ಹೊನ್ನಾವರ: “ಸ್ವಯಂ ಸೇವಕನು ಸಂಘ ಕಲಿಸುವ ಗುಣದಿಂದ ಗುರುತಿಸಲ್ಪಡುತ್ತಾನೆಯೇ ಹೊರತೂ ಗಣವೇಶದಿಂದ ಅಲ್ಲ. ಸಾಮರಸ್ಯ ಸಂಘದ ಸಮರ್ಪಣೆಭಾವವನ್ನು ಎತ್ತಿತೋರಿಸುತ್ತದೆ.”ಸಂಘಶಕ್ತಿ ಕಲೌಯುಗೇ” ಎನ್ನುವಂತೆ ಕಲಿಯುಗದಲ್ಲಿ ಸಂಘಶಕ್ತಿಯ ಮುಂದೆ ಯಾವ ದುಷ್ಟಶಕ್ತಿಗಳು ನಿಲ್ಲದು” ಎಂದು ಕುಟುಂಬ ಪ್ರಭೋಧಿನಿಯ ಸಂಘದ ಹಿರಿಯ ಪ್ರಚಾರಕರಾದ ಸು. ರಾಮಣ್ಣ ಅಭಿಪ್ರಾಯಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿರಶಿ ವಿಭಾಗದ ವಿಲಂಬಿ ಸಂವತ್ಸರದ ಪ್ರಾಥಮಿಕ ಶಿಕ್ಷಾ ವರ್ಗ ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ನಡೆದÀ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. “ಸಂಘದ ವರ್ಗವು ಕಾರ್ಯಕರ್ತರನ್ನು ನಿರ್ಮಿಸುವ ನೈಪುಣ್ಯತೆಯನ್ನು ಪಡೆಯುತ್ತಾರೆ. ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ಯಲೆಬೇಕಾದ ಅನಿವಾರ್ಯತೆ , ಜವಾಬ್ದಾರಿ ಸಂಘದ ಮೇಲಿದೆ. ನಾವು ಭಾರತಮಾತೆಯ ಋಣತಿರಿಸಬೇಕಾಗಿz”É ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಸೀತಾರಾಮ ನಾಯ್ಕ ಮಾತನಾಡಿ ಸ್ವಯಂ ಸೇವೆಗೆ ಸದಾ ಸಿದ್ದ ಎಂಬ ಅಂಕಿತನಾಮದೊಂದಿಗೆ ಆರ್ಎಸ್ಎಸ್ ನಡೆಯುತ್ತಿದೆ. ಇಲ್ಲಿ ಉಚ್ಚ-ನೀಚ,ಸ್ಪರ್ಶ-ಅಸ್ಪರ್ಶ,ಜಾತಿ-ಭೇಧ ಭಾವವಿಲ್ಲ. ಸ್ವಯಂ ಸೇವಕರು ಸೈನಿಕರಿದ್ದಂತೆ. ಭಾರತದಲ್ಲಿ ನಡೆದ ಪ್ರಕೃತಿ ವಿಕೋಪಗಳಲ್ಲಿ ಆರ್ಎಸ್ಎಸ್ ಸದಸ್ಯರು ಸಹಾಯಹಸ್ತ ನೀಡಿ ಶೌರ್ಯ ಮೆರೆದಿದ್ದಾರೆ. ಒಂದು ಸಂಘವು 3-4 ವರ್ಷ ಕಳೆಯುವುದೇ ಹೆಚ್ಚು ಅಂತಹದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು 93 ವರ್ಷಗಳಿಂದ ಸಾಗಿಬಂದು ವರ್ಷದಿಂದ ವರ್ಷಕ್ಕೆ ಬ್ರಹದಾಕಾರವಾಗಿ ಬೆಳೆದು ಇಂದು ಜಗತ್ತಿನ ಇತರೆಡೆಗಳಲ್ಲಿ ವ್ಯಾಪಿಸುತ್ತಿದೆ ಎಂದರು. ಇಂದಿನ ಯುವ ಜನತೆ ಸಾಮಾಜಿಕ ಜಾಲತಾಣಗಳ ಆಕ್ರಮಣಕ್ಕೆ ಒಳಗಾಗಿದ್ದಾರೆ,ಕೆಲವು ಮಾದ್ಯಮಗಳು ಆರ್ಎಸ್ಎಸ್ ದ್ಯೇಯೋದ್ದೇಶಗಳ ಬಗ್ಗೆ ತಪ್ಪಾಗಿ ಬಿಂಬಿಸುತ್ತಿದೆ. ಇಂತಹ ತಪ್ಪು ಗ್ರಹಿಕೆಗಳಿಗೆ ಯುವಕರು ಕಿವಿಗೊಡಬಾರದು. ಸಂಘ ಪರಿವಾರವು ಒಂದು ಕುಟುಂಬವಿದ್ದಂತೆ ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಸಂಘಚಾಲಕ ಹಿರಿಯರಾದ ಹನುಮಂತ ಶ್ಯಾನಭಾಗ ಕುಮಟಾ ಉಪಸ್ಥಿತರಿದ್ದರು.
ಪಟ್ಟಣದ ರಸ್ತೆಯ ಮಾರ್ಗದಲ್ಲಿ ಅಭಿಮಾನಿಗಳು ರಂಗೋಲಿ ಹಾಕಿ ಪುಷ್ಪಾರ್ಚನೆ ಮಾಡಿದರು. ಗಣವೇಶಧಾರಿ ಸ್ವಯಂಸೇವಕರಿಂದ ಪಟ್ಟಣದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು.ದತ್ತಾತ್ರೇಯ ಜಟ್ಟಿ ನಾಯ್ಕ ಹಾಗೂ ರಾಮಾ ನಾಗಪ್ಪ ಗೌಡ ಸಂಘದ ವರ್ಗಾಧಿಕಾರಿಯಾಗಿ ಮಾರ್ಗದರ್ಶನ ಮಾಡಿದರು. ಸಮಾರೋಪ ಸಮಾರಂಭದಲ್ಲಿ ಶಿಕ್ಷಾರ್ಥಿಗಳಿಂದ ವರ್ಗದಲ್ಲಿ ಕಲಿತ ಯೋಗಾಭ್ಯಾಸ , ದಂಡ ಪ್ರಯೋಗ, ಸೂರ್ಯ ನಮಸ್ಕಾರ ಪ್ರದರ್ಶನ ನಡೆಯಿತು.
Leave a Comment