ಹೊನ್ನಾವರ :
ತಾಲೂಕ ಪಂಚಾಯತ ಸಭಾಭವನದಲ್ಲಿ ಸಾಮನ್ಯ ಸಭೆಯಲ್ಲಿ ವಿವಿಧ ಇಲಾಕೆಗಳ ಪ್ರಗತಿಪರಿಶೀಲನೆ ಹಾಗೂ 2018-19ನೇ ಪ್ರಸಕ್ತ ಸಾಲಿನ ಮುಂಗಡ ಆಯ-ವ್ಯಯ ಅಂದಾಜು ಪತ್ರ ಮಂಡನೆ ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಹೊನ್ನಾವರ . ತಾಲೂಕ ಪಂಚಾಯತ ಸಭಾಭವನದಲ್ಲಿ ಸಾಮನ್ಯ ಸಭೆಯಲ್ಲಿ ವಿವಿಧ ಇಲಾಕೆಗಳ ಪ್ರಗತಿಪರಿಶೀಲನೆ ಹಾಗೂ 2018-19ನೇ ಪ್ರಸಕ್ತ ಸಾಲಿನ ಮುಂಗಡ ಆಯ-ವ್ಯಯ ಅಂದಾಜು ಪತ್ರ ಮಂಡನೆ ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ವಿವಿಧ ಲೆಕ್ಕ ಶೀರ್ಷಿಕೆ ಅಡಿ ತಾಲೂಕಾ ಪಂಚಾಯತ್ ಕಾರ್ಯಕ್ರಮಗಳಿಗೆ 6276.80ಲಕ್ಷ ರೂ ಅನುದಾನ ನಿಗದಿಪಡಿಸಲಾಗಿದೆ ಎಂದು ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ ಮುಂಗಡ ಆಯ-ವ್ಯಯ ಮಂಡನೆ ಮಾಡಿದರು. ಕೆಲ ಇಲಾಖೆಯ ಅಧಿಕಾರಿಗಳ ಗೈರು ಹಾಜರಾತಿಯನ್ನು ಗಮನಿಸಿ ಸದಸ್ಯರು ಅಧಿಕಾರಿಗಳ ವಿರುದ್ದ ಅಸಮಾಧಾನ ಹೊರಹಾಕಿದರು.ಸಾಮನ್ಯ ಸಭೆಗೆ ಬಂದು ಸಭೆ ಮಾಡುವುದು ಹಾಗೆಯೇ ಎದ್ದು ಹೋಗುವುದು ಮಾತ್ರ ನಡೆಯುತ್ತಿದೆ ಕೆಲ ಇಲಾಖೆಯವರು ಹೇಳಿದಂತೆ ಯಾವುದೇ ಕೆಲಸ ಮಾಡುತ್ತಿಲ್ಲ ಪಾಲನಾ ವರದಿ ನೀಡದ ಅಧಿಕಾರಿಗಳು ಸಭೆಗೆ ಬರುವುದು ಬೇಡ ಎಂದು ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ ಅಸಮಧಾನ ವ್ಯಕ್ತಪಡಿಸಿದರು.
ವಿದ್ಯುತ್ಇಲಾಖೆ ಸಂಬಂದಿತ ಚರ್ಚೆಯಲ್ಲಿ ಸದಸ್ಯ ತುಕಾರಾಂ ನಾಯ್ಕ ಮಾತನಾಡಿ,ಹೆಸ್ಕಾಂ ಇಲಾಖೆಯವರಿಗೆ ತಾಲೂಕಿನ ಕರ್ಕಿ,ಹಳದಿಪುರ ಸೇರಿದಂತೆ ಕೆಲವಡೆ ವಿದ್ಯುತ್ ತಂತಿ ಜೋಲಾಡುತ್ತ ಅಪಾಯದ ಅಂಚಿನಲ್ಲಿದೆ ಆ ಬಗ್ಗೆ ಗಮನಹರಿಸಿ ಕೂಡಲೇ ಸರಿ ಪಡಿಸುವಂತೆ ಆಗ್ರಹಿಸಿದರು.À ಅಲ್ಲದೇ ಪ್ರತಿನಿತ್ಯ ವಿದ್ಯುತ್ ಕಣ್ಣಾಮುಚ್ಚಾಲೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಸಣ್ಣ ನೀರಾವರಿ ಇಲಾಖಾ ಕುರಿತ ಚರ್ಚೆ ಬಂದಾಗ ಸದಸ್ಯ ಗಣಪಯ್ಯ ಗೌಡ ಮಾತನಾಡಿ ಸಣ್ಣ ನೀರಾವರಿ ಇಲಾಕಾ ಅಧಿಕಾರಿಗಳು ಸಭೆಗೂ ಬರುತ್ತಿಲ್ಲ ಯಾವುದೇ ಕೆಲಸ ನಡೆಸುತ್ತಿಲ್ಲ ಎನ್ನುತ್ತಾ, ನೀರಾವರಿ ಪೂರೈಕೆ ಯೋಜನೆಯಲ್ಲಿ ಸರ್ಕಾರದ ಬೊಕ್ಕಸ ಖಾಲಿಯಾಗಿದೆಯೆ ಹೊರತು ಯಾವುದೇ ಕೆಲಸವಾಗಿಲ್ಲ ಯೋಜನೆಗಳಿಗೆ ಹಣ ಮಂಜೂರಿ ಮಾಡುವ ಮೊದಲು ಮಂಜೂರಿಯಾದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಸಭೆಯಲ್ಲಿ ತಾಕಿತು ಮಾಡಿದರು.
ಶಿಕ್ಷಣ ಇಲಾಖೆ ಕುರಿತ ಚರ್ಚೆಯಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ಗೀರಿಶ್ ಪದಕಿ ಸಭೆಯಲ್ಲಿ ಮಾಹಿತಿ ನೀಡಿ, ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹೊನ್ನಾವರ ತಾಲ್ಲೂಕು ಜಿಲ್ಲೆಗೆ ಎರಡನೇ ಸ್ಥಾನ ಗಳಿಸಿದ್ದು, ಹೆಮ್ಮೆಯ ಸಂಗತಿಯಾಗಿದೆ ಎಂದರು.ತಾಲೂಕಿನಲ್ಲಿ ನಡೆದ ಕೋಮುಗಲಭೆಗಳ ಪರಿಣಾಮವಾಗಿ ಮಕ್ಕಳಿಗೆ ಹೆಚ್ಚಿನ ಭೋದನಾ ಸಮಯ ನೀಡಲು ಸಾಧ್ಯವಾಗಿಲ್ಲ ಇಲ್ಲದಿದ್ದಲ್ಲಿ ಇನ್ನು ಉತ್ತಮ ಫಲಿತಾಂಶ ಬರಲು ಸಾದ್ಯವಾಗುತ್ತಿತ್ತು ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕುರಿತ ಚರ್ಚೆಯಲ್ಲಿ ಐಆರ್ಬಿ ಅವಾಂತರಗಳ ಬಗ್ಗೆ ಚರ್ಚೆಯಾಯಿತು.ತಹಸಿಲ್ದಾರ್ ಮಂಜುಳಾ ಭಜಂತ್ರಿ ಮಾತನಾಡಿ ,ಇಗಾಗಲೇ ಆಯ್ಆರ್ಬಿ ಅಧಿಕಾರಿಗಳೊಂದಿಗೆ ಉಪವಿಭಾಗಧಿಕಾರಿಗಳು ಚರ್ಚೆ ನಡೆಸಿದ್ದು ತಗ್ಗು ಪ್ರದೇಶದಲ್ಲಿದ್ದವರಿಗೆ ಸ್ಥಳಾಂತರ ಮಾಡಲು ತಿಳಿಸಿದ್ದು ಪರಿಹಾರ ನೀಡಲು ಸೂಚಿಸಿದ್ದಾರೆ ಎಂದರು.ಆರೊಗ್ಯ ಇಲಾಖೆ, , ಮೀನುಗಾರಿಕೆ, ಕೃಷಿ, ಅರಣ್ಯ, ಶಿಕ್ಷಣ, ಶಿಸುಅಭಿವೃದ್ದಿ, ಸಮಾಜಕಲ್ಯಾಣ ಸೇರಿದಂತೆ ಹಲವು ಇಲಾಖೆಯವರು ಹಾಜರಿದ್ದು ಇಲಾಖಾವಾರು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಲಲಿತಾ ನಾಯ್ಕ, ತಹಸಿಲ್ದಾರ್ ಮಂಜುಳಾ ಭಜಂತ್ರಿ ,ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹಮದ್ ಇರಶಾದ,ಕಾರ್ಯನಿರ್ವಹಣಾಧಿಕಾರಿ ಯಶ್ವಂತ ಧುರಿ ಸೇರಿದಂತೆ ತಾಲೂಕಾ ಪಂಚಾಯತ್ ಸದಸ್ಯರು ಉಪಸ್ದಿತರಿದ್ದರು.
Leave a Comment