• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿಶ್ವಕ್ಕೆ ಅಜರಾಮರ ನಾಯಕನಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳನ್ನು ಗಲ್ಲಿಗಲ್ಲಿಗಳಲ್ಲಿ ಪ್ರತಿಷ್ಠಾಪಿಸುತ್ತೇವೆ ತಾಕತ್ತಿದ್ದರೇ ತಡೆಯಿರಿ – ಚೈತ್ರಾ ಕುಂದಾಪುರ,9 ದಿನಗಳ ಕಾಲ ನಡೆದ ದುರ್ಗಾದೌಡ ಸಮಾರೋಪ

October 19, 2018 by Yogaraj SK Leave a Comment

ಹಳಿಯಾಳ: ಅಪ್ರತಿಮ ರಾಷ್ಟ್ರಭಕ್ತ, ಜಗತ್ತಿಗೆ ಇಂದಿಗೂ ಅಜರಾಮರ ನಾಯಕನಾಗಿ ಉಳಿದಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳನ್ನು ಗಲ್ಲಿ-ಗಲ್ಲಿಗಳಲ್ಲಿ ಸ್ಥಾಪನೆ ಮಾಡುತ್ತೇವೆ, ತಾಕತ್ತಿದ್ದರೇ ತಡೆದು ನೋಡಿ ಎಂದು ಸನಾತನ ಹಿಂದೂ ಧರ್ಮ ಪ್ರಚಾರಕಿ ಚೈತ್ರಾ ಕುಂದಾಪುರ ಸವಾಲ್ ಹಾಕಿದರು.
ಶೀವಪ್ರತಿಷ್ಠಾನ ಹಾಗೂ ವಿವಿಧ ಹಿಂದೂ ಸಂಘಟನೆಗಳಿಂದ ಹಳಿಯಾಳ ಪಟ್ಟಣದಲ್ಲಿ ನವರಾತ್ರಿಯ 9ದಿನಗಳ ಕಾಲ ನಡೆದ ದುರ್ಗಾದೌಡ ಧಾರ್ಮಿಕ ನಡಿಗೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

durga doud - samaropa samaranmba
ಭಾರತ ದೇಶ ವಿಶ್ವಗುರುವಾಗಲು ಹೊರಟಿದ್ದು ಹಿಂದೂತ್ವವೇ ಎವರ್‍ಗ್ರೀನ್ ಟ್ರೆಂಡ್ ಆಗಲಿದೆ ಎಂದು ಅಭಿಪ್ರಾಯಪಟ್ಟ ಚೈತ್ರಾ ಶಿವಾಜಿ ಮಹಾರಾಜರ ರಾಷ್ಟ್ರಭಕ್ತಿಯನ್ನು ಎಲ್ಲರೂ ಅನುಸರಿಸಬೇಕೆಂದರು.
ದೇಶದಲ್ಲಿನ ಮೇಕಾಲೆ ಶಿಕ್ಷಣ ಪದ್ದತಿ ಬದಲಾಗಬೇಕಿದೆ ಎಂದ ಅವರು ಹಿಂದೂಗಳಿಗೆ ಇನ್ನೂ ಸ್ವಾತಂತ್ರ್ಯ ದೊರಕಿಲ್ಲ ತಮ್ಮ ದೇವತೆಗಳ ಪೂಜನೆಗೆ ಪೋಲಿಸ್ ಇಲಾಖೆಯಿಂದ ಪರವಾನಿಗೆ ಪಡೆಯಲು ಅಲೆದಾಡುವ ದುರ್ದೈವ ಹಿಂದೂಗಳಿಗೆ ಇದೆ. ನಿಜವಾದ ಸ್ವಾತಂತ್ರ್ಯ, ಹಿಂದವಿ ಸ್ವರಾಜ್ಯ ಸ್ಥಾಪನೆಗೆ ಹಾಗೂ ಭಾರತಕ್ಕೆ ಅಂಟಿರುವ ಮತಾಂತರ ಎಂಬ ದೊಡ್ಡ ಪಿಡುಗನ್ನು ಹೋಗಲಾಡಿಸಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಕರೆ ನೀಡಿದರು.

durga doud - samaropa samaranmba
ತಾಯಿ ದುರ್ಗಾಮಾತೆ ಹಾಗೂ ಭಾರತಾಂಬೆಯನ್ನು ಒಂದೆ ಎಂದು ನಂಬುವ ಹಿಂದೂಗಳು, ನಾವು ಹಿಂದೂ ಧರ್ಮದಲ್ಲಿ ಹೆಣ್ಣನ್ನು ಸಮಾನವಾಗಿ ಕಾಣುವುದಿಲ್ಲ ಬದಲಾಗಿ ಸರ್ವಶ್ರೇಷ್ಠಳನ್ನಾಗಿ ಪೂಜಿಸುತ್ತೇವೆ. ಹಿಂದೂ ಧರ್ಮಕ್ಕೆ ಇಂದಿಗೂ ಶ್ರೀರಾಮನೆ ಆದರ್ಶ ಪುರುಷನಾಗಿದ್ದಾನೆ. ತಾಜಮಹಲ್ ಪ್ರೇಮದ ಕುರುಹಲ್ಲ ಬದಲಾಗಿ ಜಗತ್ತಿನ ಯಾವ ವಿಜ್ಞಾನಿಯಿಂದಲೂ ಭೇದಿಸಲಾಗದ ಶ್ರೀರಾಮ ಸೇತು ಅಮರ ಪ್ರೇಮದ ಕುರುಹು ಎಂದು ಪ್ರತಿಪಾದಿಸಿದರು.
ಹೆಣ್ಣು ಮಕ್ಕಳಿಗೆ ಪವಿತ್ರ ಶಬರಿಮಲೆ ಪ್ರವೇಶದ ಕುರಿತು ತೀರ್ಪು ನೀಡಿರುವುದು ಹಿಂದೂ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಸುಪ್ರಿಂಕೊರ್ಟ ಹೆಣ್ಣು ಮಕ್ಕಳಿಗೆ ಮಸೀದಿ ಪ್ರವೇಶಕ್ಕೆ ತೀರ್ಪು ನೀಡಲಿ ಎಂದರು.

watermarked 19 hly 3
ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ ಅಲ್ಲದೇ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಧರ್ಮವನ್ನು ಒಡೆಯುವ ಹಾಗೂ ಧರ್ಮದ ಪವಿತ್ರತೆ ಹಾಳು ಮಾಡುವ ದೊಡ್ಡ ಷಡ್ಯಂತ್ರ ನಡೆದಿದ್ದು ಹಿಂದೂಗಳು ಇದನ್ನು ಅರಿತು “ಸರ್ವೇ ಜನಾ ಸುಖಿನೋ ಭವಂತು” ಎನ್ನುವ ಧರ್ಮವನ್ನು ಒಗ್ಗಟ್ಟಾಗಿ ರಕ್ಷಿಸುವ ಕಾರ್ಯ ಮಾಡಬೇಕಿದೆ ಎಂದು ಕರೆ ನೀಡಿದರು.
ಶೀವಪ್ರತಿಷ್ಠಾನದ ಪ್ರಮುಖ ರಾಜು ಧೂಳಿ ಮಾತನಾಡಿ 7 ವರ್ಷಗಳ ಹಿಂದೆ ಕೇವಲ 20 ಜನರಿಂದ ಆರಂಭವಾದ ದುರ್ಗಾದೌಡ ಧಾರ್ಮಿಕ ನಡಿಗೆ ಇಂದು ಸಹಸ್ರಾರು ಜನ ಪಾಲ್ಗೊಳ್ಳುವ ಮೂಲಕ ಯಶಸ್ವಿಯಾಗಿ ಸಂಪನ್ನಗೊಂಡಿದ್ದು 9ದಿನಗಳ ಕಾಲ ದುರ್ಗಾದೌಡಗಾಗಿ ಶ್ರಮಿಸಿದ ಪಟ್ಟಣದ ಎಲ್ಲ ಬಡಾವಣೆ ಜನರಿಗೆ ಧನ್ಯವಾದ ಅರ್ಪಿಸಿದ ಧೂಳಿ ಮತಾಂತರ ಚಟುವಟಿಕೆಗಳು ತಾಲೂಕಿನಲ್ಲಿ ಹೆಚ್ಚಿದ್ದು ಇದರ ವಿರುದ್ದ ಎಲ್ಲರೂ ಸಂಘಟಿತರಾಗಿ ಹೋರಾಡಬೇಕಿದೆ ಎಂದು ಕರೆ ನೀಡಿದರು.

durga doud - samaropa samaranmba
ಕೊನೆಯ ದಿವಸ ಪಟ್ಟಣದ ತುಳಜಾಭವಾನಿ ದೇವಸ್ಥಾನದಿಂದ ಹೋರಟ ದುರ್ಗಾದೌಡ ಶೆಟ್ಟಿಗಲ್ಲಿ, ಕಿಲ್ಲಾಪ್ರದೇಶ, ಬಸವನಗಲ್ಲಿ, ದೇಸಾಯಿಗಲ್ಲಿಯಲ್ಲಿ ಸಾಗಿ ಗ್ರಾಮದೇವಿ ಉಡಚಮ್ಮಾ ದೇವಸ್ಥಾನಕ್ಕೆ ತಲುಪಿ ಕಾರ್ಯಕ್ರಮ ಸಮಾರೋಪಗೊಂಡಿತು. ಗೋಮಾತೆ, ಶಿವಾಜಿ ಮಹಾರಾಜರ, ಸ್ವಾಮಿ ಅಯ್ಯಪ್ಪನ 18 ಮೆಟ್ಟಿಲುಗಳು ಇತರೇ ಸ್ತಬ್ದಚಿತ್ರಗಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಶನಿಧಾಮದ ಸ್ವಾಮಿ ಮೇಘನಾಥಜಿ ಹಾಗೂ ಪ್ರಮುಖರು ವೇದಿಕೆಯ ಮೇಲಿದ್ದರು. ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

 durga doud - samaropa samaranmba  durga doud - samaropa samaranmba watermarked IMG 20181019 WA0149 watermarked IMG 20181019 WA0148  durga doud - samaropa samaranmba  durga doud - samaropa samaranmba  durga doud - samaropa samaranmba  durga doud - samaropa samaranmba  durga doud - samaropa samaranmba  durga doud - samaropa samaranmba  durga doud - samaropa samaranmba watermarked IMG 20181019 WA0145 watermarked IMG 20181019 WA0131 watermarked IMG 20181019 WA0130 watermarked IMG 20181019 WA0129 watermarked IMG 20181019 WA0128 watermarked 19 hly 2

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: 9 ದಿನಗಳ ಕಾಲ ನಡೆದ, ಅಂತರಾಷ್ಟ್ರೀಯ ಮಟ್ಟದಲ್ಲಿ, ಅಪ್ರತಿಮ ರಾಷ್ಟ್ರಭಕ್ತ, ಕಿಲ್ಲಾಪ್ರದೇಶ, ಕುರಿತು ತೀರ್ಪು, ಗಲ್ಲಿಗಲ್ಲಿಗಳಲ್ಲಿ, ಚೈತ್ರಾ ಕುಂದಾಪುರ, ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ, ಜಗತ್ತಿ, ತಾಕತ್ತಿದ್ದರೇ ತಡೆಯಿರಿ, ದುರ್ಗಾದೌಡ ಧಾರ್ಮಿಕ ನಡಿಗೆ, ದುರ್ಗಾದೌಡ ಸಮಾರೋಪ, ದುರ್ಗಾಮಾತೆ, ದೇವತೆಗಳ ಪೂಜನೆಗೆ, ದೇಸಾಯಿ, ದೊಡ್ಡ ಪಿಡು, ದೌರ್ಜನ್ಯ, ಧರ್ಮದ ಪವಿತ್ರತೆ ಹಾಳು ಮಾಡುವ ದೊಡ್ಡ ಷಡ್ಯಂತ್ರ, ಧರ್ಮವನ್ನು ಒಗ್ಗಟ್ಟಾಗಿ ರಕ್ಷಿಸುವ ಕಾರ್ಯ, ಧರ್ಮವನ್ನು ಒಡೆಯುವ, ಪಡೆಯಲು ಅಲೆದಾಡುವ ದುರ್ದೈವ, ಪವಿತ್ರ ಶಬರಿಮಲೆ ಪ್ರವೇಶ, ಪೋಲಿಸ್ ಇಲಾಖೆಯಿಂದ, ಪ್ರತಿಷ್ಠಾಪಿಸುತ್ತೇವೆ, ಬಸವನಗಲ್ಲಿ, ಭಾರತಕ್ಕೆ ಅಂಟಿರುವ ಮತಾಂತರ, ಭಾರತಾಂಬೆ, ಮಹಾರಾಜರ ಮೂರ್ತಿ, ವಿವಿಧ ಹಿಂದೂ ಸಂಘಟನೆ, ವಿಶ್ವಕ್ಕೆ ಅಜರಾಮರ ನಾಯಕನಾಗಿರುವ ಛತ್ರಪತಿ ಶಿವಾಜಿ, ಶಿವಾಜಿ ಮಹಾರಾಜರ ರಾಷ್ಟ್ರಭಕ್ತಿ, ಶೀವಪ್ರತಿಷ್ಠಾನ, ಸರ್ವೇ ಜನಾ ಸುಖಿನೋ ಭವಂತು, ಹಿಂದೂ ಧರ್ಮ ಪ್ರಚಾರಕಿ ಚೈತ್ರಾ ಕುಂದಾಪುರ, ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ, ಹಿಂದೂಗಳಿಗೆ ಇನ್ನೂ ಸ್ವಾತಂತ್ರ್ಯ ದೊರಕಿಲ್ಲ, ಹಿಂದೂತ್ವವೇ ಎವರ್‍ಗ್ರೀನ್ ಟ್ರೆಂಡ್

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...