ಹಳಿಯಾಳ:- ಭಾನುವಾರ ಮಧ್ಯಾಹ್ನದ ಬಳಿಕ ಹಳಿಯಾಳ ತಾಲೂಕಿನಲ್ಲಿ ಸುರಿದ ಭಾರಿ ಗುಡುಗು, ಸಿಡಿಲು ಹಾಗೂ ಬಿರುಗಾಳಿಯ ಅಬ್ಬರಕ್ಕೆ ದನದ ಕೊಟ್ಟಿಗೆ ಬಿದ್ದು 2 ಎತ್ತುಗಳು ಅಸುನಿಗಿರುವ ದುರ್ಘಟನೆ ತಾಲೂಕಿನ ಹಲಸಿ ಗ್ರಾಮದ ಹೊಲದಲ್ಲಿ ನಡೆದಿದೆ. ಕೆಸರೊಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಲಸಿ ಗ್ರಾಮ ವ್ಯಾಪ್ತಿಯಲ್ಲಿ ಕೃಷಿ ಜಮೀನನ್ನು ಹೊಂದಿರುವ ಹಳಿಯಾಳ ಪಟ್ಟಣದ ಕಸಬಾಗಲ್ಲಿ ನಿವಾಸಿ ರೈತ ನಾರಾಯಣ ಹೂವಪ್ಪಾ ಮೆಲಗಿ ಅವರಿಗೆ ಸೇರಿದ ದನದ ಕೊಟ್ಟಿಗೆ ಬಿರುಗಾಳಿಯ ಅಬ್ಬರಕ್ಕೆ ಧಾರಾಶಾಹಿಯಾಗಿದ್ದು ಅದರಲ್ಲಿ ಕಟ್ಟಲಾಗಿದ್ದ ಸುಮಾರು 1 ಲಕ್ಷ ರೂ. ಬೆಲೆ ಬಾಳುವ 2 ಸದೃಢ ಎತ್ತುಗಳು ಅಸುನಿಗಿದ್ದು ಬಡ ರೈತ ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Leave a Comment