಚೈವ ಗೋದಾವರಿ, ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಶ್ಲೋಕ ಪಠಿಸುತ್ತಾ ಮರಕ್ಕೆ ನೀರುಣಿಸಿದರು.
ಇಂದಿನ ಮಕ್ಕಳು ಹೆಚ್ಚಿನ ಪರಿಸರ ಕಾಳಜಿ ಹಾಗೂ ನೀರಿನ ಮಹತ್ವವನ್ನು ಸರಿಯಾಗಿ ತಿಳಿದುಕೊಳ್ಳಬೇಕೆಂದು ಶಿಕ್ಷಕರಾದ ಎ.ಕೆ. ಭಟ್ ಬಹಳ ಮಾರ್ಮಿಕವಾಗಿ ತಿಳಿಸಿದರು.
ಇಕೋ ಕ್ಲಬ್ ನ ಆಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಿದ್ದರು. ವಿದ್ಯಾರ್ಥಿಗಳು, ಇಕೋ ಕ್ಲಬ್ ನ ಸಂಚಾಲಕಿ ಕುಮಾರಿ ಪವಿತ್ರಾ ಭಟ್ಟ, ಶಾಲಾ ಮುಖ್ಯಾಧ್ಯಾಪಕರಾದ ವಿ.ಎಸ್. ಅವಧಾನಿ ಹಾಗೂ ಶಿಕ್ಷಕರಾದ ಯಶ್ವಂತ ಮೇಸ್ತ, ಸಂದೀಪ ಹೆಗಡೆ ಇನ್ನಿತರರು ಉಪಸ್ಥಿತರಿದ್ದರು.
Leave a Comment