ಹೊನ್ನಾವರ : À ಕುಮಟಾ- ಹೊನ್ನಾವÀ ಶಾಸಕರಾದ ದಿನಕರ ಕೆ. ಶೆಟ್ಟಿಯವರನ್ನು ಭೇಟಿಯಾಗಿ ಹೊನ್ನಾವರ ಬಸ್ ಸ್ಟ್ಯಾಂಡ್, ಹಲವು ವರ್ಷದಿಂದ ಅನುಸರಿಸಿ ಬರುತ್ತಿರುವ ಸಾರಿಗೆಯ ನಿಯಮ ಬಾಹಿರ ಚಟುವಟಿಕೆಯನ್ನು ಗಮನಕ್ಕೆ ತಂದು ಅದಕ್ಕೆ ಶಾಸಕರಿಂದ ಪರಿಹಾರ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ಬಹುದಿನದಿಂದ ಹೊನ್ನಾವರದ ಜನತೆಯು ರಾತ್ರಿ 8.00 ರ ನಂತರ ಯಾವುದೇ ದೂರದ ಊರಿಗೆ ತೆರಳುವ ಸಾರಿಗೆ ಬಸ್ಸು ಹೊನ್ನಾವರದ ಬಸ್ ಸ್ಟ್ಯಾಂಡ್ಗೆ ಹೋಗದೆ ಶರಾವತಿ ವೃತ್ತದ ಹತ್ತಿರ ನಿಂತು ಪ್ರಯಾಣಿಕರನ್ನು ಹತ್ತಿಸುವುದು ಹಾಗೂ ಇಳಿಸುವುದನ್ನೇ ರೂಢಿ ಮಾಡಿ ಬಂದಿದ್ದರು. ಮಂಗಳೂರಿನಿಂದ ರೋಣ, ಗದಗ, ಗಜೆಂದ್ರಗಢ, ಹುಬ್ಬಳ್ಳಿ ಧಾರವಾಡ ಮಾರ್ಗವಾಗಿ ಹೋಗುವ ಬಸ್ಸಿಗೆ ರಾತ್ರಿ 2 ರ ವರೆಗೆ ಕಾಯುತ್ತಾ ನಿಲ್ಲುತ್ತಿದ್ದ ಪ್ರಯಾಣಿಕರಲ್ಲಿ ಹೆಂಗಸರು, ಏಳೇ ಕಂದಮ್ಮಗಳು ಹಾಗೂ ಮಕ್ಕಳು ಇರುತ್ತಿದ್ದರು. ಕುಳಿತುಕೊಳ್ಳಲು ಕಿಂಚಿತ್ತು ಸೌಲಭ್ಯವಿಲ್ಲದ ಜಾಗದಲ್ಲಿ ಇವರುಗಳು ಬಸ್ಸಿಗೆ ಕಾಯುತ್ತಾ ನಿಲ್ಲುವುದನ್ನು ಗಮನಿಸಿದ ನನ್ನ ಕನಸಿನ ಹೊನ್ನಾವರದ ತಂಡ ಇಂದು ಶಾಸಕರಿಗೆ ಭೇಟಿ ಇಟ್ಟು ಸಮಸ್ಯೆಯ ಬಗ್ಗೆ ವಿವರಿಸಿದಾಗ ತಕ್ಷಣ ಶಾಸಕರು ಶಿರಸಿ ವಲಯ ಸಾರಿಗೆ ವ್ಯವಸ್ಥಾಪಕರಿಗೆ ಕ್ರಮ ಕೈಗೊಳ್ಳಲು ಸೂಚಿಸಿ, ಹೊನ್ನಾವರದ ಬಸ್ ಸ್ಟ್ಯಾಂಡಿಗೆ ಎಲ್ಲಾ ಬಸ್ಸು ಖಡ್ಡಾಯವಾಗಿ ಹೊಗಲು ಸೂಚಿಸಲಾಯಿತು.
ನನ್ನ ಕನಸಿನ ಕರ್ನಾಟಕದ ಸದಸ್ಯರಾದ ಗೌರವ ಕಲ್ಯಾಣಪುರ್, ರಾಘವ ಮೇಸ್ತ ಹಾಗೂ ಯುವ ಬಿಗ್ರೇಡ್ನ ಗಜಾನನ ಶೇಟ್, ರಾಮದಾಸ್ ಹಳದೀಪುರ ಹಾಗೂ ಚೇತಕ್ ಶೇಟ್ ಈ ಸಂದರ್ಭದಲ್ಲಿ ಹಾಜರಿದ್ದರು.
Leave a Comment