ಹಳಿಯಾಳ:- ಪಟ್ಟಣದ ಅಂಚಿನ ಹಳಿಯಾಳ-ಬೆಳಗಾವಿ ರಸ್ತೆಯ ಹೊರಗಿನ ಗುತ್ತಿಗೇರಿಯಲ್ಲಿರುವ “ಗುತ್ತೀಗೇರಿ” ಕೆರೆಯನ್ನು ಸ್ವಚ್ಚ ಮಾಡುವ ಕಾಯಕದಲ್ಲಿ ತಾಲೂಕಾಡಳಿತದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ತೊಡಗಿದ್ದು ಸಾರ್ವಜನೀಕರ ಶ್ಲಾಘನೆಗೆ ಪಾತ್ರವಾಗಿದೆ.
ಜಯ ಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಪಾತ್ರ ಪ್ರಮುಖವಾಗಿದ್ದು ಇವರೊಂದಿಗೆ ಕಂದಾಯ ಇಲಾಖೆ, ಶಿಕ್ಷಕರ ಸಂಘ, ಲಾಯನ್ಸ್ ಕ್ಲಬ್ ಸಂಸ್ಥೆ ಇತರ ಕೆಲವರು ಕೈ ಜೊಡಿಸಿ ಕೆರೆಯ ಸುತ್ತಲು ಸ್ವಚ್ಚತೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಈಗಾಗಲೇ ಸುಮಾರು 50% ಗೀಡ ಗಂಟಿಗಳನ್ನು ಹಾಗೂ ನೀರಿನಲ್ಲಿ ಬೆಳೆದ ಕಳೆಯನ್ನು ತೆಗೆಯಲಾಗಿದ್ದು ಕೆರೆಯ ಆವರಣ ಸುಂದರವಾಗಿ ಕಂಗೊಳಿಸುತ್ತಿದೆ.
ಪ್ರತಿದಿನ ಬೆಳಿಗ್ಗೆ 6.30ರಿಂದ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು, ಸಾರ್ವಜನೀಕರು, ಪತ್ರಕರ್ತರು ಸುಮಾರು 2 ತಾಸುಗಳ ಕಾಲ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದು ಇನ್ನೇರಡು ದಿನಗಳಲ್ಲಿ ಸಂಪೂರ್ಣ ಸ್ವಚ್ಚತೆಯನ್ನು ಮಾಡುವ ಗುರಿಹೊಂದಿದ್ದಾರೆ.
ಸ್ವಚ್ಚಗೊಳ್ಳುತ್ತಿರುವ ತುಂಬಿದ ಕೆರೆಯ ಪರಿಸರಕ್ಕೆ ಪ್ರತಿದಿನ ಬೆಳಿಗ್ಗೆ ಹಾಗೂ ಸಾಯಂಕಾಲ ನೂರಾರು ಜನತೆ ಮೊರನಿಂಗ್-ಇವನಿಂಗ್ ವಾಕ್ ಮಾಡಲು ಆಗಮಿಸುತ್ತಿದ್ದು ಸ್ವಚ್ಚತೆಗೆ ಶ್ರಮಿಸುತ್ತಿರುವವರ ಬಗ್ಗೆ ಪ್ರಶಂಸನೆಗಳು ಕೆಳಿ ಬರುತ್ತಿದ್ದು ಪಟ್ಟಣದಲ್ಲಿ ಸ್ವಚ್ಚ ಭಾರತದಡಿ ಸ್ವಚ್ಚತಾ ಕಾರ್ಯ ಕೂಡ ಜೋರಾಗಿಯೇ ನಡೆದಿದೆ.
Leave a Comment