ಹೊನ್ನಾವರ : ಇಂದಿನ ದಿನಮಾನಗಳಲ್ಲಿ ಕೆಲ ಸಾಂಸ್ಕ್ರತಿಕ ಸಂಘಟನೆಗಳು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿದೆ. ಅರ್ಥ, ಶಬ್ದಗಳು ಹದ ತಪ್ಪಿ ಹೋಗಿವೆ. ಮಾತು ಮಾಲಿನ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಎಸ್ ಡಿ ಎಮ್ ಕಾಲೇಜಿನ ಉಪನ್ಯಾಸಕÀ ನಾಗರಾಜ ಹೆಗಡೆ ಅಪಗಾಲರವರು ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಖರ್ವಾ ಗ್ರಾಮದ ಕೊಳಗದ್ದೆಯ ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ 15ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೆಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು. ಯಶಸ್ವಿನಿ ವೇದಿಕೆಯಿಂದ ಸಾಧಕರನ್ನು ಅಭಿನಂದಿಸುವುದು, ಅಭಿವಂದಿಸುವ ಕಾರ್ಯವಾಗುತ್ತಿದೆ ಇದು ಶ್ರೇಷ್ಟ ಸಂಪ್ರದಾಯ. ಕಲೆ, ಸಾಹಿತ್ಯ,ಸಂಗೀತ ಇದು ಕನ್ನಡ ನೆಲದ್ದು ಮಾತ್ರವಲ್ಲ, ಭಾರತೀಯತೆಯ ಅದ್ಬುತ ಪ್ರತೀಕ. ಇಡೀ ವಿಶ್ವ ನಮ್ಮತ್ತ ತಿರುಗಲು ಮುಖ್ಯ ಕಾರಣ ನಮ್ಮಲ್ಲಿರುವ ಸಂಸ್ಕ್ರತಿ, ಸಾಂಸ್ಕ್ರತಿಕತೆ, ಮನುಷ್ಯ ಸಂಬಂಧವನ್ನು ಕಟ್ಟಿಕೊಡುವ ದೇಶವೆಂದರೆ ಅದು ಭಾರತ ಬಿಟ್ಟರೆ ಮತ್ಯಾವ ದೇಶವಿಲ್ಲ. ಆದರೆ ಇಂದು ಕೆಲ ಧಾರವಾಹಿಗಳು ಮನಸ್ಸನ್ನು, ಮನುಷ್ಯ ಸಂಬಂಧವನ್ನು ಒಡೆಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ ಗೌರವಾಧ್ಯಕ್ಷ ಟಿ. ಎಚ್. ಗೌಡ ಮಾತನಾಡಿ ಒಂದು ಸಂಘಟನೆ ಹುಟ್ಟು ಹಾಕುವುದು ಸುಲಭ, ಅದನ್ನು ಬೆಳೆಸುವುದು, ಮುಂದುವರೆಸಿಕೊಂಡು ಹೋಗಬೇಕು ಎಂದರು. ಹೊಸಾಡದ ಶರಾವತಿ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾದ್ಯಾಯರಾದ ರಘುವೀರ ಶ್ಯಾನಬಾಗ ಹಾಗೂ ರಾಷ್ಟ್ರಮಟ್ಟದ ಯೋಗ ಸ್ಪರ್ಧೇಯಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನ ಪಡೆದಿದ್ದ ಯೋಗಪಟು ಮಹೇಂದ್ರ ಗೌಡ ಅವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
Leave a Comment