ಹೊನ್ನಾವರ: ಭಾರತ ಸೇವಾದಳ ಹೊನ್ನಾವರ ತಾಲೂಕಾ ಸಮಿತಿಯು ತಾಲೂಕಾ ಸಂಘಟಕ ಡಾ.ಸುರೇಶ ತಾಂಡೇಲ್ರಿಗೆ ಪಿ.ಎಚ್.ಡಿ ಪದವಿ ಗಳಿಸಿದಕ್ಕೆ ಅಭಿನಂದಿಸಿ ಸನ್ಮಾನಿಸಿ ಸೇವಾದಳದಲ್ಲಿ ಒಂದು ದಶಕದಿಂದ ತಾಲೂಕಾ ಸಂಘಟಕರಾಗಿ ಕೆಲಸ ಮಾಡುತ್ತಿರುವ ಸುರೇಶ ತಾಂಡೇಲ್ ಉತ್ತಮ ಶಿಕ್ಷಕ ಹಾಗೂ ಸಂಘಟಕ, ಇವರ ಸಂಶೋಧನೆಯು ಮುಂದಿನ ಪೀಡಿಗೆಗೆ ಮಾರ್ಗದರ್ಶಿ ಆಗಲಿದೆ. ಕರಾವಳಿಯ ಕ್ರಿ.ಶ ಪೂರ್ವ 500 ರಿಂದ ಕ್ರಿ.ಶ 1400 ವರೆಗಿನ ಆರ್ಥಿಕ, ಸಾಮಾಜಿಕ ಜೀವನವನ್ನು ಪರಿಶ್ರಮದಿಂದ ಅಧ್ಯಯನ ಮಾಡಿ ಸಮಾಜಕ್ಕೆ ನೀಡಿದ್ದಾರೆ ಎಂದು ತಾಲೂಕಾ ಅಧ್ಯಕ್ಷರ ವಾಮನ ಎಸ್ ನಾಯ್ಕ ಹೇಳಿದರು. ತಾಲೂಕಾ ಸಮಿತಿಯ ಉದಯ ಎಮ್ ನಾಯ್ಕ, ಮೂಡ್ಕಣಿ, ಐ.ವಿ.ನಾಯ್ಕ, ಹೊನ್ನಾವರ, ಉದಯ ಆರ್ ನಾಯ್ಕ, ಮಡಿ, ಗಜಾನನ ನಾಯ್ಕ, ವಿದ್ಯಾ ಹೆಗಡೆ, ಅಳಕಾರ, ಹೊನ್ನಿ ಮುಕ್ರಿ, ಹೊನ್ನಾವರ ಜಿ.ಎಮ್.ಮುಕ್ರಿ, ಸಂಶಿ ಹಾಗೂ ತಾಲೂಕಾ ಸಮಿತಿಯ ಸರ್ವ ಸದಸ್ಯರು ಅಭಿನಂದನಾ ಸಭೆಯಲ್ಲಿ ಭಾಗವಹಿಸಿದ್ದರು.
Leave a Comment