ಹೊನ್ನಾವರ: ನಮ್ಮ ಸಮಾಜದ ಕೆಲವರು ಆರ್ಥಿಕ ಅಸಹಾಯಕತೆಯಿಂದ ಕೆಲವರು ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ಇವರಿಗೆ ನಮ್ಮ ಸಮಾಜದವರು ಬೆಂಬಲಿಸಲಿದ್ದಾರೆ ಎಂದು ದಿಕ್ಕು ತಪ್ಪಿಸುವಂತಹ ಹೇಳಿಕೆ ಮಾಧ್ಯಮದ ಮೂಲಕ ನೀಡುತ್ತಿದ್ದಾರೆ. ನಮ್ಮ ಸಮಾಜದವರು ಯಾರಿಗೂ ಒಮ್ಮತದಿಂದ ಬೆಂಬಲಿಸು ನಿರ್ಣಯಸಿಲ್ಲ ಎಂದು ಹಳ್ಳೇರ ಸಮುದಾಯದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾದೇವ ಹಳ್ಳೇರ ಹೇಳಿದರು.
ಪಟ್ಟಣದಲ್ಲಿ ಕರೆದ ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿ ನಾವು ಆರ್ಥಿಕವಾಗಿ ಹಿಂದುಳಿದಿದ್ದೇವೆ ಆದರೆ ಯಾವುದೇ ಪಕ್ಷಕ್ಕೆ ಮಾರಿಕೊಂಡಿಲ್ಲ. ಮೇ 5ರಂದು ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮಂಕಾಳವೈದ್ಯರಿಗೆ ಈ ಬಾರಿ ಬೆಂಬಲ ನೀಡುತ್ತಿದ್ದೇವೆ ಎಂದು ಸಮುದಾಯದ ಕೆಲವರು ಹೇಳಿಕೆ ನೀಡಿದ್ದು ಅದು ಅವರ ವೈಯಕ್ತಿಕ ಹೇಳಿಕೆ ಹೊರತು ಸಮುದಾಯದ ಹೇಳಿಕೆಯಲ್ಲ. ನಮ್ಮ ಸಮುದಾಯಕ್ಕೆ ಕಳಂಕ ತರುವ ಇಂತಹ ಪತ್ರಿಕಾ ಹೇಳಿಕೆಯನ್ನು ಸಮಾಜದ ವತಿಯಿಂದ ನಾವು ಖಂಡಿಸುತ್ತೇವೆ. ನಮ್ಮ ಸಮಾಜದವರು ಎಲ್ಲಾ ಪಕ್ಷದವರ ಜೊತೆ ಇದ್ದಾರೆ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ ಎಂದರು.
ಸಮಾಜದ ಗಣೇಶ ಹಳ್ಳೇರ ಮಾತನಾಡಿ ಪತ್ರಿಕೆಗಳಲ್ಲಿ ಹಳ್ಳೇರ ಸಮುದಾಯ ಶಾಸಕ ಮಂಕಾಳ ವೈದ್ಯರಿಗೆ ಬೆಂಬಲವಿದೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಇದು ಅಲ್ಲದೆ ಹಳ್ಳೇರ ಸಮುದಾಯ ಕಾಂಗ್ರೇಸ್ ಜೊತೆಗಿದೆ ಎಂದು ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ ಇದನ್ನು ಕೂಡಾ ನಾವು ಖಂಡಿಸುತ್ತೇವೆ. ಮುಂದೆ ಇಂತಹ ಹೇಳಿಕೆ ನೀಡುವವರ ವಿರುದ್ದ ಸಮಾಜ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಈರು ಹಳ್ಳೇರ, ಶಿವಾನಂದ ಹಳ್ಳೇರ ತಲಗೋಡ, ಅನಂದ ಹಳ್ಳೇರ, ಜಟ್ಟಿ ಹಳ್ಳೇರ, ರುದ್ರೇಶ ಹಳ್ಳೇರ, ಶ್ರೀಧರ ಹಳ್ಳೇರ, ಅಶೋಕ ಹಳ್ಳೇರ ಇತರರು ಉಪಸ್ಥಿತರಿದ್ದರು.
Leave a Comment