ಹೊನ್ನಾವರ .ಕರ್ನಾಟಕ ಕ್ರಾಂತಿರಂಗದ ವತಿಯಿಂದ 2 ನೇ ವರ್ಷದ ನಾಡಹಬ್ಬ ಕಾರ್ಯಕ್ರಮ ಇದೇ ಬರುವ 27ರಂದು ನಡೆಯಲಿದೆ ಎಂದು ಹೊನ್ನಾವರ ತಾಲೂಕ ಅಧ್ಯಕ್ಷ ಡಾ ಎಸ್. ಡಿ ಹೆಗಡೆ ಮಾಧ್ಯಮಗೊಷ್ಟಿಯಲ್ಲಿ ತಿಳಿಸಿದರು.
ಕಾಂತ್ರಿರಂಗದ ಜಿಲ್ಲಾ ಕಾರ್ಯಲಯದಲ್ಲಿ ನಡೆದ ಮಾಧ್ಯಮಗೊಷ್ಟಿಯನ್ನು ಉದ್ದೇಶಿಸಿ ಡಾ ಎಸ್.ಡಿ.ಹೆಗಡೆ ಮಾತನಾಡಿ ಬೆಳಿಗ್ಗೆ 9.30 ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿಗಳಾದ ರೋಹಿದಾಸ ನಾಯ್ಕ, ಬಿ.ಎನ್.ವಾಸರೆ, ಸೇರಿದಂತೆ ಹಿರಿಯ ಸಾಹಿತಿಗಳು ಹಾಗೂ ಮಾಜಿ ಶಾಸಕ ವೈಎಸ್ವಿ. ದತ್ತಾ ಭಾಗವಹಿಸಲಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ ಮಾತನಾಡಿ 2 ನೇ ವರ್ಷದ ನಾಡಹಬ್ಬ ವಿಜೃಂಬಣೆ ನಡೆಯಲಿದ್ದು ಅಂದು 5 ಗಂಟೆಗೆ ದುರ್ಗಾಕೇರಿಯ ದಂಡಿನ ದುರ್ಗಾ ದೇವಾಲಯದಿಂದ ಮೆರವಣೆಗೆ ನಡೆಯಲಿದೆ. 6 ಗಂಟೆಗೆ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಟ್ಕಳ ಕ್ಷೇತ್ರದ ಶಾಸಕ ಸುನೀಲ ನಾಯ್ಕ, ಕುಮುಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಆಗಮಿಸಲಿದ್ದಾರೆ. ಚಿಕ್ಕ ಮಕ್ಕಳಿಗೆ ಛದ್ಮವೇಶ ಹಾಗೂ ಹಿರಿಯರಿಗೆ ವೀರ ಯೋಧರ ಅಥವಾ ವನಿತೆಯರ ರೂಪಕ ಕಾರ್ಯಕ್ರಮ ನಂತರ ಎಸ್.ಎಸ್.ಡಾನ್ಸ ಅಕಾಡೆಮೆಯಿಂದ ಮನೊರಂಜನಾ ಕಾರ್ಯಕ್ರಮ ನಡೆಯಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜ್ಞಾನೇಶ್ವರ ನಾಯ್ಕ, ಮೊಳ್ಕೋಡ ಘಟಕದ ಅಧ್ಯಕ್ಷ ನಾರಾಯಣ ಗೌಡ ತಾಲೂಕ ಉಪ ಕಾರ್ಯದರ್ಶಿ ರಾಜೇಶ ನಾಯ್ಕ ಉಪಸ್ದಿತರಿದ್ದರು.
Leave a Comment