ಹಳಿಯಾಳ:- ನಾತಪಂಥದ ರಾಷ್ಟ್ರಗುರು, ಗೊರಖಪುರ ಪಿಠಾಧೀಶರು ಆಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದಿ.4 ಶುಕ್ರವಾರ ಬೆಳಿಗ್ಗೆ 10.30ಕ್ಕೆ ಹಳಿಯಾಳಕ್ಕೆ ಆಗಮಿಸಲಿದ್ದಾರೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಈ ಕುರಿತು ಮಾಹಿತಿ ನೀಡಿದ ಅವರು ಬಿಜೆಪಿ ರಾಜ್ಯ ಸಮೀತಿಯಿಂದ ಹಳಿಯಾಳದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಪಕ್ಷದ ಅಭ್ಯರ್ಥಿಯಾದ ನನ್ನ ಪರ ಚುನಾವಣಾ ಪ್ರಚಾರಾರ್ಥವಾಗಿ ಅವರು ಹಳಿಯಾಳಕ್ಕೆ ಆಗಮಿಸುತ್ತಿದ್ದು ಯೋಗಿ ಆದಿತ್ಯನಾಥ ಹಳಿಯಾಳದ ನಾಥ ಪಂತದವರೊಡನೆ ನಿಕಟ ಸಂಪರ್ಕ ಹೊಂದಿದ್ದು ಸಾಧು ಒರ್ವರು ಹಳಿಯಾಳಕ್ಕೆ ಆಗಮಿಸುತ್ತಿರುವುದು ಹಳಿಯಾಳ ಜನರ ಪುಣ್ಯದ ಫಲ ಎಂದರು. ಪಟ್ಟಣದ ಕೆಎಲ್ಇ ಕಾಲೇಜ್ ಮೈದಾನದಲ್ಲಿ ಹೆಲಿಪ್ಯಾಡ್ ಆಗಮಿಸಲಿದ್ದು ಉದ್ಯೋಗ ವಿದ್ಯಾನಗರದಿಂದ ರೋಡಶೋ ಮೂಲಕ ಪಟ್ಟಣದ ಶೀವಾಜಿ ಮೈದಾನಕ್ಕೆ ಆಗಮಿಸಿ ಅಲ್ಲಿ ಯೋಗಿ ಅವರು ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆಂದು ಹೆಗಡೆ ತಿಳಿಸಿದರು.
Leave a Comment