ಹೊನ್ನಾವರ .ಸಮಾಜದಲ್ಲಿ ಕಂಡುಬರುವ ಅಸಮಾನತೆ, ಜಾತೀಯತೆ ಮೂಡನಂಬಿಕೆಗಳ ವಿರುದ್ಧ ಸಾಹಿತಿಗಳು ತಮ್ಮ ಲೇಖನಿಯ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಬೇಕು. ಸಮಾನತೆ ಮುಂದಿನ ಯುವ ಪಿಳಿಗೆಗೆ ವರ್ಗಾಹಿಸುವ ಜವಾಬ್ದಾರಿ ನಮ್ಮ ಸಾಹಿತ್ಯ ಲೋಕದ ಮೇಲಿದೆ ಎಂದು ಹಿರಿಯ ಸಾಹಿತಿ ಡಾ: ಶ್ರೀಪಾದ ಶೆಟ್ಟಿ ನುಡಿದರು.
ಅವರು ಇತ್ತಿಚೆಗೆ ಸಾಹಿತಿ ಸುರೇಶ ನಾಯ್ಕ ಬಣಸಾಲೆಯವರ ಜೀವನ ಎಂಬ ಹನಿಗವನ ಸಂಕಲನವನ್ನು ಬಿಡುಗಡೆ ಮಾಡಿ ಶಿವಮ್ಮ ವೇದಿಕೆಯಲ್ಲಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಸರ್ಕಾರಿ ನೌಕಕರ ಸಂಘದ ಅಧ್ಯಕ್ಷ ಸಂಜೀವ ಕುಮಾರ ನಾಯ್ಕ ಮಾತನಾಡಿ ಸಾಹಿತಿಗಳು ಬದುಕಿಗೆ ದಾರಿ ದೀಪವಾಗಬೇಕು, ಮಿತ್ರ ಸುರೇಶ ನಾಯ್ಕರು ಪ್ರಯತ್ನ ಮುಂದುವರಿಸಲೆಂದರು. ಕಾರ್ಯಕ್ರಮದ ಅಧ್ಯಕ್ಷರಾದ ಡಾ: ಐ.ಆರ್.ಭಟ್ ಅಧ್ಯಕ್ಷರು ಯಕ್ಷರಕ್ಷೆ ಮುರ್ಡೇಶ್ವರ ರವರು ಸಾಹಿತಿ ಸುರೇಶ ನಾಯ್ಕರ ಸೇವಾ ಭಾನವೆ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ಎಮ್.ವಿ.ಹೆಗಡೆ ಹಾಗೂ ಹೊನ್ನಾವರದ ನೌಕರರ ಸಂಘದ ಅಧ್ಯಕ್ಷ ಆರ್.ಪಿ.ಭಟ್ಅವರು ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಕೃಷ್ಣಾ ನಾಯ್ಕ ಮಲ್ಲೋಜಿಮನೆ ಉಪಸ್ಥಿತರಿದ್ದರು.
ಸುರೇಶ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಎಮ್.ಕಿ. ಗಣಪತಿ ಪ್ರಾರ್ಥಿಸಿದರು. ಗಣಪತಿ ಕಾಯ್ಕಿಣಿ ವಂದಿಸಿದರು, ಉದಯ ನಾಯ್ಕ ನಿರೂಪಿಸಿದರು. ನಂತರ ಯಕ್ಷರಕ್ಷೆ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶ್ರೀರಾಮಾಚರಿತಾಂಮೃತ, ಯಕ್ಷಗಾನ ತಾಳಮದ್ದಳೆ ರಂಜಿಸಿತು.
Leave a Comment