ಹೊನ್ನಾವರ: ತಾಲೂಕು ಆಡಳಿತ, ತಾಲೂಕ ಪಂಚಾಯತ,ಪಟ್ಟಣ ಪಂಚಾಯತ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ 63ನೇ ಕನ್ನಡ ರಾಜ್ಯೂತ್ಸವ ಆಚರಣೆ ನಡೆಯಿತು.
ಪಟ್ಟಣದ ಪೋಲಿಸ್ ಪೆರೆಡ್ ಮೈದಾನದಲ್ಲಿ ಕನ್ನಡ ರಾಜ್ಯೂತ್ಸವ ಪ್ರಯುಕ್ತ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಪ.ಪಂ ಅಧ್ಯಕ್ಷೆÀ ರಾಜಶ್ರೀ ನಾಯ್ಕ ಮಾತನಾಡಿ ವಿವಿಧ ಹೋರಾಟಗಾರರ ಶ್ರಮದಿಂದ ನಮ್ಮ ರಾಜ್ಯ ಉದಯವಾಯಿತು. ಆ ಸುಸಂದರ್ಭದ ದಿನವನ್ನು ನಾವು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಬಂದಿದ್ದೇವೆ. ನಾಡು ನುಡಿ ನೆಲ ಜಲ ಭಾಷೆ ವಿಷಯದಲ್ಲಿ ಒಂದಾಗಿರೋಣ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ತಾಲೂಕ ದಂಡಾದಿಕಾರಿ ವಿ.ಆರ್.ಗೌಡ, ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಪ.ಪಂ ಸದಸ್ಯರಾದ ಜಮಿಲಾಬಾಯಿ ಶೇಖ್, ತಾರಾ ನಾಯ್ಕ, ಪೋಲಿಸ್ ವೃತ್ತನಿರಿಕ್ಷಕ ಚೆಲುವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಗೀರಿಶ ಪದಕಿ, ಕನ್ನಡಾಭಿಮಾನಿ ಸಂಘದ ಅಧ್ಯಕ್ಷ ಸತ್ಯಜಾವಗಲ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಆಕರ್ಷಕ ಮೆರವಣೆಗೆ ಪಟ್ಟಣದ ವಿವಿಧ ಭಾಗದಲ್ಲಿ ಸಂಚರಿಸಿತು. ಶÀರಾವತಿ ವೃತ್ತದ ಸಮೀಪ ಆಟೋ ರಿಕ್ಷಾ ಯೂನಿಯನ್ ಮತ್ತು ಟೆಂಪೊ ಯೂನಿಯನ್ ವತಿಯಿಂದ ಮೆರವಣೆಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಸಿಹಿ ವಿತರಿಸಿದರು. ಈ ಸಂದರ್ಭದಲ್ಲಿ ಯೂನಿಯನ್ ಅಧ್ಯಕ್ಷರಾದ ಶಿವರಾಜ ಮೇಸ್ತ ಹಾಗೂ ನಾಗರಾಜ ಯಾಜಿ ಯುನಿಯನ್ ಸದಸ್ಯರೊಂದಿಗೆ ಪಾಲ್ಗೊಂಡಿದ್ದರು.
Leave a Comment