ಹಳಿಯಾಳ:- ಇತ್ತೀಚೆಗೆ ನಡೆದ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ವಂಚನೆಯಾಗಿರುವ ಸಂಶಯವಿದ್ದು ಈವಿಎಮ್ ಮತಯಂತ್ರಗಳ ಮೂಲಕ ಮತಗಳ ಪರಿವರ್ತನೆ ಮಾಡಿರುವ ಬಗ್ಗೆ ತಮಗೆ ಬಲವಾದ ಸಂದೇಹವಿದ್ದು ಈ ಬಗ್ಗೆ ತನಿಖೆಗಾಗಿ ಹಾಗೂ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದ ಮರು ಚುನಾವಣೆಗಾಗಿ ಒತ್ತಾಯಿಸಿ ನಾವು ಚುನಾವಣಾ ಆಯೋಗಕ್ಕೆ ಹಾಗೂ ನ್ಯಾಯಾಲಯಕ್ಕೆ ದೂರನ್ನು ನೀಡುವುದಾಗಿ ಠೇವಣಿ ಕಳೆದುಕೊಂಡು ಹೀನಾಯ ಸೋಲನ್ನು ಅನುಭವಿಸಿರುವ ಹಳಿಯಾಳ ಕ್ಷೇತ್ರದ ಪರಾಜಿತ ಜೆ.ಡಿ.ಎಸ್ ಅಭ್ಯರ್ಥಿ ಕೆ.ಆರ್.ರಮೇಶ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವರು ಕುತಂತ್ರದಿಂದ ನನ್ನನ್ನು ಸೋಲಿಸಿದ್ದಾರೆ ಹಳಿಯಾಳ ಕ್ಷೇತ್ರದಲ್ಲಿ ಜೆ.ಡಿ.ಎಸ್ ಪಕ್ಷಕ್ಕೆ ಬಿದ್ದ ಮತಗಳ ಪ್ರಮಾಣ ನೋಡಿದ್ದರೇ ಮತಯಂತ್ರಗಳ ಬಗ್ಗೆ ಅನುಮಾನ ಮೂಡುತ್ತಿದೆ. ಚುನಾವಣೆಯಲ್ಲಿ ಜೆ.ಡಿ.ಎಸ್ ಅತ್ಯಲ್ಪ ಮತಗಳನ್ನು ಪಡೆದಿದೆ ಎಂದರೇ ಇದರರ್ಥ ನಮ್ಮ ಮತಗಳನ್ನು ತಂತ್ರಜ್ಞಾನದ ನೆರವಿನಿಂದ ಬೇರೆ ಪಕ್ಷಕ್ಕೆ ವರ್ಗಾಯಿಸುವ ಸಾಧ್ಯತೆಗಳು ಹೆಚ್ಚಾಗಿದ್ದು ನಮ್ಮ ಲೆಕ್ಕಾಚಾರ ಹಾಗೂ ಕಾರ್ಯಕರ್ತರು ಅಭಿಮಾನಿಗಳು ನೀಡಿದ ಮಾಹಿತಿಯನ್ನು ನೋಡಿದರೇ ನಮಗೆ ಮೋಸ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ ರಮೇಶ. ದೇಶಪಾಂಡೆ ಜೋತೆ ಫಿಕ್ಸ್ ಆಗಿಲ್ಲ:- ಚುನಾವಣೆಯ ಕೊನೆಯ ಗಳಿಗೆಯಲ್ಲಿ ನಾನು ಸಚಿವ ಆರ್.ವಿ.ದೇಶಪಾಂಡೆಯವರ ಜೊತೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿರುವುದಾಗಿ ಅಪಪ್ರಚಾರ ಮಾಡಲಾಗುತ್ತಿದ್ದು ನಾವು ಈ ಬಗ್ಗೆ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಲು ಸಿದ್ದರಿರುದಾಗಿ ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಜೆ.ಡಿ.ಎಸ್ ಕ್ಷೇತ್ರಾಧ್ಯಕ್ಷ ನಾಗೇಂದ್ರ ಜಿವೋಜಿ, ಮುಖಂಡರಾದ ಸುಭಾಸ ಗೌಡ, ಲೋಕಪ್ಪ ಗೌಡ, ಸುಭಾನಿ ಹುಬ್ಬಳ್ಳಿ, ಪ್ರಕಾಶ ಗಿರಿ, ನಸ್ರುಲ್ಲಾ ಖಾನ್, ಯಲ್ಲಪ್ಪ ಹೊನ್ನೋಜಿ, ರಮೇಶ ಪೂಜಾರಿ, ನಾರಾಯಣ ದಡ್ಡಿ, ಪುಂಡ್ಲೀಕ್ ನರೇಂದ್ರ, ಪುಂಡ್ಲೀಕ್ ರೆಡೆಕರ್, ರಮೇಶ ಸುತಾರ, ನಂದಿನಿ ಲೋಟ್ಲೇಕರ, ಸಾವಿತ್ರಿ ಪಾಟೀಲ, ಅನಿಲ ನಾಯ್ಕ, ಪ್ರಶಾಂತ ಇದ್ದರು.
Leave a Comment