• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶಿವಪ್ರತಿಷ್ಠಾನದ ಕಾರ್ಯ ಶ್ಲಾಘನೀಯ – ದುರ್ಗಾದೌಡ‌ ಧಾರ್ಮಿಕ‌ ಕಾರ್ಯಕ್ರಮದ ಬಗ್ಗೆ‌‌ ಸಚಿವರಿಂದ ಪ್ರಶಂಸೆ 8 ದಿನ ಪೂರೈಸಿದ ದೌಡ

October 17, 2018 by Yogaraj SK Leave a Comment

ಹಳಿಯಾಳ: ಹಳಿಯಾಳದ ಶಿವಪ್ರತಿಷ್ಠಾನ ಹಾಗೂ ದುರ್ಗಾದೌಡ ಸಮಿತಿಯಿಂದ ನಡೆಸಲಾಗುತ್ತಿರುವ ಧಾರ್ಮಿಕ ಕಾರ್ಯರ್ಯಕ್ರಮ “ದುರ್ಗಾದೌಡ-ಧಾರ್ಮಿಕ ನಡಿಗೆ” ಅಭೂತಪೂರ್ವವಾಗಿದ್ದು, ಹೀಗೆ ತನ್ನ ವೈಭವವನ್ನು ಉಳಿಸಿಕೊಂಡು ಮುಂದುವರೆಯಲಿ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹಾರೈಸಿದ್ದಾರೆ.

watermarked 17 hly 1
ದಿ.10 ನವರಾತ್ರಿಯ ಆರಂಭದಲ್ಲಿ ಪ್ರಾರಂಭವಾದ ದುರ್ಗಾದೌಡ ಬುಧವಾರ 8ನೇ ದಿನಕ್ಕೆ ಕಾಲಿಟ್ಟಿದ್ದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರು ದೌಡನಲ್ಲಿ ಪಾಲ್ಗೊಂಡು ಪ್ರತಿದಿನ ಬೆಳಗಿನ ಜಾವ ಸಾವಿರಾರು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದನ್ನು ಕಂಡು ಸಂತೋಷ ವ್ಯಕ್ತಪಡಿಸಿ ಮಾಧ್ಯಮದವರೊಂದಿಗೆ ಮಾತನಾಡಿ ಶಿವಪ್ರತಿಷ್ಠಾನ, ದುರ್ಗಾದೌಡ ಸಮೀತಿಗೆ ಯಶಸ್ವಿ ಧಾರ್ಮಿಕ ಕಾರ್ಯಕ್ರಮ ಆಯೋಜನೆಗೆ ಅಭಿನಂದನೆ ಸಲ್ಲಿಸಿದರು.

watermarked 17 hly 3
ಬುಧವಾರ ಪಟ್ಟಣದ ಗುತ್ತಿಗೇರಿ, ಗೌಳಿಗಲ್ಲಿಯಲ್ಲಿರುವ ದುರ್ಗಾದೇವಿ ದೇವಸ್ಥಾನದಿಂದ ಪ್ರಾರಂಭವಾದ ದೌಡ ತಾನಾಜಿ ಗಲ್ಲಿ, ಕುಂಬಾರಗಲ್ಲಿ, ಶಿವಾಜಿ ಗಲ್ಲಿ, ಬ್ರಾಹ್ಮಣಗಲ್ಲಿಯ ಮೂಲಕ ಪ್ರಸಿದ್ದ ತುಳಜಾಭವಾನಿ ದೇವಸ್ಥಾನಕ್ಕೆ ತಲುಪಿತು. 9ನೇ ದಿನ ಗುರುವಾರ ಕೊನೆಯ ದೌಡ ನಡೆಯಲಿದ್ದು ತುಳಜಾಭವಾನಿ ದೇವಸ್ಥಾನದಿಂದ ಪ್ರಾರಂಭವಾಗಿ ಶೆಟ್ಟಿಗಲ್ಲಿ, ಕಿಲ್ಲಾ ಪ್ರದೇಶ, ದೇಸಾಯಿಗಲ್ಲಿಯ ಮೂಲಕ ಹಳಿಯಾಳ ಗ್ರಾಮದೇವಿ ಉಡಚಮ್ಮಾ ದೇವಿ ದೇವಸ್ಥಾನಕ್ಕೆ ಆಗಮಿಸಿ ಸಮಾರೋಪವಾಗಲಿದೆ. ಮಂಗಳೂರಿನ ಚೈತ್ರಾ ಕುಂದಾಪುರ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದು ಹಲವು ಗಣ್ಯರು, ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

watermarked IMG 20181017 WA0186
ಬುಧವಾರ ಕುಂಬಾರಗಲ್ಲಿಯಲ್ಲಿ ಶಿವಶರಣರು ಹಾಗೂ ನವದುರ್ಗೆಯರ ಛದ್ಮವೇಷದಲ್ಲಿ ಮಕ್ಕಳು ಕಣ್ಮನ ಸೆಳೆದರು. ಬ್ರಾಹ್ಮಣಗಲ್ಲಿಯಲ್ಲಿ ಗೋಮಾತೆಯ ರಕ್ಷಣೆಯ ಕುರಿತು ಜಾಗೃತಿ ಸಾರಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಪ್ರತಿದಿನ ಆಯಾ ಭಾಗದ ಜನ ರಾತ್ರಿಯಿಡಿ ತಮ್ಮ ಬಡಾವಣೆಗಳನ್ನು ಹಲವು ಅಲಂಕಾರಗಳಿಂದ, ರಂಗೋಲಿಗಳಿಂದ ಶೃಂಗರಿಸುವುದು ಹಾಗೂ ಮಕ್ಕಳು ವಿವಿಧ ಮಹನೀಯರು, ದೇವತೆಗಳ ಛದ್ಮವೇಷದಲ್ಲಿ ದುರ್ಗಾದೌಡನ್ನು ಸ್ವಾಗತಿಸುವುದು ವಿಶೇಷವಾಗಿದೆ.

watermarked 17 hly 02 watermarked IMG 20181017 WA0185 watermarked IMG 20181017 WA0184 watermarked IMG 20181017 WA0179 watermarked IMG 20181017 WA0180 watermarked IMG 20181017 WA0181 watermarked IMG 20181017 WA0182 watermarked IMG 20181017 WA0183watermarked 17 hly 04

 

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Trending Tagged With: 8 ದಿನ ಪೂರೈಸಿದ ದೌಡ, Deshpande visit Durga doud, RV Deshpande visit Durga doud, ಆಯೋಜನೆ, ಕಣ್ಮನ, ಗಣ್ಯರು, ಚೈತ್ರಾ ಕುಂದಾಪುರ ಕಾರ್ಯಕ್ರಮದಲ್ಲಿ, ಛದ್ಮವೇಷ, ದಿಕ್ಸೂಚಿ ಭಾಷಣ, ದುರ್ಗಾದೌಡ‌ ಧಾರ್ಮಿಕ‌ ಕಾರ್ಯಕ್ರಮ, ದುರ್ಗಾದೌಡ ಧಾರ್ಮಿಕ ನಡಿಗೆ, ದುರ್ಗಾದೌಡ ಸಮೀತಿಗೆ, ನವದುರ್ಗೆಯರ, ಬಗ್ಗೆ, ಮಕ್ಕಳು, ಯಶಸ್ವಿ ಧಾರ್ಮಿಕ ಕಾರ್ಯಕ್ರಮ, ವೈಭವವನ್ನು ಉಳಿಸಿಕೊಂಡು, ಶಿವಪ್ರತಿಷ್ಠಾನ, ಶಿವಪ್ರತಿಷ್ಠಾನದ ಕಾರ್ಯ, ಶಿವಶರಣರು, ಶ್ಲಾಘನೀಯ, ಸಚಿವರಿಂದ ಪ್ರಶಂಸೆ, ಸ್ವಾಮೀಜಿಗಳು

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...