ಹೊನ್ನಾವರ:
ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಪಟ್ಟಣದ ಶರಾವತಿ ಸರ್ಕಲ್ ಬಳಿ ಜನಾಶಿರ್ವಾದ ಯಾತ್ರೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ತೆರೆದ ವಾಹನದಲ್ಲಿ ಮಾತನಾಡುವ ಸಂಧರ್ಬದಲ್ಲಿ ಮುಜುಗರಕ್ಕೀಡಾಗಿ ಭಾಷಣವನ್ನು ಅರ್ಧದಲ್ಲೆ ಮೊಟಕುಗೊಳಿಸಿ ಭಟ್ಕಳದ ಕಡೆಗೆ ಪ್ರಯಾಣ ಬೆಳೆಸಿದ ಘಟನೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರ್ಯಾಲಿಯ ಮದ್ಯೆ ಕೆಲವರು “ಮೋದಿ” “ಮೋದಿ” ಎಂದು ಘೋಷಣೆ ಕೂಗಿದರು.ಈ ಸಂಧರ್ಬದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಘೋಷಣೆ ಕೂಗುವವರನ್ನು ನಿಯಂತ್ರಿಸಲು ಮುಂದಾದರು.ಆದರು ಘೋಷಣೆ ನಿಯಂತ್ರಿಸಲು ಸಾಧ್ಯಾವಾಗಲಿಲ್ಲ.
……………………………………………………………………………………………
ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾದ ಘಟನೆ ನಡೆಯಿತು. ರಾಹುಲ್ ಗಾಂಧಿ ಆಗಮಿಸುವ ಅರ್ಧಗಂಟೆ ಮುಂಚಿತವಾಗಿ ಪಟ್ಟಣದ ಎಲ್ಲಾ ಮಾರ್ಗದ ಸಂಚಾರ ಸ್ಥಗಿತವಾಗಿತ್ತು. ಇದರಿಂದ ಜನಸಾಮಾನ್ಯರು ಕಿರಿಕಿರಿ ಅನುಭವಿಸಿದ ಘಟನೆ ನಡೆಯಿತು.
Leave a Comment