ಹಳಿಯಾಳ :- ದೇಶದ ಬಹುತೇಕ ಸಾಗಾಣಿಕೆ ವ್ಯವಸ್ಥೆಯು ಸಾರಿಗೆಯ ಮೇಲೆ ಅವಲಂಬಿತವಾಗಿದ್ದು ಕೇಂದ್ರ ಸರ್ಕಾರವು ಪೆಟ್ರೋಲ್-ಡಿಸೆಲ್ ದರ ಏರಿಕೆ ಮಾಡುತ್ತಲೇ ಸಾಗಿದ್ದು ಇದರಿಂದ ದಿನಬಳಕೆಯ ವಸ್ತುಗಳ ಬೆಲೆಯು ಏರಿಕೆ ಆಗುತ್ತಿರುವುದರಿಂದ ಕೂಡಲೇ ದರ ಇಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕದವರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸ್ ನಿಲ್ದಾಣ, ವನಶ್ರೀ ವೃತ್ತದ ಮೂಲಕ ಬೈಕಗಳನ್ನು ತಳ್ಳುತ್ತಾ ವಿನೂತನವಾಗಿ ಪ್ರತಿಭಟನೆ ನಡೆಸಿದ ಕರವೇ ಪ್ರತಿಭಟನಾಕಾರರು ಶಿವಾಜಿ ವೃತ್ತಕ್ಕೆ ಆಗಮಿಸಿ ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಘೊಷಣೆ ಕೂಗಿದರು.
ಕೂಡಲೇ ಪೆಟ್ರೋಲ್, ಡಿಸೆಲ್ ಹಾಗೂ ಅಡುಗೆ ಅನಿಲ ದರ ಇಳಿಸುವಂತೆ ಆಗ್ರಹಿಸಿದರು. ಬಳಿಕ ತಹಶೀಲ್ದಾರ್ ಅವರಿಗೆ ರಾಷ್ಟ್ರಪತಿಗಳಿಗೆ ಬರೆದ ಮನವಿ ಸಲ್ಲಿಸಿದರು. ಭಾರತ ಆಟೋ ಸ್ಟಾಂಡ್ ಸಂಘದವರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಕರವೇ ತಾಲೂಕಾಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಉಪಾದ್ಯಕ್ಷ ಚಂದ್ರಕಾಂತ ದುರ್ವೇ, ಕಾರ್ಯಕರ್ತರಾದ ಮಹೇಶ ಆನೆಗುಂದಿ, ವಿನೋದ ದೊಡ್ಮಣಿ, ನಂದು ಕರಂಜೆಕರ, ವಿಜಯ ಪಡ್ನಿಸ್, ಸುಧಾಕರ ಕುಂಬಾರ, ಚಂದ್ರಕಾಂತ ಅರಿಶೀನಗೇರಿ, ಶಿವಾನಂದ ಇತರರು ಇದ್ದರು.
Leave a Comment