ಹೊನ್ನಾವರ :
ಹಲವಾರು ಸಮಾಜಮುಖಿ ಕಾರ್ಯವನ್ನು ಮಾಡಿ ಪ್ರಸಿದ್ದತೆಯನ್ನು ಪಡೆದ ಸಂಘಟನೆಯಾದ ಕ್ರಾಂತಿರಂಗದ ಅರೇಅಂಗಡಿ ಘಟಕವನ್ನು ಜಿಲ್ಲಾಧ್ಯಕ್ಷ ಮಂಗಲದಾಸ ಚಾಲನೆ ನೀಡಿದರು.
ನಂತರ ಮಾತನಾಡಿ ಸಂಘಟನೆ ಎನ್ನುವುದು ಕೇವಲ ಹೆಸರಿಗೆ ಮಾತ್ರ ಇರದೇ ಕಾರ್ಯರೂಪದಲ್ಲಿದ್ದು, ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಬೇಕು. ಗ್ರಾಮ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಪ್ರತಿ ಮನೆಯವರ ಮನದಲ್ಲಿಯೂ ಸಂಘಟನೆಯ ಬಗ್ಗೆ ಗೌರವ ಮೂಡಬೇಕು ಆರೀತಿಯಾಗಿ ಸಂಘಟನೆ ಬಲಪಡಿಸುವ ಜೊತೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿ ಎಂದು ಕರೆ ನೀಡಿದರು.
ಆಟೊ ಯೂನಿಯನ್ ಅಧ್ಯಕ್ಷರು ಕ್ರಾಂತಿರಂಗದ ಕಾರ್ಯಕರ್ತರು ಆದ ಶಿವರಾಜ ಮೇಸ್ತ ಮಾತನಾಡಿ ಈ ದಿನ ಗ್ರಾಮೀಣ ಮಟ್ಟದಲ್ಲಿಯೂ ವಿಸ್ತರಣೆಯಾಗುತ್ತಿರುದನ್ನು ನೋಡಿದರೆ ಸಂಘಟನೆಯು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ಇದರಿಂದಲೆ ಗುರುತಿಸಬಹುದು. ಈ ದಿನ ದೇಶದ ಗಡಿಯನ್ನು ಕಾಯುತ್ತಿರುವ ಬಿಎಸ್ಎಫ್ ಯೋಧರಾದ ರಾಜು ಇವರನ್ನು ಸನ್ಮಾನ ನಡೆಸುತ್ತಿರುವುದು ತುಂಬಾ ಸಂತೋಷಕರವಾದದು ಎಂದರು.
ತಾಲೂಕ ಅಧ್ಯಕ್ಷರಾದ ಎಸ್.ಡಿ.ಹೆಗಡೆ ಪ್ರಾಸ್ತವಿಕವಾಗಿ ಮಾತನಾಡಿ ಸಂಘಟನೆ ಕಾರ್ಯರೂಪದಲ್ಲಿರಲು ಸದಸ್ಯರಿಗೆ ಆಸಕ್ತಿ ಬೇಕು. ಸಂಘಟನೆ ಮೂಲಕ ಗ್ರಾಮೀಣ ಭಾಗ ಸೇರಿದಂತೆ ಪಟ್ಟಣದಲ್ಲಿ ಹಲವಾರು ಹೋರಾಟದ ಮೂಲಕ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿದೆ. ಇತ್ತಿಚಿಗೆ ದಕ್ಷ ಅಧಿಕಾರಿ ಮಂಕಿ ಠಾಣಿಯ ಪಿಎಸ್.ಐ ನೀತು ಗೊಡೆ ವರ್ಗಾವಣೆ ಮಾಡಬಾರದೆಂದು ಪ್ರತಿಭಟನೆ ಮಾಡಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ ಎಂದು ಕ್ರಾಂತಿರಂಗದ ತಾಲೂಕು ಘಟಕದ ಸಾಧನೆಯನ್ನು ಸ್ಮರಿಸಿದರು.
ನಂತರ ಘಟಕದ ಅಧ್ಯಕ್ಷರಾದ ಗೋಪಾಲ ನಾಯ್ಕಇವರಿಗೆ ಧ್ವಜ ಹಸ್ತಾಂತರ ಮಾಡಲಾಯಿತು.
ವೇದಿಕೆಯಲ್ಲಿ ಜಿ.ಎನ್.ಗೌಡ ಕೊಡಾಣಿ, ಜ್ಞಾನೇಶ್ವರ ನಾಯ್ಕ, ಸಚೀನ್ ನಾಯ್ಕ, ಜಿ.ಆರ್.ನಾಯ್ಕ, ಕ್ರಾಂತಿರಂಘದ ಸದಸ್ಯರು ಉಪಸ್ಥಿತರಿದ್ದರು.
Leave a Comment