ಹೊನ್ನಾವರ:
ಸಮಾಜಕ್ಕೆ ತನ್ನಿಂದಾಗುವ ಸೇವೆಯನ್ನು ಮಾಡಲು ಸದಾ ಕಾಲ ಸಿದ್ದರಿರುವ ವಿದ್ಯಾರ್ಥಿ ಸಮುದಾಯವೆಂದರೆ ಬಿ.ಎಸ್.ಡಬ್ಲು ವಿದ್ಯಾರ್ಥಿಗಳು. ಇವರು ಮುಂದಿನ ದಿನದಲ್ಲಿ ಉಜ್ವಲ ಭಾರತವನ್ನು ನಿರ್ಮಿಣಕ್ಕೆ ಮುನ್ನುಡಿ ಬರೆಯವರರು ಎಂದು ಜಿಲ್ಲಾ ಪಂಚಾಯತ ಸದಸ್ಯೆ ಶ್ರೀ ಕಲಾ ಶಾಸ್ತ್ರಿ ಅಭಿಪ್ರಾಯಪಟ್ಟರು.
ಅವರು ಹೊನ್ನಾವರ ತಾಲೂಕಿನ ನಗರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಅರೇಅಂಗಡಿ ಸಿರಿ ಬಿಎಸ್.ಡಬ್ಲು ಕಾಲೇಜಿನ ಗ್ರಾಮೀಣ ಸಮಾಜ ಕಾರ್ಯ ತರಬೇತಿ ಶಿಬಿರದ ಸಮರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಒಂದು ಗ್ರಾಮದ ಸಮಸ್ಯೆಯನ್ನು ಅರಿಯಲು 7 ದಿನಗಳ ಕಾಲ ಶಿಬಿರದಲ್ಲಿ ಪಾಲ್ಗೊಂಡು ಆ ಗ್ರಾಮದ ಸದಸ್ಯರಲ್ಲಿ ಒರ್ವರಾಗಿ ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಈ ವಿದ್ಯಾರ್ಥಿಗಳು ಮಾಡಿದ್ದರು. ಇದು ಇವರ ಪಠ್ಯಕ್ರಮವಾದರೂ ಕೇವಲ ಪಠ್ಯಕ್ರಮಕ್ಕೆ ಸೀಮೀತವಾಗದೇ ಮಾನವಿಯತೆಯ ಗುಣವನ್ನು ಹೊಂದಿ ಸಮಾಜಕ್ಕೆ ತನ್ನಿಂದ ಸಾಧ್ಯವಾಗುವ ಎಲ್ಲ ಸೌಲಭ್ಯವನ್ನು ನೀಡುವ ತುಡಿತವನ್ನು ಹೊಂದಿರುವ ವಿದ್ಯಾರ್ಥಿಗಳ ಇಂತಹ ಕಾರ್ಯಕ್ರಮ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಈಸಮಾಜಸೇವೆಯ ಗುಣವನ್ನು ಸದಾ ಕಾಲ ಮುಂದುವರೆಸಿಕೊಂಡು ಹೋಗುವ ಮೂಲಕ ಜೀವನದ ಅಮೂಲ್ಯವಾದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಅರುಣ ನಾಯ್ಕ ಮಾತನಾಡಿ ಜಿಲ್ಲೆಯ ಪ್ರಥಮ ಬಿ.ಎಸ್.ಡಬ್ಲು ಕಾಲೇಜಾದರೂ ಹಲವಾರು ಏಳು ಬೀಳುಗಳನ್ನು ಕಂಡಿದೆ. ಆದರೆ ಒಂದು ಹೆಮ್ಮೆಯ ವಿಷಯವೆನೆಂದರೆ ನಮ್ಮ ಸಂಸ್ತೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಅನೇಕರು ಉದ್ಯೋಗದಲ್ಲಿದ್ದಾರೆ. ಹಿತ್ತಲಗಿಡ ಮದ್ದಲ್ಲ ಎನ್ನುವಂತೆ ನಮ್ಮಲ್ಲಿಯವರಿಗೆ ಇದರ ಉಪಯೋಗ ಇನ್ನೂ ಸರಿಯಾಗಿ ಅರಿವಿಗೆ ಬಂದಿಲ್ಲ. ಸಮಾಜಸೇವೆಯ ಜೊತೆ ಅವರ ಭವಿಷ್ಯವನ್ನು ರೂಪಿಸಿಕೊಳ್ಳಲು ಇರುವ ಪದವಿ ಕೋರ್ಸಗಿದ್ದು ಇದರ ಉಪಯೋಗವನ್ನು ಮುಂದಿನ ದಿನದಲ್ಲಾದರು ಪಡೆದುಕೊಳ್ಳಿ ಎಂದರು.
ಇನ್ನೊರ್ವ ಮೂಖ್ಯ ಅತಿಥಿಗಳು ಉದ್ದಿಮೆದಾರರು ಆದ ರವಿ ಶೆಟ್ಟಿ ಕವಲಕ್ಕಿ ಮಾತನಾಡಿ ಜಿಲ್ಲೆಯ ಏಕೈಕ ಕೊರ್ಸನ್ನು ಹೊಂದಿರುವ ಕಾಲೇಜು ನಮ್ಮ ತಾಲೂಕಿನಲ್ಲಿ ಇರುವುದು ನಮ್ಮ ಹೆಮ್ಮೆಯಾಗಿದೆ. ಇಂದು ಪದವಿ ಶಿಕ್ಷಣ ಪಡೆಯಲು ವಿವಿಧ ಕಾಲೇಜುಗಳಿಗೆ ಹೋಗುತ್ತೇವೆ. ಭವಿಷ್ಯದಲ್ಲಿ ಉಪಯೋಗವನ್ನು ಹೊಂದಿರುವ ಇಂತಹ ಕೋರ್ಸುಗಳನ್ನು ಆಯ್ಕೆಮಾಡಿಕೊಂಡರೆ ಪದವಿ ನಂತರದ ದಿನದಲ್ಲಿ ನಿರುದ್ಯೂಗಿಗಳಾಗುವುದು ತಪ್ಪುತ್ತದೆ. ಬೇರೆ ಕೊರ್ಸಗಳಲ್ಲಿ ಎನ್.ಎಸ್ ಎಸ್.ನಂತಹ ಶಿಬಿರಗಳು ಇದ್ದರೂ ಕೂಡಾ ಅದಕ್ಕೆ ವಿದ್ಯಾರ್ಥಿಗಳು ನಿದಿಷ್ಟ ಸಂಖ್ಯೆಗೆ ಅನುಗುಣವಾಗಿ ಭಾಗವಹಿಸಬೇಕು ಆದರೆ ಇಲ್ಲಿ ಶಿಬಿರಕ್ಕೆ ಎಲ್ಲರೂ ಬಾಗವಿಸಬಹುದು ಕಾಲೇಜಿನ ಎಲ್ಲಾ ದಿನದಲ್ಲಿ ಶಿಬಿರವಿದ್ದಂತೆ ಆ ರೀತಿಯಲ್ಲಿ ಸಾಮಾಜಿಕ ಕಳಕಳಿಯ ಗುಣವನ್ನು ಹೊಂದುವ ಮೂಲಕ ಪ್ರತಿಯೊಬ್ಬರಿಗೂ ಆದರ್ಶಪ್ರಾಯರು ಎಂದು ಮೆಚ್ಚುಗೆ ಸೂಚಿಸಿದರು.
ಶಾಲೆಗೆ ಭೂದಾನ ಮಾಡಿದ ನಾರಾಯಣ ಶೇಟ್, ಕಳೆದ ಬಾರಿ ಅತಿ ಹೆಚ್ಚು ಅಂಕ ಗಳಿಸಿದ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಪ್ರೇಮಾ ಗೌಡ ಮತ್ತು ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಾದವರನ್ನು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಶಿಬಿರಾರ್ಥಿಗಳು, ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು.
ಕೇವಲ ಒಂದು ವಾರಗಳ ಕಾಲ ಒಂದು ಗ್ರಾಮದಲ್ಲಿ ಶಿಬಿರ ನಡೆಸದೇ ಆ ಗ್ರಾಮದ ಸಮಸ್ಯೆಗಳನ್ನು ಅರಿತು ಸಂಗ್ರಹಿಸಿ ಬೇಡಿಕೆ ರೂಪದಲ್ಲಿ ವರದಿಯನ್ನು ರಚಿಸಿ ಶಾಸಕರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ ಸದಸ್ಯರಿಗೆ ಶಿಬಿರದ ಸಂಗಟನ ಕಾರ್ಯದರ್ಶಿ ವಿನಾಯಕ ಭಟ್ ಮನವಿ ರೂಪದ ವರದಿಯನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಟಿ.ಎಸ್.ಹೆಗಡೆ, ಉಪಾಧ್ಯಕ್ಷರಾದ ಐ.ವಿ.ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಂಜುನಾಥ ನಾಯ್ಕ, ಶಾಲಾ ಮುಖ್ಯಶಿಕ್ಷಕರಾಧ ಗಣಪತಿ ಗೌಡ, ಉಪನ್ಯಾಸಕಿ ಯಶೋಧಾ ನಾಯ್ಕ, ವಿನಾಯಕ ಭಟ್ ಉಪಸ್ಥಿತರಿದ್ದರು.
Leave a Comment