ಹೊನ್ನಾವರ :
ಧರ್ಮ ರಕ್ಷಣಾ ಸಮಿತಿಯ ಸುಧೀರ್ಗ ಇತಿಹಾಸದಲ್ಲಿ ಕಂಡು ಕೇಳರಿಯದ ಘಟನೆ ಸಂಭವಿಸಿ ಈ ಕುಕೃತ್ಯದ ವಿರುದ್ದ ಜಾತಿ, ಮತ ಪಂಥ ಮರೆತು ಹೊನ್ನಾವರದ ಸಮಸ್ತ ಜನತೆ ಒಕ್ಕೊರಲಿನಿಂದ ಖಂಡಿಸಿದ್ದು ಇಡಿ ದೇಶಾದ್ಯಂತ ಸುದ್ದಿಯಾಗಿರುತ್ತದೆ. ಜನತೆಯ ಒತ್ತಾಯಕ್ಕೆ ಮಣಿದು ಘನ ಸರಕಾರದವರು ಈ ಘಟನೆಯನ್ನು ನ್ಯಾಯಯುತ ತನಿಖೆಗೆ ಸಿಬಿಐ ಕೈ ವಹಿಸಿದೆ. ಸಿಬಿಐ ವಹಿಸಿ 4 ತಿಂಗಳಾದರೂ ಈ ತನಕ ಯಾವುದೇ ತನಿಖೆ ಕಾರ್ಯಾರಂಭಗೊಳ್ಳಲಿಲ್ಲ ಹೊನ್ನಾವರ ಜನತೆ ಇದರಿಂದ ಭ್ರಮನಿರಸನಗೊಂಡಿದ್ದಾರೆ. ರಾಜಕೀಯ ಪಕ್ಷಗಳು ಜಾತಿ, ಮತ ಪಂಥವೆಂದು ರಾಜಕೀಯ ಮೇಲಾಟದಲ್ಲಿ ತೊಡಗಿವೆ. ಯಾವ ರಾಜಕೀಯ ಪಕ್ಷಗಳಿಗೂ ಈ ಘಟನೆಯ ಸತ್ಯಾಸತ್ಯತೆ ಬೇಡವಾಗಿದೆ. ಚುನಾವಣೆಯ ಅಭ್ಯರ್ಥಿಯಾಗುವುದು ಮುಖ್ಯವಾಗಿದೆ. ಈ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹುನ್ನಾರ ನಡೆದಿದೆ. ಸಿಬಿಐ ತನಿಖೆ ವಿಳಂಬವಾಗುತ್ತಿದೆ ಎಂದು ಸಂಬಂಧಪಟ್ಟವರಿಗೆ ಕೇಳುವ ಸೌಜನ್ಯವು ಯಾವುದೇ ರಾಜಕೀಯ ಪಕ್ಷಗಳಿಗಿಲ್ಲ.
ಹಿಂದು ಧರ್ಮ ರಕ್ಷಣಾ ಸಮೀತಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಮಗೆ ಯಾವುದೇ ಪಕ್ಷಗಳ ಬೆಂಬಲ ಅಥವಾ ಸಹಾನೂಭೂತಿ ಅವಶ್ಯಕತೆಯಿಲ್ಲ. ಶಾಂತಿಯುತವಾಗಿ ನಾವು ಹೋರಾಟ ಮಾಡಿ ನ್ಯಾಯ ಪಡೆಯಲು ಸನಾತನ ಹಿಂದೂ ಧರ್ಮ ಸಿದ್ದವಾಗಿ ಮುಂಬರು ಚುನಾವಣೆಯಲ್ಲಿ ಈ ರಾಜಕೀಯ ಪಕ್ಷಗಳಿಗೆ ಸಮಂಜಸವಾದ ಉತ್ತರ ನೀಡುತ್ತೇವೆ. ಯಾವುದೇ ರಾಜಕೀಯ ಪಕ್ಷದ ವ್ಯಕ್ತಿಗಳ ಹೊರತಾಗಿ ಹಿಂದೂ ಧರ್ಮದ ರಕ್ಷಣೆಗೆ ಕಟಿಬದ್ದರಾದ ತಟಸ್ಥ ವ್ಯಕ್ತಿಯನ್ನು ಆಯ್ಕೆ ಮಾಡಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆ. ನಮಗೆ ಜಾತಿ ಆಧಾರಿತ ವ್ಯಕ್ತಿಗಳ ಆಯ್ಕೆ ಬೇಡ ನಮಗೆ ಧರ್ಮ ಸಂರಕ್ಷಣೆ ಮಾಡುವ ಸಮರ್ಥ ನಾಯಕತ್ವ ಅವಶ್ಯಕತೆ ಇದೆ.
ಧರ್ಮ ರಕ್ಷಣಾ ಸಮೀತಿಯ ಎಲ್ಲ ಸದಸ್ಯರು ಹಾಜರಿದ್ದು ಪತ್ರಿಕೆಯ ಮೂಲಕ ಈ ಸಂದೇಶವನ್ನು ಹಿಂದೂ ಧರ್ಮದ ಸಮಸ್ತ ನಾಗರೀಕರಿಗೆ ಬಿಡುಗಡೆ ಮಾಡುತ್ತೇವೆ.
Leave a Comment