ಹೊನ್ನಾವರ: “ಯೋಗ ಎನ್ನವುದು ಇಂದಿನ ಯುವ ಜನಾಂಗಕ್ಕೆ ಅತಿಮುಖ್ಯವಾಗಬೇಕಿದೆ. ಯೋಗದಿಂದ ಕೇವಲ ದೈಹಿಕ ಆರೋಗ್ಯ ಸದೃಡ ಮಾಡಿಕೊಳ್ಳುವುದಲ್ಲ, ಮಾನಸಿಕ ಆರೋಗ್ಯ ಸದೃಡ ಮಾಡಿಕೊಳ್ಳಲು ಯೋಗ ಮಾಡಬೇಕಾಗಿದೆ” ಎಂದು ಯೋಗದ ಹಿನ್ನಲೆ ಹಾಗೂ ಮಹತ್ವದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಶ್ ಪದಕಿ ವಿವರಿಸಿದರು. ಅವರು ಯೋಗ ದಿನಾಚರಣೆ ನಿಮಿತ್ತ ಪಟ್ಟಣದ ಬ್ರದರ್ಸ್ ಸ್ಕೂಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.
ತಾಲೂಕಾ ಪಂಚಾಯತ್, ಯುವ ಸಬಲೀಕರಣ, ನೆಹರು ಯುವ ಕೇಂದ್ರ, ಕ್ರೀಡಾ ಇಲಾಖೆ, ತಾಲೂಕಾ ಯುವ ಒಕ್ಕೂಟ, ಜಿಲ್ಲಾ ಹಾಗೂ ತಾಲೂಕಾ ದೈಹಿಕ ಶಿಕ್ಷಕರ ಸಂಘ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.
ಉದ್ಘಾಟಕರಾಗಿ ಆಗಮಿಸಿದ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಣಾ ಅಧಿಕಾರಿ ಆನಂದ ಯಶ್ವಂತ ಧುರಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ 2014 ಜೂನ್ 21ರಂದು ಯೋಗ ದಿನ ಆಚರಣೆ ಮಾಡುತ್ತಾ ಬಂದಿದ್ದೆವೆ. ಯೋಗ ಮೂಲತಃ ಭಾರತದ್ದಾದರು ಪ್ರಸ್ತುತ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದಿದೆ. ಶ್ವಾಸ್ಥ್ಯ ಸಮಾಜದತ್ತ ಹೆಜ್ಜೆಯಿಡಲು ಯೋಗ ಬಹುಮುಖ್ಯವಾದ ಪಾತ್ರವಹಿಸುತ್ತದೆ, ಯೋಗದಿಂದ ಮನುಷ್ಯ ಯಾವುದೇ ಮಾನಸಿಕ, ದೈಹಿಕ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳಬಹುದು ಯೋಗ ರೋಗವನ್ನು ಬರದಂತೆ ಮಾಡುತ್ತದೆ
ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಶ್ ಪದಕಿ ಮಾತನಾಡಿ “ಆಧ್ಯಾತ್ಮಿಕ ಹಿನ್ನಲೆಯೊಳಗೆ ಯೋಗಕ್ಕೆ ತನ್ನದೇ ಆದ ಮಹತ್ವವಿದೆ .ಯೋಗದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಡರಾಗಬಹುದು. ನಮ್ಮ ಯಾಂತ್ರಿಕವಾದ ಬದುಕಿನಲ್ಲಿ ಆರೋಗ್ಯದ ಕಡೆಗೆ ಗಮನ ಹರಿಸುವುದು ಕಡಿಮೆಯಾಗುತ್ತಿದೆ. ಇಂದಿನ ಮಕ್ಕಳ ಆಹಾರ ಪದ್ದತಿಯು ಬದಲಾಗುತ್ತಿದೆ ಮಕ್ಕಳು ಪಾಸ್ಟ್ಪುಡ್ಗಳ ಅವಲಂಭಿತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದ ರನ್ನಿಂಗ್ ಮತ್ತು ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದ ಅದ್ವೈತ ಸ್ಪೋಟ್ರ್ಸ್ ಕ್ಲಬ್ ಕ್ರೀಢಾಪಟುಗಳಿಗೆ ಪ್ರಶಸ್ತಿ ಹಾಗೂ ಪದಕ ನೀಡಲಾಯಿತು.
ನಂತರ ಶಾಲಾ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಯೋಗ ತರಬೇತುದಾರರಾದ ಲಕ್ಷ್ಮಿ ಅಳಕೋಡ ಕಾರ್ಯಕ್ರಮದಲ್ಲಿ ಉಪಸ್ಥಿದ್ದವರಿಗೆ ಯೋಗಾಶನದ ಭಂಗಿಗಳ ಬಗ್ಗೆ ತಿಳಿಸಿದರು. ಆಹ್ವಾನಿತ ಗಣ್ಯರು ಸೇರಿದಂತೆ ಎಲ್ಲರು ಯೋಗಾಶನದ ನಾಲ್ಕೈದು ರೀತಿಯ ಬಂಗಿಯನ್ನು ಮಾಡುವ ಮೂಲಕ ಯೋಗ ದಿನಾಚರಣೆ ಮಾಡಲಾಯಿತು.
ವೇದಿಕೆಯಲ್ಲಿ ತಾಲೂಕಾ ಸರ್ಕಾರಿ ನೌಕರರದ ಸಂಘದ ಅಧ್ಯಕ್ಷ ಆರ್ ಪಿ ಭಟ್, ತಾಲೂಕಾ ದೈಹಿಕ ಪರಿವಿಕ್ಷಕ ಎಸ್ ಎನ್ ಗೌಡ,
ಪ.ಪಂ ಸದಸ್ಯ ಸುರೆಸ್ ಮೇಸ್ತ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಸಾಧನಾ ಬರ್ಗಿ, ಯುವ ಒಕ್ಕೂಟದ ಅಧ್ಯಕ್ಷ, ವಿನಾಯಕ ನಾಯ್ಕ, ಯುವಜನ ಕ್ರೀಢಾಧಿಕಾರಿ ಸುಧೀಶ ನಾಯ್ಕ, ಎಮ್ ಜಿ ನಾಯ್ಕ, ಸುರೇಶ್ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.
Leave a Comment