ಹಳಿಯಾಳ: ಕಳೆದ ವರ್ಷ ನುರಿಸಿದ ಪ್ರತಿ ಟನ್ ಕಬ್ಬಿನ ಬಾಕಿ ಹಣ 305 ರೂಪಾಯಿಗಳನ್ನು ರೈತರಿಗೆ ನೀಡುವಂತೆ ಆಗ್ರಹಿಸಿ, ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಮುಂದೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾದ ಜಯ ಕರ್ನಾಟಕ ಸಂಘಟನೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದೆ.
ಕಾರ್ಖಾನೆ ವ್ಯಾಪ್ತಿಯ ನೂರಾರು ಹಳ್ಳಿಗಳ ರೈತರು ಕಳೆದ 10 ದಿನಗಳಿಂದ ಕಾರ್ಖಾನೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು. ಬುಧವಾರ ದಿ.16ರಂದು ಪ್ರತಿಭಟನೆ 11ನೇ ದಿನಕ್ಕೆ ಪಾದಾರ್ಪಣೆ ಮಾಡಲಿದೆ.
ಗಾಳಿ, ಮಳೆಯನ್ನು ಲೆಕ್ಕಿಸದೆ ಪ್ರತಿದಿನ ಪ್ರತಿ 2-3 ಹಳ್ಳಿಗಳ ರೈತರು ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದು ಕಾರ್ಖಾನೆಯ ರೈತ ವಿರೋಧಿ ನಿಲುವನ್ನು ಖಂಡಿಸುತ್ತಿದ್ದಾರೆ ಮಾತ್ರವಲ್ಲದೇ, ಪ್ರತಿಭಟನಾ ಸ್ಥಳಕ್ಕೆ ಸೌಜನ್ಯಕ್ಕೂ ಭೇಟಿ ನೀಡದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ದವು ಧಿಕ್ಕಾರ ಕೂಗುತ್ತಿದ್ದು ಹೋರಾಟದ ಹಾಡು, ಭಜನಾ ಪದಗಳ ಮೂಲಕ ಮುಷ್ಕರ ಮುಂದುವರೆಸಿದ್ದಾರೆ.
ಮಂಗಳವಾರದಂದು ಕ್ರಾಂತೀವೀರ ಸಂಗೋಳ್ಳಿ ರಾಯಣ್ಣನವರ 241ನೇ ಜನ್ಮ ದಿನಾಚರಣೆ ಹಾಗೂ 72ನೇ ಸ್ವಾತಂತ್ರೋತ್ಸವ ದಿನ ಆಚರಿಸಿ. ಮೇರವಣಿಗೆ ಮೂಲಕ ರೈತರ ಧರಣಿ ಸ್ಥಳಕ್ಕೆ ಆಗಮಿಸಿದ ಜಯ ಕರ್ನಾಟಕ ಸಂಘಟನೆಯವರು ಸುಮಾರು 10 ದಿನಗಳಿಂದ ಧರಣಿ ನಿರತ ಕಬ್ಬು ಬೆಳೆಗಾರರ ಜೊತೆ ಮಾತುಕತೆ ನಡೆಸಿ ಅನಿರ್ಧಿಷ್ಠಾವಧಿ ಧರಣಿಗೆ ತಮ್ಮ ಸಂಪೂರ್ಣ ಬೆಂಬಲ ಘೊಷಿಸಿದರು.
ಈ ಸಂದರ್ಭದಲ್ಲಿ ಜೈ ಕರ್ನಾಟಕ ಸಂಘದ ಹಳಿಯಾಳ ತಾಲೂಕಾಧ್ಯಕ್ಷ ವಿಲಾಸ ಕಣಗಲಿ, ಕಿರಣ, ಅಸೀಸ್ ಪೀರವಾಲೆ, ವಿನೋದ ಘೆಂಡೆ, ದುರ್ಗಪ್ಪಾ ಚಲವಾದಿ, ಮಹೇಶ ಹುಲಕೊಪ್ಪ, ಪ್ರಕಾಶ ಕುಕ್ರಳ್ಳಿ, ಗಣೇಶ ಗೋಸಪ್ಪನವರ, ಸಂಗು ಚಲವಾದಿ, ಸುಬಾಷ ಕೋಲ್ಕರ, ಶಿವಕುಮಾರ ಹುಲಕೊಪ್ಪ, ಸಂಜು ಗೌಡಾ, ಬಸು ಚಲವಾದಿ ಇತರರು ಇದ್ದರು.
Leave a Comment