ಹೊನ್ನಾವರ: ತಾಲೂಕಿನ ವಿವಿಧ ಭಾಗದ 20ಕ್ಕು ಹೆಚ್ಚು ಜನರು ಡೆಂಗ್ಯೂ ರೋಗದಿಂದ ತಾಲೂಕಾ ಆಸ್ಪತ್ರೆಗೆ ದಾಖಲಾಗಿದ್ದು ಈ ಹಿನ್ನಲೆಯಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಆಸ್ಪತ್ರೆಗೆ ರವಿವಾರ ಬೆಳಿಗ್ಗೆ ಎಂಟು ಗಂಟೆಗೆ ಧಿಡಿರ್ ಆಗಮಿಸಿ ರೋಗಿಗಳ ಆರೋಗ್ಯ ಸ್ಥಿತಿ ವಿಚಾರಿಸಿದರು
ಈ ಸಂಧರ್ಬದಲ್ಲಿ ಅವರು ಪತ್ರಿಕೆಯೊಂದಿಗೆ ಮಾತನಾಡಿ ಕೆಲವು ದಿನಗಳಿಂದ ತಾಲೂಕು ವ್ಯಾಪ್ತಿಯಲ್ಲಿ ಡೆಂಗ್ಯು ಪ್ರಕರಣ ಪತ್ತೆಯಾಗಿದೆ. ಹೊಳೆಸಾಲು ತೀರ ಪ್ರದೇಶವಾದ ಮಾಗೋಡ, ಹಾಮಕ್ಕಿ ,ಬಳ್ಕೂರು, ಇಡಗುಂಜಿ, ಅನಂತವಾಡಿ, ಕುದ್ರಗಿ, ಸಂಶಿ, ತಲಗೋಡ ಗ್ರಾಮಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾದ ಬಗ್ಗೆ ವೈದ್ಯರು ತಿಳಿಸಿದ್ದು ದಾಖಲಾದವರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರ ಬಳಿ ವಿಚಾರಿಸಿದಾಗ ಶೀಘ್ರ ಚೇತರಿಕೆಗೊಂಡು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದಿದ್ದಾರೆ ಡಿಎಚ್ಒ ಹಾಗೂ ತಾಲೂಕಾ ಮಟ್ಟದ ಎಲ್ಲಾ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ತಿಳಿಸಿ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಗ್ರಾಮೀಣ ಮಟ್ಟದಲ್ಲಿ ಫಾಗಿಂಗ್ ವ್ಯವಸ್ಥೆ ಮಾಡಲು ಪಿ.ಡಿ.ಒಗಳಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಜೊತೆಯು ಈ ಬಗ್ಗೆ ಮಾತನಾಡಿದ್ದೇನೆ. ಅತಿಹೆಚ್ಚು ಡೆಂಗ್ಯುನಿಂದ ಬಳಲುತ್ತಿದ ನಾಲ್ವರಲ್ಲಿ ಮಣಿಪಾಲಕ್ಕೆ ಇಬ್ಬರು ಹಾಗೂ ಎಜೆ ಹಾಸ್ಪಿಟಲ್ಗೆ ಇಬ್ಬರು ರೋಗಿಗಳು ದಾಖಲಾಗಿದ್ದಾರೆ. ಅವರು ಸಹ ಚೇತರಿಸಿಕೊಳ್ಳುತ್ತಿರುವ ಬಗ್ಗೆ ಅಲ್ಲಿನ ವೈದ್ಯರು ನನ್ನ ಸಂಪರ್ಕದಲ್ಲಿದ್ದು ಅವರ ಬಳಿ ಮಾಹಿತಿ ಪಡೆದಿದ್ದೇನೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ಕೊಟ್ಟು ಶಾಲೆಗಳಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ಹಾಗೂ ಕರಪತ್ರಗಳ ಮೂಲಕ ಜಾಗ್ರತಿ ಮೂಡಿಸುವ ಕಾರ್ಯಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಭಟ್ಕಳ ತಾಲೂಕಿನಲ್ಲಿ ಇಂತಹ ಯಾವುದೇ ಪ್ರಕರಣÀ ಪತ್ತೆಯಾಗಿಲ್ಲ ಆದರೆ ಅಲ್ಲು ಸಹ ಮುಂಜಾಗ್ರತೆ ವಹಿಸಿದ್ದೇವೆ, ಸಾರ್ವಜನಿಕರು ಮನೆಯ ಸುತ್ತ-ಮುತ್ತಲಿನ ವಾತಾವರಣವನ್ನು ಸರಿಯಾಗಿಟ್ಟುಕೊಂಡು ಸ್ವಚ್ಚತೆಗೆ ಗಮನಕೊಟ್ಟು ಎಲ್ಲು ಕೊಳಚೆ ನೀರುಗಳು ನಿಲ್ಲದಂತೆ ನೋಡಿಕೊಳ್ಳಿ ಎಂದರು.
ಈ ಸಂಧರ್ಬದಲ್ಲಿ ಹಾಜರಿದ್ದ ಡಾ.ಪ್ರಕಾಶ ನಾಯ್ಕ, ಡಾ.ಶಿವಾನಂದ ,ಡಾ.ಕ್ರಷ್ಣಾ.ಜಿ, ಇವರು ರೋಗಿಗಳ ಆರೋಗ್ಯ ಸ್ಥಿತಿಯ ಬಗ್ಗೆ ಶಾಸಕರಿಗೆ ವರದಿ ನೀಡಿದರು. ಎರಡುಗಂಟೆಗಳ ಕಾಲ ಆಸ್ಪತ್ರೆಯಲ್ಲೇ ಇದ್ದು ವೈದ್ಯರೊಂದಿಗೆ ಚರ್ಚಿಸಿದರು.
ಬಿಜೆಪಿ ತಾಲೂಕಾಧ್ಯಕ್ಷ ಸುಬ್ರಾಯ ನಾಯ್ಕ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಉಮೆಶ ನಾಯ್ಕ, ಕೇಶವ ನಾಯ್ಕ ಬಳ್ಕೂರು,ವೇಂಕಟೇಶ ಕಾಮತ್, ಸುರೇಶ್ ಹರಿಕಾಂತ, ಆನಂದ ನಾಯ್ಕ ಮಂಕಿ, ಸುರೇಶ ಖಾರ್ವಿ ಮತ್ತಿತರರು ಉಪಸ್ಥಿತತರಿದ್ದರು
“ ಜ್ವರ ಪೀಡಿತ ರೋಗಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆ ನಡೆಸಿದ್ದು ರಕ್ತ ಕಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದ್ದು ಶಂಕಿತ ಡೆಂಗ್ಯೂ ಪೀಡಿತರ ರಕ್ತದ ಮಾದರಿಯನ್ನು ಲ್ಯಾಬ್ಗಳಲ್ಲಿ ತಪಾಸಣೆ ನಡೆಸಿದಾಗ 20ರೋಗಿಗಳಲ್ಲಿ 8 ರೋಗಿಗಳಲ್ಲಿ ವೈರಲ್ ಜ್ವರ ಇರುವುದು ಪತ್ತೆಯಾಗಿದೆ.ಸ್ಥಳೀಯ ಪ್ರಾಥಮಿಕ ವೈದ್ಯಾದಿಕಾರಿಗಳು ಖಾಸಗಿ ವೈದ್ಯರು ನೀಡಿದ ವರದಿಯನ್ನು ಇನ್ನಷ್ಟು ಖಚಿತ ಪಡಿಸಲು ಈ ರೋಗಿಗಳ ರಕ್ತ ಸಂಗ್ರಹಣೆ ಮಾದರಿಯನ್ನು ಮಣಿಪಾಲ್ ಲ್ಯಾಬಿಗೆ ಕಳುಹಿಸಲಾಗಿದೆ.
Leave a Comment