ಹೊನ್ನಾವರ: ಪಟ್ಟಣದ ಎಮ್ಮೆಪೈಲ್ ಬಳಿ ರಸ್ತೆ ಅಪಘಾತ ಸಂಭವಿಸಿ ಉದಯೋನ್ಮುಖ ಕಲಾವಿದೆ ಭರತನಾಟ್ಯ ಶಿಕ್ಷಕಿ ಕಡತೋಕಾದ ಸೌಮ್ಯಾ ಭಟ್ ಮೃತಪಟ್ಟಿದ್ದಾರೆ.
ಸ್ಕೂಟಿಯಲ್ಲಿ ಕಡತೋಕಾದಿಂದ ಹೊನ್ನಾವರಕ್ಕೆ ಬರುತ್ತಿರುವಾಗ ಎದುರಿನಿಂದ ವೇಗವಾಗಿ ಬಂದ ಸಾರಿಗೆ ಸಂಸ್ಥೆಯ ಬಸ್ಗೆ ಡಿಕ್ಕಿ ಹೊಡೆದಿದ್ದು ತಲೆಗೆ ತೀವ್ರವಾಗಿ ಪೆಟ್ಟುಬಿದ್ದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿಯೇ ಪ್ರಾಣಪಕ್ಷಿ ಹಾರಿ ಹೋಗಿತ್ತು. ಭರತನಾಟ್ಯ ಕಲಾವಿದೆಯಾಗಿ ಅಪಾರ ಅಭಿಮಾನಿ ವೃಂದವನ್ನು ನಾಟ್ಯ ಶಿಕ್ಷಕಿಯಾಗಿ ನೂರಾರು ಶಿಷ್ಯರನ್ನು ಹೊಂದಿದ್ದ ಕಲಾವಿದೆಯ ಅಕಾಲಿಕ ಅಗಲಿಕೆಗೆ ಹಿತೈಷಿಗಳು ಶಿಷ್ಯವರ್ಗದವರು ಕಂಬನಿ ಮಿಡಿದಿದ್ದಾರೆ.
Leave a Comment