ಹಳಿಯಾಳ:- ಪಟ್ಟಣದಲ್ಲಿರುವ ಹಳಿಯಾಳ ತಾಲೂಕಾ ಆಸ್ಪತ್ರೆಯಲ್ಲಿ ಸರ್ಕಾರದಿಂದ ಡಯಾಲಿಸಿಸ್ಗಾಗಿ ನೀಡಿದ ಉಚಿತ ಸೇವೆಗೆ ಬಡ ದಲಿತ ರೋಗಿಯಿಂದ ಹಣ ಪಡೆದು ವಂಚನೆ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮೀತಿ ಅಂಬೇಡ್ಕರ ಧ್ವನಿ ಸಂಘಟನೆ ಆರೋಪಿಸಿದೆ.
ಈ ಕುರಿತು ತಾಲೂಕಾ ವೈದ್ಯಾಧಿಕಾರಿಗೆ ಬರೆದ ದೂರು ಪತ್ರದಲ್ಲಿ ಮಾಹಿತಿ ನೀಡಿರುವ ಸಂಗಘಟನೆಯ ಮುಖಂಡ ಯಲ್ಲಪ್ಪಾ ಹೊನ್ನೊಜಿ ಪಟ್ಟಣದ ಗಾಂಧಿಕೇರಿಯ ಸಿದ್ದಪ್ಪಾ ಯಲ್ಲಪ್ಪಾ ಚಲವಾದಿ ಎನ್ನುವ ಬಡ ಯುವಕನು ವಾರಕ್ಕೆ 2 ಬಾರಿ ಡಯಾಲಿಸಿಸ್ ಹಾಗೂ ಚಚ್ಚು ಮದ್ದು ಮಾಡಿಸಿಕೊಳ್ಳಲು ಈ ಆಸ್ಪತ್ರೆಗೆ ಬಂದಿದ್ದು. ಪ್ರತಿಬಾರಿ ಆತನಿಂದ ರೂ. 600 ಗಳಂತೆ ಒಟ್ಟೂ 4200ರೂ. ಗಣ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ.
ಅಲ್ಲದೇ ಪಡೆದಿರುವ ಈ ಹಣಕ್ಕೆ ಯಾವುದೇ ರಸೀದಿಯನ್ನು ನೀಡದೆ ರೋಗಿಗೆ ವಂಚನೆ ಮಾಡಲಾಗಿದೆ. ಉಚಿತವಾದ ಡಯಾಲಿಸಸ್ ಸೇವೆಗೆ ಕಾನೂನು ಬಾಹಿರವಾಗಿ ದಲಿತ ಕುಟುಂಬದ ಬಡ ರೋಗಿಯಿಂದ ಹಣ ಪಡೆದಿರುವುದು ಖಂಡನೀಯ. ಕೂಡಲೇ ಈ ಹಣವನ್ನು ಆ ಕುಟುಂಬಕ್ಕೆ ಮರಳಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ದೂರು ಸಲ್ಲಿಸುವಾಗ ದಲಿತ ಸಂಘರ್ಷ ಸಮೀತಿ ಅಂಬೇಡ್ಕರ ಧ್ವನಿ ಸಂಘಟನೆಯ ಮುಖಂಡರಾದ ಯಲ್ಲಪ್ಪಾ ಹೊನ್ನೊಜಿ, ಕುಮಾರ ಕಲಬಾವಿ, ಹನುಮಂತ ಚಲವಾದಿ, ಮಹೇಶ ಚಲವಾದಿ, ರೋಗಿಯ ಕುಟಂಬದವರು ಇದ್ದರು.
ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೇಗೆ ಪ್ರತಿಕ್ರಿಯಿಸಿದ ತಾಲೂಕಾ ವೈದ್ಯಾಧಿಕಾರಿ ಡಾ.ರಮೇಶ ಕದಂ ಸರ್ಕಾರದ ವತಿಯಿಂದ ಡಯಾಲಿಸಿಸ್ ಕೇಂದ್ರ ನಿರ್ವಹಿಸಲು ಡಿಎಸ್ ಶೆಟ್ಟಿ ಎಂಬ ಗುತ್ತಿಗೆದಾರರಿಗೆ ಹೊರ ಗುತ್ತಿಗೆ ನೀಡಲಾಗಿದೆ ಅವರು ಈ ಸೇವೆಯನ್ನು ಸಂಪೂರ್ಣ ಉಚಿತವಾಗಿ ನೀಡಬೇಕೆಂಬ ಸ್ಪಷ್ಟ ನೀಯಮಾವಳಿ ಇದೆ. ಆದರೂ ಅವರು ಹಣ ಪಡೆದ ಬಗ್ಗೆ ದೂರು ಬಂದ ಕಾರಣ ರೋಗಿ ಸಿದ್ದಪ್ಪಾ ಚಲವಾದಿಯಿಂದ ಹಣ ಪಡೆದ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು. ಉತ್ತರ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
Leave a Comment