ಹಳಿಯಾಳ:- ತಾಲೂಕಿನಲ್ಲಿ ಕಳೆದ 2 ವಾರಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಮೆಕ್ಕೆಜೋಳ ಮತ್ತು ಹತ್ತಿ ಬೆಳೆಯ ಹೊಲಗಳಲ್ಲಿ ನೀರು ನಿಂತು, ಜೌಗು ಪ್ರದೇಶ ನಿರ್ಮಾಣವಾಗಿದ್ದು. ಇದರಿಂದ ಬೆಳೆಯ ಬೆಳವಣಿಗೆಯು ಕುಂಠಿತಗೊಳ್ಳುವ ಸಂಭವವಿದು,್ದ ಹೊಲದಲ್ಲಿ 4-5 ಸಾಲಿಗೆ ಒಂದರಂತೆ ಬಸಿ ಗಾಲುವೆಯನ್ನು ನಿರ್ಮಿಸಿ ಬೆಳೆ ರಕ್ಷಿಸಿಕೊಳ್ಳುವಂತೆ ಹಳಿಯಾಳ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ರೈತರಿಗೆ ಸಲಹೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಮಳೆ ನೀರು ನಿಂತ ಹೊಲಗಳಲ್ಲಿ ಹೆಚ್ಚಿನ ನೀರನ್ನು ಹೊರ ಹಾಕಲು, ರೈತರು ಹೊಲದಲ್ಲಿ ಕಡ್ಡಾಯವಾಗಿ 4-5 ಸಾಲಿಗೆ ಒಂದರಂತೆ ಬಸಿ ಗಾಲುವೆಯನ್ನು ನಿರ್ಮಾಣ ಮಾಡಿ, ನೀರನ್ನು ಹೊಲದಿಂದ ಹೊರ ಹಾಕಬೇಕು. ಇದರಿಂದ ಜೌಗು ಪ್ರದೇಶವನ್ನು ಕಡಿಮೆ ಮಾಡಿ, ಬೆಳೆಯ ಬೆಳವಣಿಗೆಗೆ ಉತ್ತಮ ವಾತಾವರಣ ನಿರ್ಮಿಸಿದಂತಾಗಿ, ಬೆಳೆಗೆ ಅನುಕೂಲವಾಗುವುದು ಎಂದು ಸಲಹೆ ನೀಡಲಾಗಿದೆ.
ಹಳಿಯಾಳ ತಾಲೂಕಿನಲ್ಲಿ ದಿ.16 ರವರೆಗೆ 968.19 ಮಿ.ಮೀ ಮಳೆ ಆಗಿದ್ದು, ವಾಸ್ತವಿಕ ಮಳೆ 1414.20 ಮಿ.ಮೀ ಆಗಬೇಕಿತ್ತು. ಇದಕ್ಕೆ ಹೋಲಿಸಿದರೆ, ಶೇ 31.54 ರಷ್ಟು ಕೊರತೆ ತಾಲೂಕಿನಲ್ಲಿ ಕಂಡು ಬಂದಿದೆ ಎಂದು ಮಳೆಯ ಬಗ್ಗೆ ಮಾಹಿತಿ ನೀಡಿರುವ ನಾಗೇಶ ಅವರು ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 58.71 ರಷ್ಟು ಕೊರತೆ ಕಂಡುಬಂದಿತ್ತು. ಆದರೆ ಈ ಸಲ ಪ್ರಾರಂಭದಿಂದಲೂ ಉತ್ತಮ ಮಳೆ ಆಗುತ್ತಿದ್ದು, ಸಾಮಾನ್ಯವಾಗಿ ಯಾವದೇ ಬೆಳೆಗೆ ನೀರಿನ ಕೊರತೆ ಕಂಡು ಬಂದಿಲ್ಲಾ. ತಾಲೂಕಿನಲ್ಲಿ ಮುಖ್ಯವಾಗಿ ಬೆಳೆದಿರುವ ಬತ್ತ, ಹತ್ತಿ, ಮೆಕ್ಕೆಜೋಳ, ಕಬ್ಬು ಬೆಳೆಯು ಚೆನ್ನಾಗಿ ಬೆಳೆದಿದ್ದು, ರೈತರು ಉತ್ತಮ ಇಳುವರಿಯ ನೀರಿಕ್ಷೆಯಲ್ಲಿದ್ದಾರೆ ಆದರೇ ಕೃಷಿ ಇಲಾಖೆಯ ಸಹಲಹೆಗಳನ್ನು ಪಾಲಿಸಿದರೇ ಉತ್ತಮ ಇಳುವರಿಯನ್ನು ರೈತರು ಖಂಡಿತ ಪಡೆಯಲಿದ್ದಾರೆಂದು ಹಳಿಯಾಳ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ಹೇಳಿದ್ದಾರೆ.
Leave a Comment