ಹೊನ್ನಾವರ;
ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸುನೀಲ ನಾಯ್ಕ ಅವರಿಗೆ ಹೊನ್ನಾವರ ತಾಲೂಕಿನ ಮಾಗೋಡ್, ನಗರಬಸ್ತಿಕೇರಿ ಹಾಗೂ ಕುದ್ರಗಿಯಲ್ಲಿ ಗೌರವಪೂರ್ವಕ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಹೊನ್ನಾವರ ,ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸುನೀಲ ನಾಯ್ಕ ಅವರಿಗೆ ಹೊನ್ನಾವರ ತಾಲೂಕಿನ ಮಾಗೋಡ್, ನಗರಬಸ್ತಿಕೇರಿ ಹಾಗೂ ಕುದ್ರಗಿಯಲ್ಲಿ ಗೌರವಪೂರ್ವಕ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಮಾಗೋಡ ಸನ್ಮಾನ ಸ್ವೀಕರಿಸಿದ ಬಳಿಕ ನಗರಬಸ್ತಿಕೇರಿಯ ಸೀಮಾ ಮುಖ್ಯಪ್ರಾಣ ದೇವಲಾಯಕ್ಕೆ ಆಗಮಿಸಿದ ಶಾಸಕ ಸುನೀಲ ನಾಯ್ಕ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬಳ್ಕೂರು ವ್ಯವಸಾಯ ಸೇವಾ ಸಂಘದ ಅಧ್ಯಕ್ಷರಾದ ಕೇಶವ ನಾಯ್ಕ ಮಾತನಾಡಿ ಭಟ್ಕಳ ಕ್ಷೇತ್ರದಲ್ಲಿ ಹೆಮ್ಮೆಯ ಶಾಸಕರಾದ ದಿವಂಗತ ಚಿತ್ತರಂಜನ ನೆನಪನ್ನು ಮಾಡುವ ನಿಟ್ಟಿನಲ್ಲಿ ಯುವಕರೆಲ್ಲರೂ ಸೇರಿ ಒಗ್ಗಟ್ಟಾಗಿ ಈ ಬಾರಿ ಸುನೀಲ ನಾಯ್ಕರನ್ನು ಶಾಸಕರನ್ನಾಗಿ ಮಾಡಿದ್ದಾರೆ. ಕ್ಷೇತ್ರದಲ್ಲಿ ಶೇಕಡಾ 65ಕ್ಕಿಂತ ಹೆಚ್ಚು ಮತಗಳನ್ನು ನೀಡಿ ಅಭೂತಪೂರ್ಣವಾದ ಗೆಲುವನ್ನು ನೀಡಿದ್ದಾರೆ. ನಮ್ಮ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಹೆಚ್ಚಿನ ಮತಗಳನ್ನು ಸುನೀಲ ನಾಯ್ಕರಿಗೆ ನೀಡಲಾಗಿದೆ. ಅಷ್ಟೆ ಅಲ್ಲದೆ ನಾವೆಲ್ಲರು ಸೇರಿ ಇಂದು ಸನ್ಮಾನ ಮಾಡಿದ್ದೇವೆ ಸನ್ಮಾನ ಎಂದರೆ ಅವರಿಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಹೊರೆಸಿದಂತೆ . ನಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಮುಂದಿನ ದಿನದಲ್ಲಿ ದೂರವಾಗುವಂತ ಪ್ರಯತ್ನ ಶಾಸಕರು ನಡೆಸಲಿ ಎಂದರು.ದೇವಾಲಯದ ಅರ್ಚಕರಾದ ಸುರಾಲು ಚಂದ್ರಶೇಖರ ಭಟ್ಟ ಮಾತನಾಡಿ ಕ್ಷೇತ್ರದಲ್ಲಿ ಕಡಿಮೆ ಅವಧಿಯಲ್ಲಿ ದ್ವಿಗಿಜಯ ಸಾಧಿಸುವ ಮೂಲಕ ಶಾಸಕರಾಗಿದ್ದಾರೆ ಕ್ಷೇತ್ರದಲ್ಲಿ ವಿವಿಧ ಸಮಸ್ಯೆಗಳಿವೆ ಅವೆಲ್ಲ ಮುಂದಿನ ದಿನದಲ್ಲಿ ಬಗೆಹರಿಯುವಂತಾಗಲಿ ಎಂದು ಶುಭ ಹಾರೈಸಿದರು. ನಗರ ಬಸ್ತಿಕೇರಿ ಪಂಚಾಯತ ಅಧ್ಯಕ್ಷೆ ಅನ್ನಪೂರ್ಣ ಶಾಸ್ತ್ರಿ ಮಾತನಾಡಿ ನಗರಬಸ್ತಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ತಿಳಿಸಿ ಮುಂದಿನ ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸಿ ಮಾದರಿ ಗ್ರಾಮ ಪಂಚಾಯತನ್ನಾಗಿ ಮಾಡಬೇಕೆಂದು ಮನವಿ ಮಾಡಿಕೊಂಡರು. ಸನ್ಮಾನ ಸ್ವೀಕರಿಸಿ ಶಾಸಕ ಸುನೀಲ ನಾಯ್ಕ ಮಾತನಾಡಿ ಈ ಗೆಲುವು ನಿಮ್ಮೆಲ್ಲರ ಗೆಲುವು.ಈ ಬಾರಿ ಚುನಾವಣೆಯಲ್ಲಿ ನಗರಬಸ್ತಿಕೇರಿ ಅತಿಹೆಚ್ಚು ಮತ ನೀಡಿದ ಗ್ರಾಮ ಪಂಚಾಯತ್ ಆಗಿದೆ. ಹೊನ್ನಾವರ ತಾಲೂಕು ನನ್ನ ಗೆಲುವಿಗೆ ಮುಖ್ಯವಾದ ಪಾತ್ರ ವಹಿಸುತ್ತದೆ. ಈ ಚುನಾವಣೆ ಕಾಂಗ್ರೆಸ್-ಬಿಜೆಪಿ ಮದ್ಯೆ ಇರದೇ ದೌರ್ಜನ್ಯ, ಅವ್ಯವಹಾರ, ಧರ್ಮ-ಅಧರ್ಮ ಹಾಗೂ ಹಣ ಬಲದ ವಿರುದ್ದ ನಡೆದಿತ್ತು ಅದರಲ್ಲಿ ನಾನು ಗೆಲುವು ಸಾಧಿಸಿದ್ದೆನೆ.ನಾನು ಶಾಸಕನಾಗಿ ಆಯ್ಕೆಯಾಗಿದ್ದು ನೀವು ನೀಡಿದ ಭಿಕ್ಷೆಯಿಂದ ಎಂದರು. ಈ ಶರಾವತಿ ಹೊಳೆಸಾಲು ಭಾಗದಲ್ಲಿ ಅಭೂತ ಪೂರ್ವ ಯಶಸ್ಸು ನನ್ನ ಪಾಲಿಗೆ ಇದೆ ಎಂದು ಚುನಾವಣೆಯಲ್ಲಿ ಸಾಬಿತಾಗಿದೆÉ. ನೀವು ನೀಡಿದ ಪ್ರತಿ ಮತಕ್ಕೂ ಋಣ ತೀರಿಸುವ ಕೆಲಸ ಮುಂದಿನ ದಿನದಲ್ಲಿ ಮಾಡುತ್ತೇನೆ ಎಂದರು. ವೇದಿಕೆಯಲ್ಲಿ ಬಿಜೆಪಿ ತಾಲೂಕ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ, ತಾಲೂಕ ಪಂಚಾಯತ ಮಾಜಿ ಅಧ್ಯಕ್ಷ ಶಂಭು ಬೈಲಾರ, ತಾಲೂಕ ಪಂಚಾಯತ ಮಾಜಿ ಸದಸ್ಯೆ ಜಯಂತಿ ನಾಯ್ಕ, ಬಿ.ಟಿ ಗಣಪತಿ ನಾಯ್ಕ, ಸೇರಿದಂತೆ ಪ್ರಮುಖರು ಉಪಸ್ದಿತರಿದ್ದರು.
Leave a Comment