ಹೊನ್ನಾವರ:
ಕನ್ನಡಾಭಿಮಾನಿ ಸಂಘ ಹೊನ್ನಾವರ ಇವರ ಬಹುನಿರೀಕ್ಷೆಯ ಕಾರ್ಯಕ್ರಮವಾದ ಕರಾವಳಿ ಕನ್ನಡ ಕೋಗಿಲೆ ಸಂಗೀತ ಸ್ಪರ್ದೆಯ ದ್ವನಿಪರೀಕ್ಷೆಗೆ ಇಂದು ಪಟ್ಟಣದ ಶಾರದಾಂಭ ಸಭಾಗೃಹದಲ್ಲಿ ಚಾಲನೆ ನೀಡಲಾಯಿತು.
ಜಿಲ್ಲೆಯ ಪ್ರತಿಭೆಗಳಿಗೊಂದು ಮಹಾ ವೇದಿಕೆಯನ್ನು ಒದಗಿಸಿ ಅವರಲ್ಲಿರುವ ಸೂಕ್ತ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಹೆಜ್ಜೆಯಿಡುತ್ತಿರುವ ತಾಲೂಕಾ ಕನ್ನಡಾಭಿಮಾನಿ ಸಂಘ ತನ್ನ 24 ನೇ ವರ್ಷದ ಕನ್ನಡ ಹಬ್ಬದ ಆಚರಣೆಯಲ್ಲಿ ಹಲವಾರು ಸ್ಪರ್ದೆಗಳನ್ನು ಸಂಘಟಿಸಿದ್ದು ವಿಶೇಷವಾಗಿ ಈ ವರ್ಷ ಕರಾವಳಿಯ ಎಲೆಯ ಮರೆಯಲ್ಲಿರುವ ಸಂಗೀತ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಲು ಮುಂದಾಗಿದ್ದು ಜಿಲ್ಲೆಯ ಆರು ತಾಲೂಕುಗಳಲ್ಲಿ ನಡೆಯುವ ದ್ವನಿ ಪರೀಕ್ಷೆಗೆ ಹೊನ್ನಾವರದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ತಾಲೂಕಿನ ಎರಡು ಪ್ರಮುಖ ಸಂಸ್ತೆಯಾದ ರೋಟರಿ ಹಾಗೂ ಲಯನ್ಸ ಅಧ್ಯಕ್ಷರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ರೋಟರಿ ಅಧ್ಯಕ್ಷರಾದ ಡಾಕ್ಟರ್.ರಂಗನಾಥ ಪೂಜಾರಿ, ಮಾತನಾಡಿ ಕಡಿಮೆ ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದೀರಿ ಮುಂದೆ ನಡೆಯುವ ಮಹಾ ವೇದಿಕೆಯಲ್ಲಿ ಜಿಲ್ಲೆಯ ಪ್ರತಿಭಾವಂತರಿಗೆ ವೇದಿಕೆಯನ್ನು ಕಲ್ಪಿಸುತ್ತಿದ್ದೀರಿ ಎಂದು ಹರ್ಷ ವ್ಯಕ್ತಪಡಿಸಿದರು.
ಲಯನ್ಸ್ ಅಧ್ಯಕ್ಷರಾದ ರಾಜೇಶ ಸಾಲೇಹಿತ್ತಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು
ಕಾರ್ಯಕ್ರಮದ ಅಧ್ಯಕ್ಷರೂ ಸಂಘದ ಅಧ್ಯಕ್ಷರೂ ಆದ ಸತ್ಯ ಜಾವಗಲ್ ಮಾತನಾಡಿ ಇಂದಿನಿಂದ ಜಿಲ್ಲೆಯ 6 ಕಡೆಗಳಲ್ಲಿ ಧ್ವನಿ ಪರೀಕ್ಷೆ ನಡೆಯಲಿದೆ . ಜಿಲ್ಲೆಯ ಪ್ರತಿಭೆಗಳನ್ನು ಗುರುತಿಸುವ ಸದುದ್ದೇಶ ಇದಾಗಿದ್ದು ನವೆಂಬರ್ 3ರಂದು ಮಹಾ ವೇದಕೆಯಲ್ಲಿ ಅಂತಿಮ ಹಣಾಹಣೆ ಸ್ಪರ್ದೇ ಜರುಗಲಿದೆ. ಕನ್ನಡಾಭಿಮಾನಿ ಸಂಘದ ಕನ್ನಡ ಹಬ್ಬದ ಯಶಸ್ಸಿಗೆ ಎಲ್ಲರ ಸಹಕಾರಿಸುವಂತೆ ಕೋರಿದರು.
ಪ್ರಾಸ್ತವಿಕವಾಗಿ À ಸಂಘದ ಗೌರವಾಧ್ಯಕ್ಷರಾದ ಎಸ್.ಜೆ.ಕೈರಾನ್ ಅವರು ಸ್ಪರ್ದಾಳುಗಳಿಗೆ ಕಿವಿಮಾತನ್ನು ಹೇಳಿ ಸ್ಪರ್ದೆಯಲ್ಲಿ ಎಲ್ಲರೂ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಹಾಗಂತ ಗೆಲ್ಲದವರು ಸೋತವರು ಎಂದರ್ಥವಲ್ಲ ಆದಿನದ ಆ ಕ್ಷಣದಲ್ಲಿ ಗೆದ್ದ ಸ್ಪರ್ದಿಗಿಂತ ಕೊಂಚ ಕಡಿಮೆ ಪ್ರದರ್ಶನ ನೀಡಿದವರಾಗಿರುತ್ತಾರೆ ಅವಕಾಶ ಎಲ್ಲರಿಗೂ ತೆರೆದುಕೊಳ್ಳುತ್ತದೆ ಪ್ರಯತ್ನ ನಿರಂತರವಾಗಿರಲಿ ಎಂದು ಆತ್ಮಿಯವಾಗಿ ಎಲ್ಲರನ್ನೂ ಸ್ವಾಗತಿಸಿದರು.
. ವೇದಿಕೆಯಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಉದಯರಾಜ ಮೇಸ್ತ, ರಾಘವೇಂದ್ರ ಹೊನ್ನಾವರ, ಅಶೋಕ ಪಾಲೇಕರ್, ಕಾರ್ಯಾಧ್ಯಕ್ಷರಾದ ಸುಧಾಕರ ಹೊನ್ನಾವರ ಉಪಸ್ಥಿತರಿದ್ದರು.
23 ಸ್ಪರ್ದಾಳುಗಳು ದ್ವನಿ ಪರೀಕ್ಷೆಯಲ್ಲಿ ಭಾಗವಹಿಸಿದ್ದು ದ್ವನಿ ಪರೀಕ್ಷೆಯನ್ನು ಅಶೋಕ ಪಾಲೇಕರ ಅವರು ನಡೆಸಿಕೊಟ್ಟರು. ಕುಮಾರಿ ಸಾನ್ವಿ ರಾವ್ ಭರತನಾಟ್ಯದ ಮೂಲಕ ಶುಭಾರಂಭವಾದ ಕಾರ್ಯಕ್ರಮವನ್ನು ಭಾಸ್ಕರ್ ತಾಂಡೇಲ್ ವಂದಿಸಿ, ಉಪನ್ಯಾಸಕರಾದ ಡಾ.ರಾಜು ಮಾಳಗಿಮನಿಯವರು ನಿರೂಪಿಸಿದರು.
Leave a Comment